ಬಾಂಗ್ಲಾದೇಶಿ ಗೋ ಕಳ್ಳರಿಂದ ಭಾರತೀಯ ಯೋಧನ ಅಪಹರಣ

ಭಾರತೀಯ ಯೋಧ ಸುರಕ್ಷಿತವಾಗಿದ್ದು, ವಾಪಸ್ ಕರೆತರುವ ಪ್ರಕ್ರಿಯೆ ಪ್ರಾರಂಭ

ಕೂಚ್‌ಬಿಹಾರ್ (ಬಂಗಾಳ) – ಬಂಗಾಳದ ಕೂಚ್‌ಬಿಹಾರ್ ಜಿಲ್ಲೆಯ ಮೆಖ್ಲಿಗಂಜ್ ಪ್ರದೇಶದಲ್ಲಿ ಭಾರತ-ಬಾಂಗ್ಲಾದೇಶ ಅಂತರರಾಷ್ಟ್ರೀಯ ಗಡಿಯಲ್ಲಿ ಡಿಸೆಂಬರ್ ೨0 ರ ಮುಂಜಾನೆ ಕೆಲವು ಬಾಂಗ್ಲಾದೇಶಿ ಗೋ ಕಳ್ಳರು ಗಡಿ ಭದ್ರತಾ ದಳದ ಒಬ್ಬ ಯೋಧನನ್ನು ಅಪಹರಿಸಿದ್ದಾರೆ. ದಟ್ಟ ಮಂಜಿನ ಸಹಾಯ ಪಡೆದು ಗೋ ಕಳ್ಳರು ಯೋಧನನ್ನು ಅಪಹರಿಸಿದ್ದಾರೆ. ಆದಾಗ್ಯೂ, ನಂತರ ಕಳ್ಳರು ಯೋಧನನ್ನು ಬಾಂಗ್ಲಾದೇಶದ ಗಡಿ ಕಾವಲುಪಡೆಗೆ ಒಪ್ಪಿಸಿದ್ದಾರೆ. ಎರಡೂ ದೇಶಗಳ ನಡುವಿನ ಮಾತುಕತೆಯ ನಂತರ ಯೋಧನನ್ನು ವಾಪಸ್ ಕರೆತರುವ ಪ್ರಕ್ರಿಯೆಯನ್ನು ಪ್ರಾರಂಭಿಸಲಾಗಿದೆ. ಈ ಯೋಧನ ಹೆಸರು ಬೇದ್ ಪ್ರಕಾಶ್ ಎಂದಿದೆ.

ಗಡಿಯಲ್ಲಿ ಕರ್ತವ್ಯ ನಿರ್ವಹಿಸುತ್ತಿದ್ದಾಗ, ಗಡಿಯ ಒಂದು ಭಾಗದಿಂದ ಜಾನುವಾರುಗಳ ಒಂದು ಹಿಂಡು ಭಾರತದ ಗಡಿಯೊಳಗೆ ನುಗ್ಗಿತು. ಕಳ್ಳರನ್ನು ಓಡಿಸುವಾಗ ಬೇದ ಪ್ರಕಾಶ್ ಇತರ ಯೋಧರಿಗಿಂತ ಸ್ವಲ್ಪ ಮುಂದೆ ಹೋದರು. ದಟ್ಟ ಮಂಜಿನ ಕಾರಣದಿಂದ ಅವರು ತಮ್ಮ ತಂಡದಿಂದ ಬೇರ್ಪಟ್ಟರು. ಈ ಅವಕಾಶದ ಲಾಭ ಪಡೆದ ಬಾಂಗ್ಲಾದೇಶದ ಕಳ್ಳರು ಅವರನ್ನು ಜಾನುವಾರುಗಳೊಂದಿಗೆ ಬಾಂಗ್ಲಾದೇಶಕ್ಕೆ ಕರೆದೊಯ್ದರು.