|

ಭರೂಚ್ (ಗುಜರಾತ್) – ಇಲ್ಲಿನ ಪಯೋನೀರ್ ಶಾಲೆಯ ಎದುರಿಗಿರುವ ಜಾಮಾ ಮಸೀದಿಯ ವಿರುದ್ಧ ಅಖಿಲ ಭಾರತ ಸಂತ ಸಮಿತಿಯ ಸಂತರು ಆಂದೋಲನ ಆರಂಭಿಸಿದ್ದಾರೆ. ಈ ಸ್ಥಳದಲ್ಲಿ ಪ್ರಾಚೀನ ಜೈನ ಮಂದಿರವಿತ್ತು ಮತ್ತು ಇಲ್ಲೇ ಚಕ್ರಧರ ಸ್ವಾಮಿಗಳು ಜನಿಸಿದ್ದರು ಎಂದು ಸಂತರು ದಾವೆ ಮಾಡಿದ್ದಾರೆ. ಈ ವಾಸ್ತುವನ್ನು ಭಾರತೀಯ ಪುರಾತತ್ವ ಸರ್ವೇಕ್ಷಣಾ ಇಲಾಖೆಯು ಸಂರಕ್ಷಿತ ಸ್ಮಾರಕವೆಂದು ಘೋಷಿಸಿದ್ದರೂ ಸಹ, ನಿಯಮಗಳನ್ನು ಉಲ್ಲಂಘಿಸಿ ಅಕ್ರಮವಾಗಿ ನಿರ್ಮಾಣ ಕಾರ್ಯಗಳನ್ನು ಮಾಡಲಾಗಿದೆ ಎಂದು ಆರೋಪಿಸಲಾಗಿದೆ.
ಈ ಪ್ರಕರಣದ ಗಂಭೀರತೆಯನ್ನು ಅರಿತ ಭರೂಚ್ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಗಳು ಸ್ಥಳಕ್ಕೆ ಧಾವಿಸಿದರು. ಅವರು ಪುರಾತತ್ವ ಇಲಾಖೆಯ ಅಧಿಕಾರಿಗಳು ಮತ್ತು ಸಂತ ಸಮಿತಿಯ ಪ್ರತಿನಿಧಿಗಳೊಂದಿಗೆ ಚರ್ಚಿಸಿ, ಸಮೀಕ್ಷೆ ನಡೆಸುವ ಭರವಸೆ ನೀಡಿದರು. ಅಖಿಲ ಭಾರತ ಸಂತ ಸಮಿತಿಯು ಶಕ್ತಿನಾಥ ಮೈದಾನದಲ್ಲಿ ಪ್ರತಿಭಟನೆ ನಡೆಸಿತು. ಪುರಾತತ್ವ ಇಲಾಖೆಯು ಕಟ್ಟುನಿಟ್ಟಿನ ಕ್ರಮ ಕೈಗೊಳ್ಳುವವರೆಗೆ ನೀರನ್ನೂ ಸೇವಿಸದೆ ಉಪವಾಸ ಕೂರುವುದಾಗಿ ಸಂತರು ನಿರ್ಧರಿಸಿದ್ದಾರೆ.
೧೯೦೫ರಲ್ಲಿ ಪುರಾತತ್ವ ಇಲಾಖೆಯು ಈ ವಾಸ್ತುವನ್ನು ತನ್ನ ಸುಪರ್ದಿಗೆ ಪಡೆದು ‘ಸಂರಕ್ಷಿತ ಸ್ಮಾರಕ’ ಎಂದು ಘೋಷಿಸಿತ್ತು. ಆದರೆ ಸಂತ ಸಮಿತಿಯ ಪ್ರಕಾರ, ಹೀಗಿದ್ದರೂ ಸಹ ಇಲ್ಲಿ ನಿಯಮಬಾಹಿರವಾಗಿ ನಿರ್ಮಾಣ ಕಾರ್ಯಗಳನ್ನು ನಡೆಸುವ ಪ್ರಯತ್ನಗಳು ನಡೆಯುತ್ತಿವೆ. ಕೆಲವು ವ್ಯಕ್ತಿಗಳು ಕಾನೂನು ಉಲ್ಲಂಘಿಸಿ ಈ ಐತಿಹಾಸಿಕ ಸ್ಥಳದ ಮೂಲ ಗುರುತನ್ನು ಬದಲಾಯಿಸಲು ಪ್ರಯತ್ನಿಸುತ್ತಿದ್ದಾರೆ ಎಂದು ಆರೋಪಿಸಲಾಗಿದೆ. ಅಖಿಲ ಭಾರತ ಸಂತ ಸಮಿತಿಯ ಅಧ್ಯಕ್ಷರಾದ ಸಂತ ಅವಿಚಲ ದೇವಾಚಾರ್ಯರು ಮಾತನಾಡಿ, “ಇದೊಂದು ಐತಿಹಾಸಿಕ ಪರಂಪರೆಯ ತಾಣವಾಗಿದ್ದು, ಇಲ್ಲಿ ಬೇರೆ ಯಾವುದೇ ಧಾರ್ಮಿಕ ಅಥವಾ ಸಾಂಸ್ಕೃತಿಕ ಚಿಹ್ನೆಗಳು ಅಸ್ತಿತ್ವದಲ್ಲಿಲ್ಲ” ಎಂದು ತಿಳಿಸಿದರು.
ಜೀವಂತ ಸ್ಮಾರಕಗಳ ಪರಿಕಲ್ಪನೆ
ಆಂದೋಲನದಲ್ಲಿ ಭಾಗವಹಿಸಿದ್ದ ಸಂತ ಸ್ವಾಮಿ ಮುಕ್ತಾನಂದ ಅವರು ಮಾತನಾಡಿ, “ದೇಶದಲ್ಲಿ ಪುರಾತತ್ವ ಇಲಾಖೆಯ ಸಂರಕ್ಷಣೆಯಲ್ಲಿ ಸುಮಾರು ೩ ಸಾವಿರದ ೮೦೦ ಸ್ಮಾರಕಗಳಿವೆ. ಅವುಗಳಲ್ಲಿ ಸುಮಾರು ೮೨೦ ಸ್ಮಾರಕಗಳನ್ನು ‘ಜೀವಂತ ಸ್ಮಾರಕ’ ಎಂದು ಗುರುತಿಸಲಾಗಿದೆ. ಕಾನೂನಿನ ಪ್ರಕಾರ, ಜೀವಂತ ಸ್ಮಾರಕದಲ್ಲಿ ಒಂದು ಮೊಳೆಯನ್ನು ಹೊಡೆಯುವುದು ಕೂಡ ಕಾನೂನುಬಾಹಿರ. ಆದರೂ ಈ ಜಾಮಾ ಮಸೀದಿಯಲ್ಲಿ ವಜೂಖಾನಾ (ನಮಾಜ್ಗಿಂತ ಮೊದಲು ಕೈಕಾಲು ತೊಳೆಯುವ ಸ್ಥಳ) ನಿರ್ಮಿಸಲಾಗಿದೆ. ಅಲ್ಲದೆ ಫ್ಯಾನ್ಗಳು, ದೀಪಗಳು, ಫಲಕಗಳು ಮತ್ತು ಮದರಸಾಗೆ ಸಂಬಂಧಿಸಿದ ವಸ್ತುಗಳನ್ನು ಇಡಲಾಗಿದೆ. ಇವೆಲ್ಲವೂ ಕಾನೂನಿನ ಉಲ್ಲಂಘನೆಯಾಗಿದೆ” ಎಂದು ಆರೋಪಿಸಿದರು. ಜೀವಂತ ಸ್ಮಾರಕವಾಗಿದ್ದರೆ ಅಲ್ಲಿ ವಾರಕ್ಕೆ ಕೇವಲ ಒಂದು ದಿನ ಮಾತ್ರ ಪೂಜೆ ಅಥವಾ ನಮಾಜ್ ಮಾಡಲು ಅವಕಾಶವಿರುತ್ತದೆ ಎಂದು ಅವರು ತಿಳಿಸಿದರು.
ಎರಡು ದಿನಗಳಲ್ಲಿ ಸಮೀಕ್ಷೆ ಆರಂಭ
ಅರ್ಜಿ ಸಲ್ಲಿಸಿದರೂ ಯಾವುದೇ ಕ್ರಮ ಕೈಗೊಳ್ಳದ ಕಾರಣ ಜನವರಿ ೫ ರಿಂದ ಅನಿರ್ದಿಷ್ಟಾವಧಿ ಉಪವಾಸ ಸತ್ಯಾಗ್ರಹ ಆರಂಭಿಸಲಾಯಿತು ಎಂದು ಸ್ವಾಮಿ ಮುಕ್ತಾನಂದ ತಿಳಿಸಿದರು. ಇದರ ಬೆನ್ನಲ್ಲೇ ಆಡಳಿತ ಮಂಡಳಿಯು ತಕ್ಷಣ ಗಮನಹರಿಸಿತು. ಪೊಲೀಸ್ ವರಿಷ್ಠಾಧಿಕಾರಿ ಅಕ್ಷಯ ರಾಜ್ ಅವರ ಮಧ್ಯಸ್ಥಿಕೆಯಲ್ಲಿ ಪುರಾತತ್ವ ಅಧಿಕಾರಿಗಳು ಮತ್ತು ಸಂತ ಸಮಾಜದ ನಡುವೆ ಸಭೆ ನಡೆಯಿತು. ಸಭೆಯಲ್ಲಿ ಎಲ್ಲಾ ಅಂಶಗಳ ಕುರಿತು ಕ್ರಮ ಕೈಗೊಳ್ಳುವ ಭರವಸೆ ನೀಡಲಾಯಿತು. ಪ್ರಸ್ತುತ ಅಲ್ಲಿರುವ ತಾತ್ಕಾಲಿಕ ವ್ಯವಸ್ಥೆಗಳನ್ನು ೮ ರಿಂದ ೧೦ ದಿನಗಳಲ್ಲಿ ತೆರವುಗೊಳಿಸಲಾಗುವುದು ಮತ್ತು ಕಾಯಂ ನಿರ್ಮಾಣಗಳನ್ನು ಮುಂದಿನ ೨ ತಿಂಗಳೊಳಗೆ ತೆಗೆದುಹಾಕಲಾಗುವುದು ಎಂದು ತಿಳಿಸಲಾಗಿದೆ. ಮುಂದಿನ ೨-೩ ದಿನಗಳಲ್ಲಿ ಸಮೀಕ್ಷೆ ಕಾರ್ಯ ಆರಂಭವಾಗಲಿದ್ದು, ಆ ಪ್ರಕ್ರಿಯೆಯಲ್ಲಿ ಸಂತ ಸಮಾಜದ ಕೆಲವು ಪ್ರತಿನಿಧಿಗಳು ಕೂಡ ಭಾಗವಹಿಸಲಿದ್ದಾರೆ ಎಂದು ಸ್ಪಷ್ಟಪಡಿಸಲಾಗಿದೆ.
ಕೇರಳಮ್ದಲ್ಲಿ ‘ಇಸ್ಲಾಂ ಫ್ರೆಂಡ್ಲಿ’ ಜಿಮ್ ಕುರಿತು ವಿವಾದ
ಪುಣೆ ನಗರದಲ್ಲಿ ಮತ್ತೆ ‘ಕಾರ್ಪೊರೇಟ್ ಜಿಹಾದ್’ ಪ್ರಕರಣ
‘ದಾರುಲ್ ಉಲೂಮ್ ದೇವಬಂದ್’ ಭಯೋತ್ಪಾದಕರ ಕೇಂದ್ರವಾಗಿರುವುದರಿಂದ ಅದನ್ನು ನೆಲಸಮ ಮಾಡಿ ! – ಹಿಂದೂ ರಕ್ಷಾ ದಳದ ಬೇಡಿಕೆ
ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಅವರನ್ನು ಭಗವಾನ್ ಶಿವನ ರೂಪದಲ್ಲಿ ತೋರಿಸಿದ ‘ವಿಶ್ವವಾಣಿ’ ಪತ್ರಿಕೆ !
‘ಭಂಡಾರ ಎಂದರೆ ಶುದ್ಧ ಅರಿಶಿನ’ ಎಂದು ಘೋಷಿಸುವಂತೆ ಅನ್ನ ಮತ್ತು ಔಷಧ ಆಡಳಿತಕ್ಕೆ (FDA) ಆಗ್ರಹ!
ಪಾನ್ ಮಸಾಲಾ, ಗುಟ್ಕಾ ಮತ್ತು ಕಲಬೆರಕೆ ಆಹಾರ ಪದಾರ್ಥಗಳ ಒಂದೂವರೆ ಕೋಟಿಗೂ ಹೆಚ್ಚು ಮೌಲ್ಯದ ದಾಸ್ತಾನು ವಶ