
ಜಗತ್ಪ್ರಸಿದ್ಧ ಸೋಮನಾಥ ಮಂದಿರದ ಮೇಲೆ ಮೊಘಲರು ಮಾಡಿದ ಮೊದಲ ಆಕ್ರಮಣಕ್ಕೆ ೧ ಸಾವಿರ ವರ್ಷಗಳು ಪೂರ್ಣಗೊಂಡಿವೆ. ಈ ನಿಮಿತ್ತವಾಗಿ ‘ಸೋಮನಾಥ ಸ್ವಾಭಿಮಾನ ಪರ್ವ’ವನ್ನು ಆಯೋಜಿಸಲಾಗಿದೆ. ಈ ಸಂದರ್ಭದಲ್ಲಿ ಆಯೋಜಿಸಲಾದ ಕಾರ್ಯಕ್ರಮದಲ್ಲಿ ಪ್ರಧಾನಮಂತ್ರಿ ನರೇಂದ್ರ ಮೋದಿ ಅವರು ಮಂಡಿಸಿದ ವಿಚಾರಗಳು ಉಪಯುಕ್ತ ಮತ್ತು ಸಮರ್ಪಕವಾಗಿದ್ದವು. ‘ಸೋಮನಾಥ ಮಂದಿರವನ್ನು ನಾಶ ಮಾಡಲು ಅನೇಕ ಪ್ರಯತ್ನಗಳಾದವು; ಆದರೆ ಅದನ್ನು ನಾಶ ಮಾಡಲು ಯಾರಿಂದಲೂ ಸಾಧ್ಯವಾಗಲಿಲ್ಲ, ಆ ಮಂದಿರಕ್ಕೆ ಮತ್ತು ಶ್ರೀ ಸೋಮನಾಥನಲ್ಲಿ ಅಷ್ಟೊಂದು ಅದ್ಭುತ ಸಾಮರ್ಥ್ಯವಿದೆ’, ಎಂಬುದು ಅವರ ಭಾಷಣದ ಸಾರಾಂಶವಾಗಿತ್ತು. ದೇಶದ ಮೊದಲ ಪ್ರಧಾನಮಂತ್ರಿಯವರು ಈ ಮಂದಿರ ನಿರ್ಮಾಣವಾಗಬಾರದು ಎಂದು ಪ್ರಯತ್ನಿಸಿದರೆ, ಹಾಲಿ ಪ್ರಧಾನಮಂತ್ರಿಯವರು ಈ ಮಂದಿರದ ಬಗ್ಗೆ ಕೃತಜ್ಞತೆ ವ್ಯಕ್ತಪಡಿಸಿದರು. ವರ್ಷ ೧೦೨೬ ರಲ್ಲಿ ಸೋಮನಾಥ ಮಂದಿರದ ಮೇಲೆ ಮೊದಲ ಜಿಹಾದಿ ಆಕ್ರಮಣವಾಯಿತು. ಅಂದಿನಿಂದ ಇಂದಿನವರೆಗೆ, ಅಂದರೆ ೧ ಸಾವಿರ ವರ್ಷಗಳ ಈ ಮಂದಿರದ ಪಯಣವು ನಿಜಕ್ಕೂ ಬುದ್ಧಿಗೆ ನಿಲುಕದಂತದ್ದಾಗಿದೆ. ಇದರಿಂದ ಸನಾತನ ಧರ್ಮದ ಅವಿನಾಶತ್ವವು ಸಿದ್ಧವಾಗುತ್ತದೆ.
‘ದ್ವಾದಶ ಜ್ಯೋತಿರ್ಲಿಂಗ ಸ್ತೋತ್ರ’ದಲ್ಲಿ ಭಾರತದ ೧೨ ಜ್ಯೋತಿಲಿಂಗಗಳ ಉಲ್ಲೇಖವಿದೆ. ಅದರಲ್ಲಿ ‘ಸೌರಾಷ್ಟ್ರೇ ಸೋಮನಾಥಂ ಚ’, ಎಂದು ಆರಂಭದಲ್ಲೇ ಉಲ್ಲೇಖಿಸಲಾಗಿದೆ. ಅಂದರೆ ಜ್ಯೋತಿರ್ಲಿಂಗಗಳಲ್ಲಿ ಎಲ್ಲಕ್ಕಿಂತ ಮೊದಲು ಶ್ರೀ ಸೋಮನಾಥನನ್ನು ಸ್ಮರಿಸಲಾಗುತ್ತದೆ. ಅಂತಹ ಶಿವಲಿಂಗವಿರುವ ಮಂದಿರದ ಚೈತನ್ಯವನ್ನು ಮಹಾಪಾಪಿಗಳಿಗೆ ಹೇಗೆ ಸಹಿಸಲು ಸಾಧ್ಯ ? ಅದಕ್ಕಾಗಿಯೇ ಈ ಮಂದಿರದ ಮೇಲೆ ಆಕ್ರಮಣಗಳನ್ನು ನಡೆಸಿ ಅದನ್ನು ನಾಶ ಮಾಡಲು ಶತಪ್ರಯತ್ನಗಳನ್ನು ಮಾಡಲಾಯಿತು. ಔರಂಗಜೇಬ, ಗಜನಿ ಮುಂತಾದ ಆಕ್ರಮಣಕಾರರು ಎಷ್ಟು ಬಾರಿ ಈ ಮಂದಿರದ ಮೇಲೆ ಆಕ್ರಮಣ ಮಾಡಿದರೋ, ಅಷ್ಟೂ ಬಾರಿ ಅದು ಮತ್ತೆ ಅಷ್ಟೇ ವೈಭವದಿಂದ ಪುಟಿದೆದ್ದು ನಿಂತಿತು, ಇದು ನಿಜಕ್ಕೂ ಪವಾಡವೇ ಸರಿ. ಅಲ್ಲಿ ಸಾಕ್ಷಾತ್ ಭಗವಾನ ಶಿವನ ವಾಸವಿದೆ ಎಂಬುದಕ್ಕೆ ಇದಕ್ಕಿಂತ ದೊಡ್ಡ ಸಾಕ್ಷಿ ಇನ್ನಾವುದು ಬೇಕು ? ೩೧ ಅಕ್ಟೋಬರ್ ೧೯೪೭ ರಂದು ಅಂದಿನ ಕೇಂದ್ರ ಸಚಿವ ನ.ವಿ. ಗಾಡಗೀಳರು ಮತ್ತು ಗೃಹ ಸಚಿವ ಸರ್ದಾರ ವಲ್ಲಭಭಾಯ ಪಟೇಲರು ಭಗ್ನಾವಸ್ಥೆಯಲ್ಲಿದ್ದ ಸೋಮನಾಥ ಮಂದಿರಕ್ಕೆ ಭೇಟಿ ನೀಡಿ, ಮಂದಿರವನ್ನು ಪುನರ್ ನಿರ್ಮಿಸುವುದಾಗಿ ಘೋಷಿಸಿದರು. ಇದಕ್ಕೆ ಅಂದಿನ ಹಿಂದೂದ್ವೇಷಿ ಪ್ರಧಾನಿ ಜವಾಹರಲಾಲ ನೆಹರೂ ಅವರು ಸಾಧ್ಯವಿರುವಷ್ಟು ವಿರೋಧ ವ್ಯಕ್ತಪಡಿಸಿದರು. ಆದರೂ ಈ ಮಂದಿರವು ಮತ್ತೆ ಗಾಂಭೀರ್ಯದಿಂದ ಎದ್ದು ನಿಂತಿತು. ಪಾಕಿಸ್ತಾನದ ಅಂದಿನ ವಿದೇಶಾಂಗ ಸಚಿವ ಶಾ ಮಹಮೂದ್ ಖುರೇಷಿ ಅವರು ವರ್ಷ ೨೦೨೧ ರಲ್ಲಿ ‘ನಾನು ಮಹಮ್ಮದ್ ಗಜನಿಯ ವಂಶಜನಾದುದರಿಂದ ಮತ್ತೆ ಸೋಮನಾಥ ಮಂದಿರವನ್ನು ಧ್ವಂಸಗೊಳಿಸುತ್ತೇನೆ’, ಎಂದು ವಿಷ ಕಾರಿದ್ದರು. ಅದರ ಬೆನ್ನಲ್ಲೇ ವರ್ಷ ೨೦೨೩ ರಲ್ಲಿ ‘ಆಲ್ ಇಂಡಿಯಾ ಇಮಾಮ್ ಅಸೋಸಿಯೇಷನ್’ ಅಧ್ಯಕ್ಷ ಮೌಲಾನಾ ಮಹಮ್ಮದ್ ಸಾಜಿದ್ ರಶೀದಿ ಅವರು ‘ಸೋಮನಾಥ ಮಂದಿರವನ್ನು ಧ್ವಂಸಗೊಳಿಸಿ ಗಜನಿಯು ಯಾವುದೇ ತಪ್ಪು ಮಾಡಿಲ್ಲ’, ಎಂಬ ಆಕ್ರೋಶಭರಿತ ಹೇಳಿಕೆಯನ್ನು ನೀಡಿದ್ದರು. ಹೇಳುವ ತಾತ್ಪರ್ಯವೇನೆಂದರೆ, ಸ್ವಾತಂತ್ರ್ಯಪೂರ್ವ ಕಾಲದಿಂದ ಇಂದಿನವರೆಗೆ ಮಂದಿರವನ್ನು ವಿರೋಧಿಸುವಲ್ಲಿ ಕಾಂಗ್ರೆಸ್ಸಿಗರು ಮತ್ತು ಜಿಹಾದಿ ಪ್ರವೃತ್ತಿಯನ್ನು ಹೊಂದಿರುವ ಜನರ ನಡುವೆ ಅಚ್ಚರಿಯ ಹೋಲಿಕೆ ಕಂಡುಬರುತ್ತದೆ. ಇಂತವರನ್ನು ಆಧುನಿಕ ಕಾಲದ ‘ಗಜನಿ’ ಎನ್ನಬಹುದೇ ?

ಆಧುನಿಕ ಗಜನಿಗಳ ಕೃತ್ಯಗಳು !
ಸೋಮನಾಥ ಮಂದಿರದ ಮೇಲಿನ ಮೊದಲ ಆಕ್ರಮಣಕ್ಕೆ ೧ ಸಾವಿರ ವರ್ಷಗಳಾದ ಹಿನ್ನೆಲೆಯಲ್ಲಿ ‘ಸೋಮನಾಥ ಸ್ವಾಭಿಮಾನ ಪರ್ವ’ವನ್ನು ಹಮ್ಮಿಕೊಳ್ಳಲಾಗಿದೆ. ಈ ನಿಮಿತ್ತವಾಗಿ ಪ್ರತಿಯೊಬ್ಬ ಹಿಂದೂವಿನ ಮನಸ್ಸು ಶ್ರೀ ಸೋಮನಾಥನ ಬಗೆಗಿನ ಕೃತಜ್ಞತೆಯಿಂದ ತುಂಬಿ ಬಂದಿದೆ. ಇನ್ನೊಂದೆಡೆ ಮಾತ್ರ ಔರಂಗಜೇಬ ಮತ್ತು ಗಜನಿ ಮಾಡಿದ ಹಿಂದೂದ್ವೇಷಿ ಕೃತ್ಯಗಳು ಇಂದಿಗೂ ಮುಂದುವರಿಯುತ್ತಿವೆ ಎಂಬ ಕಹಿ ಸತ್ಯವನ್ನು ಅಲ್ಲಗಳೆಯುವಂತಿಲ್ಲ. ಇಂದಿನ ಜಿಹಾದಿಗಳು ಅವರ ಪರಂಪರೆಯನ್ನು ಮುಂದುವರಿಸುತ್ತಿದ್ದಾರೆ. ಅವರು ದೇಶ-ವಿದೇಶಗಳಲ್ಲಿ, ವಿಶೇಷವಾಗಿ ಪಾಕಿಸ್ತಾನ, ಬಾಂಗ್ಲಾದೇಶ ಮುಂತಾದ ಇಸ್ಲಾಮಿಕ್ ರಾಷ್ಟ್ರಗಳಲ್ಲಿ ಹಿಂದೂಗಳ ಮಂದಿರಗಳ ಮೇಲೆ ಪ್ರತಿದಿನ ಆಕ್ರಮಣ ಮಾಡಿ ಅವುಗಳನ್ನು ನಾಶಪಡಿಸುತ್ತಿದ್ದಾರೆ. ದೇವತೆಗಳ ಮೂರ್ತಿಗಳ ಮೇಲೆ ಮೂತ್ರ ವಿಸರ್ಜನೆ ಮಾಡಿ ಅಪವಿತ್ರಗೊಳಿಸುತ್ತಿದ್ದಾರೆ, ಮೂರ್ತಿಗಳನ್ನು ಭಗ್ನಗೊಳಿಸಿ ಘೋರ ವಿಡಂಬನೆ ಮಾಡುತ್ತಿದ್ದಾರೆ, ಲವ್ ಜಿಹಾದ್ ಮೂಲಕ ಅಕ್ಕ-ತಂಗಿಯರ ಮಾನ ಹರಣ ಮಾಡುತ್ತಿದ್ದಾರೆ, ಹಿಂದೂಗಳನ್ನು ಬಲವಂತವಾಗಿ ಮತಾಂತರಿಸುತ್ತಿದ್ದಾರೆ, ಹಿಂದೂಗಳ ಧರ್ಮವನ್ನು ಕೇಳಿ ಅವರನ್ನು ಹತ್ಯೆ ಮಾಡುತ್ತಿದ್ದಾರೆ. ಆಧುನಿಕ ಗಜನಿಗಳ ಈ ಕೃತ್ಯಗಳನ್ನು ಕಾನೂನುಬದ್ಧವಾಗಿ ತಡೆಯುವುದು ಅತ್ಯಂತ ಅವಶ್ಯಕವಾಗಿದೆ. ಇತಿಹಾಸದ ಅನ್ಯಾಯದಿಂದ ಪಾಠ ಕಲಿತು ಭವಿಷ್ಯದ ಅನ್ಯಾಯದ ವಿರುದ್ಧ ಹೋರಾಡುವ ಪ್ರೇರಣೆ ಪಡೆಯುವುದು ಅಗತ್ಯವಿದೆ. ಔರಂಗಜೇಬ ಮತ್ತು ಗಜನಿ ಹಿಂದೂಗಳ ಶ್ರದ್ಧಾಕೇಂದ್ರಗಳನ್ನು ನಾಶ ಮಾಡಲು ತಮ್ಮ ಇಡೀ ಜೀವನವನ್ನು ವ್ಯಯಿಸಿದರು. ಇಂದಿನ ಆಧುನಿಕ ಔರಂಗಜೇಬರು ಮತ್ತು ಗಜನಿಗಳು ಅದಕ್ಕಿಂತ ನೂರು ಹೆಜ್ಜೆ ಮುಂದೆ ಹೋಗಿ ಸನಾತನ ಧರ್ಮವನ್ನೇ ನಾಶ ಮಾಡಲು ಹವಣಿಸುತ್ತಿದ್ದಾರೆ. ಅದಕ್ಕಾಗಿ ದಂಗೆಗಳು, ಬಾಂಬ್ ಸ್ಫೋಟಗಳಿಂದ ಹಿಡಿದು ಮೇಲೆ ಉಲ್ಲೇಖಿಸಿದ ಹಿಂದೂದ್ವೇಷಿ ಕೃತ್ಯಗಳನ್ನೇ ಅವರು ತಮ್ಮ ಜೀವನದ ಗುರಿಯನ್ನಾಗಿಸಿಕೊಂಡಿದ್ದಾರೆ. ಅವರಿಗೆ ಅನೇಕ ದೇಶದ್ರೋಹಿಗಳ ಬೆಂಬಲವೂ ಇದೆ. ದೇವರು, ದೇಶ ಮತ್ತು ಧರ್ಮದ ವಿರುದ್ಧ ಮಾತನಾಡುವವರಿಗೆ ‘ಪ್ರಗತಿಪರ’ ಎಂಬ ಹೆಸರಿನ ಗುಂಪಿನಿಂದ ತಕ್ಷಣವೇ ರಕ್ಷಣೆ ಸಿಗುತ್ತದೆ. ಅಷ್ಟೇ ಏಕೆ ?
ಹಿಂದೆ ಅವರಿಗೆ ರಾಜಕೀಯ ಮಟ್ಟದಲ್ಲೂ ಕಾಲಕಾಲಕ್ಕೆ ಸಹಾನುಭೂತಿ ಸಿಕ್ಕಿದೆ. ಅವರಿಗಾಗಿ ವೈಯಕ್ತಿಕ ಸ್ವಾತಂತ್ರ್ಯದ ರಾಗ ಹಾಡಲಾಗುತ್ತದೆ. ಈ ಎಲ್ಲಾ ಪ್ರವೃತ್ತಿಗಳು ಕೇವಲ ಸನಾತನ ಧರ್ಮಕ್ಕೆ ಮಾತ್ರವಲ್ಲ, ಈ ದೇಶಕ್ಕೂ ತೀವ್ರ ವಿರೋಧಿಯಾಗಿವೆ. ಆದ್ದರಿಂದ ಸರಕಾರವು ಇಂತಹವರನ್ನು ಈಗಲೇ ಕಡಿವಾಣ ಹಾಕುವುದು ಅತ್ಯಂತ ಅವಶ್ಯಕವಾಗಿದೆ. ಇನ್ನೊಂದೆಡೆ ದೇವರು, ದೇಶ ಮತ್ತು ಧರ್ಮದ ಮೇಲಿನ ಆಘಾತಗಳ ವಿರುದ್ಧ ಹಿಂದೂಗಳು ಜಾಗರೂಕರಾಗಿರುವುದು ಅವಶ್ಯಕವಾಗಿದೆ. ಅದಕ್ಕಾಗಿ ಮೊದಲು ಹಿಂದೂಗಳಲ್ಲಿ ಜಾಗೃತಿ ಮೂಡಿಸುವುದು ಅನಿವಾರ್ಯವಾಗಿದೆ.
ಸನಾತನವು ಅವಿನಾಶಿ !
ಇದಕ್ಕಾಗಿ ಇತಿಹಾಸದ ಜಾಗೃತಿ ಮೂಡಿಸುವುದು ಮುಖ್ಯವಾಗಿದೆ. ಆದಾಗ್ಯೂ ಆಧುನಿಕತೆಯ ಹೆಸರಿನಲ್ಲಿ ಇತಿಹಾಸವನ್ನು ಮರೆ ಮಾಚುವ ಮತ್ತು ‘ಆಗಿದ್ದು ಆಗಿ ಹೋಯಿತು, ಅದನ್ನು ಮರೆತು ಮುಂದೆ ಸಾಗಿರಿ’ ಎಂಬ ಪುಕ್ಕಟೆ ಸಲಹೆ ನೀಡುವ ಪ್ರಯತ್ನ ನಡೆಯುತ್ತಿದೆ. ಯಾರಿಗೆ ತಮ್ಮ ಇತಿಹಾಸ ತಿಳಿದಿರುವುದಿಲ್ಲವೋ, ಅವರು ಭವಿಷ್ಯದಲ್ಲಿ ತಮ್ಮನ್ನು ತಾವು ರಕ್ಷಿಸಿಕೊಳ್ಳಲು ಸಾಧ್ಯವಿಲ್ಲ ಎಂಬುದು ಕೂಡ ಇತಿಹಾಸವೇ ಆಗಿದೆ ಎಂಬುದನ್ನು ನೆನಪಿನಲ್ಲಿಡಬೇಕು. ಇಂತಹ ಸ್ಥಿತಿಯಲ್ಲಿ ‘ಸೋಮನಾಥ ಸ್ವಾಭಿಮಾನ ಪರ್ವ’ದಂತಹ ಕಾರ್ಯಕ್ರಮಗಳು ಹಿಂದೂಗಳ ಭಾವೈಕ್ಯವನ್ನು ಜಾಗೃತಗೊಳಿಸುವ ಉಪಕ್ರಮಗಳಾಗುತ್ತವೆ. ಕಾಲ ಎಷ್ಟೇ ಕಠಿಣವಾಗಿದ್ದರೂ ಸತ್ಯವು (ಸನಾತನ) ಎಂದಿಗೂ ಅಳಿಸಿ ಹೋಗುವುದಿಲ್ಲ ಎಂಬುದನ್ನು ‘ಸೋಮನಾಥ ಸ್ವಾಭಿಮಾನ ಪರ್ವ’ವು ಸಾಬೀತುಪಡಿಸುತ್ತದೆ. ಅಯೋಧ್ಯೆಯ ಶ್ರೀರಾಮ ಮಂದಿರ, ಕಾಶಿಯ ಕಾಯಕಲ್ಪ ಮತ್ತು ಈಗ ಶ್ರೀ ಸೋಮನಾಥನ ಈ ಗೌರವ ಸಮಾರಂಭವು ಒಂದು ‘ಸಾಂಸ್ಕೃತಿಕ ಬಲಾಢ್ಯ ಶಕ್ತಿ’ಯ ಉದಯದ ನಾಂದಿಯಾಗಿದೆ. ಈ ಪಯಣವು ನಿರ್ಭೀತ ಮತ್ತು ಹೆಮ್ಮೆಯ ಹಿಂದೂ ಸಮಾಜ ನಿರ್ಮಾಣದತ್ತ ಸಾಗುತ್ತಿದೆ. ಸೋಮನಾಥ ಮಂದಿರದ ವಿಧ್ವಂಸಕ ಘಟನೆಗಳನ್ನು ನೆನಪಿಸುವುದು ದ್ವೇಷ ಹರಡುವುದಕ್ಕಾಗಿ ಅಲ್ಲ, ಬದಲಾಗಿ ಸತ್ಯದ ಅರಿವು ಮೂಡಿಸುವುದಕ್ಕಾಗಿ ಆಗಿದೆ. ಸತ್ಯವನ್ನು ಸ್ವೀಕರಿಸದೆ ಆತ್ಮಗೌರವ ಮೂಡುವುದಿಲ್ಲ ಮತ್ತು ಆತ್ಮಗೌರವವಿಲ್ಲದೆ ಸ್ವಾಭಿಮಾನ ನಿರ್ಮಾಣವಾಗುವುದಿಲ್ಲ. ಇದಕ್ಕಾಗಿ ನಾವು ಇತಿಹಾಸದಿಂದ ಪಾಠ ಕಲಿತು ವರ್ತಮಾನದಲ್ಲಿ ಜಾಗರೂಕರಾಗಿ ಮತ್ತು ಸಂಘಟಿತರಾಗಿರುವುದು ಅವಶ್ಯಕವಾಗಿದೆ. ಅದಕ್ಕಾಗಿ ನಮಗೆ ಶ್ರೀ ಸೋಮನಾಥನ ಆಶೀರ್ವಾದ ಸದಾ ಇರುತ್ತದೆ. ದೇವರ ದೈವತ್ವವು ತಾನಾಗಿಯೇ ಪ್ರಕಟವಾಗುತ್ತದೆ, ಆದರೆ ಮನುಷ್ಯನು ತನ್ನ ಪ್ರಯತ್ನವನ್ನು ತೋರಿಸಬೇಕಾಗುತ್ತದೆ. ದೇಶದ ೧೦೦ ಕೋಟಿ ಹಿಂದೂಗಳು ಒಂದಾಗಿ ಅಂತಹ ವರ್ಚಸ್ಸನ್ನು ನಿರ್ಮಿಸೋಣ, ಇದರಿಂದ ಔರಂಗಜೇಬ, ಗಜನಿ ಮುಂತಾದವರ ವಂಶಜರು ಸನಾತನ ಧರ್ಮ, ಧರ್ಮಗ್ರಂಥಗಳು, ದೇವತೆಗಳು, ಸಂತರು, ರಾಷ್ಟ್ರಪುರುಷರ ಕಡೆಗೆ ವಕ್ರದೃಷ್ಟಿಯಿಂದ ನೋಡುವ ಧೈರ್ಯ ಮಾಡಬಾರದು. ನಾವು ಇದನ್ನು ಮಾಡಿದರೆ ಸನಾತನ ಧರ್ಮೀಯರಿಂದ ತಲೆತಲಾಂತರಗಳವರೆಗೆ ’ಸನಾತನ ಸ್ವಾಭಿಮಾನ ಪರ್ವ’ ಆಚರಿಸುತ್ತಾರೆ !
ಆರ್ಥಿಕ ಶಿಸ್ತು
ಸಂಪಾದಕೀಯ : ಜಿರಳೆ ಮತ್ತು ಬೋಧನೆ
ಬಂಗಾಳದಲ್ಲಿ ಅನಿವಾರ್ಯ ಸಂಘರ್ಷ !
ಬಹಿರಂಗ ಸತ್ಯ: ಭೋಜಶಾಲೆ ಮುಕ್ತ!
ಗೋಹತ್ಯೆ ಮತ್ತು ಸರ್ವೋಚ್ಚ ನ್ಯಾಯಾಲಯ !
ಥಾಪರ್ ಅವರ ‘ವೋಕಿಸಂ’ !