
‘ದಿನಾಂಕ ೩.೧೦.೨೦೨೫ ರಂದು ಮಂಗಳೂರು ಇಲ್ಲಿನ ಪೂ. ಭಾರ್ಗವರಾಮ ಭರತ ಪ್ರಭು (ಸನಾತನದ ಮೊದಲ ಬಾಲಸಂತ, ವಯಸ್ಸು ೮ ವರ್ಷ) ಇವರು ದೇವದ (ಪನವೇಲ) ಇಲ್ಲಿನ ಸನಾತನ ಆಶ್ರಮಕ್ಕೆ ಬಂದಿದ್ದರು. ಆ ಸಮಯದಲ್ಲಿ ನಾನು ಪ.ಪೂ. ಪಾಂಡೆ ಮಹಾರಾಜರ ಕೋಣೆಯಲ್ಲಿ ನಾಮಜಪ ಮೊದಲಾದ ಆಧ್ಯಾತ್ಮಿಕ ಉಪಾಯಗಳಿಗಾಗಿ ಕುಳಿತಿದ್ದೆ. ಪೂ. ಭಾರ್ಗವರಾಮ ಅವರು ಪ.ಪೂ. ಪಾಂಡೆ ಮಹಾರಾಜರ ಕೋಣೆಗೆ ಬಂದಾಗ ನನಗೆ ದೈವೀ ಸುಗಂಧ ಬಂತು. ‘ಈ ದೈವೀ ಸುಗಂಧವು ಮಾರಕ ಸ್ವರೂಪದ್ದಾಗಿರಬೇಕು’ ಎಂದು ನನಗೆ ಅನಿಸಿತು. ಮೊದಲು ಈ ಸುಗಂಧವು ಬಹಳ ತೀವ್ರವಾಗಿತ್ತು. ನಂತರ ಅದು ನಿಧಾನವಾಗಿ ಕಡಿಮೆಯಾಗುತ್ತಾ ಹೋಯಿತು. ಅದರ ನಂತರ ನನಗೆ ತಾರಕ ಸ್ವರೂಪದ ದೈವೀ ಸುಗಂಧ ಬಂತು.

ದೈವೀ ಸುಗಂಧದಿಂದ ನನ್ನ ಮನಸ್ಸಿನ ಆಲೋಚನೆಗಳು ಕಡಿಮೆಯಾಗಿ ಮನಸ್ಸು ನಾಮಜಪದಲ್ಲಿ ಏಕಾಗ್ರವಾಯಿತು. ‘ಈ ದೈವೀ ಸುಗಂಧದ ಅನುಭೂತಿಯನ್ನು ತೆಗೆದುಕೊಳ್ಳುತ್ತಲೇ ಇರಬೇಕು’ ಎಂದು ನನಗೆ ಅನಿಸಿತು.
ಪೂ. ಭಾರ್ಗವರಾಮ ಅವರು ಕೋಣೆಯಿಂದ ಹೊರಗೆ ಹೋದ ಸ್ವಲ್ಪ ಸಮಯದ ನಂತರ ಆ ಸುಗಂಧವು ಕಡಿಮೆಯಾಗಿ ಇಲ್ಲವಾಯಿತು.’
– ಶ್ರೀಮತಿ ಜಯಶ್ರೀ ಭಾಲೇರಾವ, ಸನಾತನ ಆಶ್ರಮ, ದೇವದ, ಪನವೇಲ. (೧೦.೧೦.೨೦೨೫)
ಸೋಮನಾಥ ಜ್ಯೋತಿರ್ಲಿಂಗದ ದಿವ್ಯ ಅಂಶಗಳು ಸನಾತನ ಸಂಸ್ಥೆಗೆ ಪ್ರಾಪ್ತವಾಗುವ ವರೆಗಿನ ದಿವ್ಯ ಪ್ರಯಾಣ !
ಯಜ್ಞಸಂಸ್ಕೃತಿಯನ್ನು ಪುನರುಜ್ಜೀವನಗೊಳಿಸುವ ಸಚ್ಚಿದಾನಂದ ಪರಬ್ರಹ್ಮ ಡಾ. ಆಠವಲೆ !
ಯಜ್ಞಸಂಸ್ಕೃತಿಯ ಸಂವರ್ಧನೆ ಬಗ್ಗೆ ಸಚ್ಚಿದಾನಂದ ಪರಬ್ರಹ್ಮ ಡಾ. ಆಠವಲೆಯವರ ದೃಷ್ಟಿಕೋನ !
ಹಿಂದೂ ರಾಷ್ಟ್ರದ ಸ್ಥಾಪನೆಗಾಗಿಯೇ ಯಜ್ಞಸಮಾರಂಭ ಮತ್ತು ಸಮಷ್ಟಿ ಧರ್ಮಪ್ರಸಾರ !
೧೨ ಜ್ಯೋತಿರ್ಲಿಂಗಗಳಲ್ಲಿ ಪ್ರಥಮವಾಗಿರುವ ಮೂಲ ಸೋಮನಾಥ ಜ್ಯೋತಿರ್ಲಿಂಗದ ದಿವ್ಯ ಅಂಶಗಳು ಸನಾತನ ಸಂಸ್ಥೆಗೆ ಸಮರ್ಪಣೆ !
ಯಜ್ಞಗಳನ್ನು ಆಯೋಜಿಸುವಲ್ಲಿ ಸಚ್ಚಿದಾನಂದ ಪರಬ್ರಹ್ಮ ಡಾಕ್ಟರರ ವ್ಯಾಪಕ ಉದ್ದೇಶ !