ಭಾರತೀಯ ಯೋಧ ಸುರಕ್ಷಿತವಾಗಿದ್ದು, ವಾಪಸ್ ಕರೆತರುವ ಪ್ರಕ್ರಿಯೆ ಪ್ರಾರಂಭ

ಕೂಚ್ಬಿಹಾರ್ (ಬಂಗಾಳ) – ಬಂಗಾಳದ ಕೂಚ್ಬಿಹಾರ್ ಜಿಲ್ಲೆಯ ಮೆಖ್ಲಿಗಂಜ್ ಪ್ರದೇಶದಲ್ಲಿ ಭಾರತ-ಬಾಂಗ್ಲಾದೇಶ ಅಂತರರಾಷ್ಟ್ರೀಯ ಗಡಿಯಲ್ಲಿ ಡಿಸೆಂಬರ್ ೨0 ರ ಮುಂಜಾನೆ ಕೆಲವು ಬಾಂಗ್ಲಾದೇಶಿ ಗೋ ಕಳ್ಳರು ಗಡಿ ಭದ್ರತಾ ದಳದ ಒಬ್ಬ ಯೋಧನನ್ನು ಅಪಹರಿಸಿದ್ದಾರೆ. ದಟ್ಟ ಮಂಜಿನ ಸಹಾಯ ಪಡೆದು ಗೋ ಕಳ್ಳರು ಯೋಧನನ್ನು ಅಪಹರಿಸಿದ್ದಾರೆ. ಆದಾಗ್ಯೂ, ನಂತರ ಕಳ್ಳರು ಯೋಧನನ್ನು ಬಾಂಗ್ಲಾದೇಶದ ಗಡಿ ಕಾವಲುಪಡೆಗೆ ಒಪ್ಪಿಸಿದ್ದಾರೆ. ಎರಡೂ ದೇಶಗಳ ನಡುವಿನ ಮಾತುಕತೆಯ ನಂತರ ಯೋಧನನ್ನು ವಾಪಸ್ ಕರೆತರುವ ಪ್ರಕ್ರಿಯೆಯನ್ನು ಪ್ರಾರಂಭಿಸಲಾಗಿದೆ. ಈ ಯೋಧನ ಹೆಸರು ಬೇದ್ ಪ್ರಕಾಶ್ ಎಂದಿದೆ.
#BREAKING : #BSF jawan detained by #Bangladeshi BGB after inadvertently crossing into #Bangladesh while chasing cattle smugglers amid dense fog, returned after flag meeting. pic.twitter.com/RCPrl4ULqP
— IDU (@defencealerts) December 21, 2025
ಗಡಿಯಲ್ಲಿ ಕರ್ತವ್ಯ ನಿರ್ವಹಿಸುತ್ತಿದ್ದಾಗ, ಗಡಿಯ ಒಂದು ಭಾಗದಿಂದ ಜಾನುವಾರುಗಳ ಒಂದು ಹಿಂಡು ಭಾರತದ ಗಡಿಯೊಳಗೆ ನುಗ್ಗಿತು. ಕಳ್ಳರನ್ನು ಓಡಿಸುವಾಗ ಬೇದ ಪ್ರಕಾಶ್ ಇತರ ಯೋಧರಿಗಿಂತ ಸ್ವಲ್ಪ ಮುಂದೆ ಹೋದರು. ದಟ್ಟ ಮಂಜಿನ ಕಾರಣದಿಂದ ಅವರು ತಮ್ಮ ತಂಡದಿಂದ ಬೇರ್ಪಟ್ಟರು. ಈ ಅವಕಾಶದ ಲಾಭ ಪಡೆದ ಬಾಂಗ್ಲಾದೇಶದ ಕಳ್ಳರು ಅವರನ್ನು ಜಾನುವಾರುಗಳೊಂದಿಗೆ ಬಾಂಗ್ಲಾದೇಶಕ್ಕೆ ಕರೆದೊಯ್ದರು.
ಅಮೆರಿಕದ ಸಂಸತ್ತಿನಲ್ಲಿ ಇರಾನ್ ವಿರುದ್ಧದ ಯುದ್ಧ ನಿಲ್ಲಿಸುವ ಪ್ರಸ್ತಾವನೆ ಅಂಗೀಕಾರ
India-Nepal Border Dispute : ನೇಪಾಳದೊಂದಿಗಿನ ಗಡಿ ವಿವಾದದಲ್ಲಿ ಮೂರನೇ ಪಕ್ಷದ ಅಗತ್ಯವಿಲ್ಲ! – ಭಾರತ
Trump Tariff : ಭಾರತ ಸೇರಿದಂತೆ ಹಲವು ದೇಶಗಳ ಮೇಲೆ ಶೇ. ೧೨.೫% ರಷ್ಟು ಹೆಚ್ಚುವರಿ ಆಮದು ಸುಂಕ ವಿಧಿಸಲಿರುವ ಟ್ರಂಪ್
Japan Illegal Mosque : ಜಪಾನ್ : ಪಾಕಿಸ್ತಾನ ನಿರ್ಮಿಸಿದ ಅಕ್ರಮ ಮಸೀದಿ ಧ್ವಂಸ !
ಫ್ರಾನ್ಸ್ ಸರಕಾರವು ಇನ್ನು ಮುಂದೆ ‘ಶೂನ್ಯ ಸಹಿಷ್ಣುತೆ’ಯ ನೀತಿಯನ್ನು ಅಳವಡಿಸಿಕೊಳ್ಳಲಿ !
ಅಂಬರನಾಥದಲ್ಲಿ ಕಸದ ರಾಶಿಯಲ್ಲಿ ಗೋವಂಶದ ಅವಶೇಷಗಳು ಪತ್ತೆ!