ಪೂ. ಭಾರ್ಗವರಾಮ ಪ್ರಭು ಅವರು ದೇವದ ಆಶ್ರಮ ದರ್ಶನ ಮಾಡುತ್ತಿರುವಾಗ ಸಾಧಕಿಗೆ ಮಾರಕ ಮತ್ತು ತಾರಕ ದೈವೀ ಸುಗಂಧ ಬಂದು ಮನಸ್ಸು ನಿರ್ವಿಚಾರವಾಗಿ ನಾಮಜಪದಲ್ಲಿ ಏಕಾಗ್ರವಾಗುವುದು

ಪೂ. ಭಾರ್ಗವರಾಮ ಪ್ರಭು

‘ದಿನಾಂಕ ೩.೧೦.೨೦೨೫ ರಂದು ಮಂಗಳೂರು ಇಲ್ಲಿನ ಪೂ. ಭಾರ್ಗವರಾಮ ಭರತ ಪ್ರಭು (ಸನಾತನದ ಮೊದಲ ಬಾಲಸಂತ, ವಯಸ್ಸು ೮ ವರ್ಷ) ಇವರು ದೇವದ (ಪನವೇಲ) ಇಲ್ಲಿನ ಸನಾತನ ಆಶ್ರಮಕ್ಕೆ ಬಂದಿದ್ದರು. ಆ ಸಮಯದಲ್ಲಿ ನಾನು ಪ.ಪೂ. ಪಾಂಡೆ ಮಹಾರಾಜರ ಕೋಣೆಯಲ್ಲಿ ನಾಮಜಪ ಮೊದಲಾದ ಆಧ್ಯಾತ್ಮಿಕ ಉಪಾಯಗಳಿಗಾಗಿ ಕುಳಿತಿದ್ದೆ. ಪೂ. ಭಾರ್ಗವರಾಮ ಅವರು ಪ.ಪೂ. ಪಾಂಡೆ ಮಹಾರಾಜರ ಕೋಣೆಗೆ ಬಂದಾಗ ನನಗೆ ದೈವೀ ಸುಗಂಧ ಬಂತು. ‘ಈ ದೈವೀ ಸುಗಂಧವು ಮಾರಕ ಸ್ವರೂಪದ್ದಾಗಿರಬೇಕು’ ಎಂದು ನನಗೆ ಅನಿಸಿತು. ಮೊದಲು ಈ ಸುಗಂಧವು ಬಹಳ ತೀವ್ರವಾಗಿತ್ತು. ನಂತರ ಅದು ನಿಧಾನವಾಗಿ ಕಡಿಮೆಯಾಗುತ್ತಾ ಹೋಯಿತು. ಅದರ ನಂತರ ನನಗೆ ತಾರಕ ಸ್ವರೂಪದ ದೈವೀ ಸುಗಂಧ ಬಂತು.

ಶ್ರೀಮತಿ ಜಯಶ್ರೀ ಭಾಲೇರಾವ

ದೈವೀ ಸುಗಂಧದಿಂದ ನನ್ನ ಮನಸ್ಸಿನ ಆಲೋಚನೆಗಳು ಕಡಿಮೆಯಾಗಿ ಮನಸ್ಸು ನಾಮಜಪದಲ್ಲಿ ಏಕಾಗ್ರವಾಯಿತು. ‘ಈ ದೈವೀ ಸುಗಂಧದ ಅನುಭೂತಿಯನ್ನು ತೆಗೆದುಕೊಳ್ಳುತ್ತಲೇ ಇರಬೇಕು’ ಎಂದು ನನಗೆ ಅನಿಸಿತು.

ಪೂ. ಭಾರ್ಗವರಾಮ ಅವರು ಕೋಣೆಯಿಂದ ಹೊರಗೆ ಹೋದ ಸ್ವಲ್ಪ ಸಮಯದ ನಂತರ ಆ ಸುಗಂಧವು ಕಡಿಮೆಯಾಗಿ ಇಲ್ಲವಾಯಿತು.’

– ಶ್ರೀಮತಿ ಜಯಶ್ರೀ ಭಾಲೇರಾವ, ಸನಾತನ ಆಶ್ರಮ, ದೇವದ, ಪನವೇಲ. (೧೦.೧೦.೨೦೨೫)