Yunus Effigy Burnt : ಹಾವಡಾ ಪ್ರತಿಭಟನೆ : ಪ್ರತಿಭಟನೆಯಲ್ಲಿ ಮಹಮ್ಮದ್ ಯೂನಸ್ ಅವರ ಪ್ರತಿಕೃತಿ ದಹಿಸಿದ ಹಿಂದೂಗಳು

ಬಾಂಗ್ಲಾದೇಶದ ಹಿಂದೂಗಳ ಮೇಲಿನ ದೌರ್ಜನ್ಯದ ವಿರುದ್ಧ ಭಾರಿ ಪ್ರತಿಭಟನೆ

ಹಾವಡಾ (ಬಂಗಾಳ) ಇಲ್ಲಿ ಹಿಂದುತ್ವನಿಷ್ಠರಿಂದ ಮಹಮ್ಮದ್ ಯೂನಸ್ ಅವರ ಪ್ರತಿಕೃತಿ ದಹನ !

ಹಾವಡಾ(ಬಂಗಾಳ) – ಬಾಂಗ್ಲಾದೇಶದಲ್ಲಿ ಯಾವ ರೀತಿಯಲ್ಲಿ ನಮ್ಮ ಹಿಂದೂ ಬಾಂಧವ ದೀಪು ಚಂದ್ರ ದಾಸ್ ಎಂಬುವವರನ್ನು ನಗ್ನಗೊಳಿಸಿ ಮರಕ್ಕೆ ನೇತುಹಾಕಿ, ಜೀವಂತವಾಗಿ ಸುಟ್ಟು ಹತ್ಯೆ ಮಾಡಿರುವುದನ್ನು ಯಾವುದೇ ಸನಾತನಿ ಹಿಂದೂ ಎಂದಿಗೂ ಸಹಿಸುವುದಿಲ್ಲ. ಇಂದು ಬಾಂಗ್ಲಾದೇಶದಲ್ಲಿ ನಡೆದಿರುವುದು, ನಾಳೆ ಬಂಗಾಳದ ನಿಮ್ಮ ಸ್ಥಳೀಯ ಪ್ರದೇಶಗಳಲ್ಲಿಯೂ ನಡೆಯಬಹುದು ಎಂಬ ಗಂಭೀರ ಚಿಂತನೆಯನ್ನು ‘ಭಾರತ ಜಾಗರಣ ಪರಿಷತ್ತಿನ’ ಸಂಸ್ಥಾಪಕರಾದ ಶ್ರೀ. ಅಂಕಿತ ಕೊಠಾರಿ ಅವರು ವ್ಯಕ್ತಪಡಿಸಿದರು. ಬಾಂಗ್ಲಾದೇಶದಲ್ಲಿ ಹಿಂದೂಗಳ ಮೇಲೆ ನಡೆಯುತ್ತಿರುವ ದೌರ್ಜನ್ಯಗಳ ವಿರುದ್ಧ ಇಲ್ಲಿನ ಬಾಂಧಾಘಾಟ್ ಚೌಕದಲ್ಲಿ ಆಯೋಜಿಸಲಾದ ಆಂದೋಲನದ ವೇಳೆ ಅವರು ಮಾತನಾಡುತ್ತಿದ್ದರು.

ಬಾಂಗ್ಲಾದೇಶವನ್ನು ನಿಷೇಧಿಸಲು ಅಲ್ಲಿನ ಮಧ್ಯಂತರ ಸರಕಾರದ ಮುಖ್ಯ ಸಲಹೆಗಾರ ಮಹಮ್ಮದ್ ಯೂನಸ್ ಅವರ ಪ್ರತಿಕೃತಿಯನ್ನು ದಹಿಸಲಾಯಿತು. ಶ್ರೀ. ಕೊಠಾರಿ ಅವರು ‘ಸನಾತನ ಪ್ರಭಾತ’ಕ್ಕೆ ಈ ಮಾಹಿತಿ ನೀಡಿದರು. ಈ ಸಂದರ್ಭದಲ್ಲಿ ಹಿಂದೂಗಳು ‘ಆಲ್ ಐಸ್ ಆನ್ ಬಾಂಗ್ಲಾದೇಶಿ ಹಿಂದೂಸ್’ ಎಂಬ ನಾಮಫಲಕಗಳನ್ನು ಕೈಯಲ್ಲಿ ಹಿಡಿದಿದ್ದರು.

ಆಂದೋಲನವನ್ನು ಉದ್ದೇಶಿಸಿ ಶ್ರೀ. ಕೊಠಾರಿ ಮುಂದುವರಿದು ಮಾತನಾಡುತ್ತಾ, ಬಾಂಗ್ಲಾದೇಶವಿರಲಿ ಅಥವಾ ಬಂಗಾಳವಿರಲಿ, ಹಿಂದೂಗಳ ಮೇಲೆ ನಡೆಯುತ್ತಿರುವ ದೌರ್ಜನ್ಯಗಳ ವಿರುದ್ಧ ನಡೆಯುತ್ತಿರುವ ಈ ಆಂದೋಲನದಲ್ಲಿ ನಾವು ಸನಾತನಿ ಹಿಂದೂ ಸಮಾಜದ ಒಗ್ಗಟ್ಟನ್ನು ಪ್ರದರ್ಶಿಸಿದ್ದೇವೆ. ನಾವು ಸಾಮಾನ್ಯ ಜನರಿಗೆ ‘ವಿಭಜನೆಯಾದರೆ ನಾಶವಾಗುವಿರಿ’ (ಬಟೋಗೆ ತೋ ಕಟೋಗೆ) ಮತ್ತು ‘ಒಂದಾಗಿದ್ದರೆ ಸುರಕ್ಷಿತವಾಗಿರುವಿರಿ’ (ಏಕ್ ರಹೋಗೆ ತೋ ಸೇಫ್ ರಹೋಗೆ) ಎಂಬ ಸಂದೇಶವನ್ನು ನೀಡಿದ್ದೇವೆ. ರಾಜಕಾರಣಕ್ಕಿಂತ ರಾಷ್ಟ್ರ ಮತ್ತು ಧರ್ಮವೇ ಸರ್ವೋಚ್ಚ ಎಂಬುದನ್ನು ಹಿಂದೂಗಳು ಈ ಆಂದೋಲನದ ಮೂಲಕ ತೋರಿಸಿಕೊಟ್ಟಿದ್ದಾರೆ, ಎಂದರು. ಭಾರತ ಜಾಗರಣ ಪರಿಷತ್ತು ಈ ಆಂದೋಲನವನ್ನು ಆಯೋಜಿಸಿತ್ತು. ಆಂದೋಲನದಲ್ಲಿ ಅಂಜನಿ ಪುತ್ರ ಸೇನಾ, ಭೂಮಿಪುತ್ರ ಸೇನಾ, ಶ್ರೀರಾಮ ಸೇನಾ ಬಂಗಾಳ, ವಿಶ್ವ ಹಿಂದೂ ಪರಿಷತ್, ಬಜರಂಗದಳ ಮುಂತಾದ ಸಂಘಟನೆಗಳ ಹಿಂದುತ್ವನಿಷ್ಠ ನಾಯಕರು ಮತ್ತು ಕಾರ್ಯಕರ್ತರು ಉಪಸ್ಥಿತರಿದ್ದರು.