‘ಭಾರತದಲ್ಲಿ ಮುಸ್ಲಿಂ ಸಮುದಾಯದ ವಿರುದ್ಧ ದ್ವೇಷ ಹೆಚ್ಚುತ್ತಿದೆ!’ – ಪಾಕಿಸ್ತಾನದ ಪ್ರತಿಕ್ರಿಯೆ

ಬಿಹಾರ ಮುಖ್ಯಮಂತ್ರಿ ನಿತೀಶ ಕುಮಾರ ಮಹಿಳೆಯ ಹಿಜಾಬ್ ತೆಗೆದ ಘಟನೆಗೆ ಪಾಕಿಸ್ತಾನದ ಪ್ರತಿಕ್ರಿಯೆ

(ಹಿಜಾಬ್ ಎಂದರೆ ಮುಸ್ಲಿಂ ಮಹಿಳೆಯರ ತಲೆ ಮತ್ತು ಕುತ್ತಿಗೆಯನ್ನು ಮುಚ್ಚುವ ವಸ್ತ್ರ) (ನಕಾಬ್ ಎಂದರೆ ಮುಖವನ್ನು ಮುಚ್ಚುವ ಜಾಲರಿಯುಳ್ಳ ವಸ್ತ್ರ) (ಬುರ್ಖಾ ಎಂದರೆ ಇಡೀ ದೇಹವನ್ನು ಮುಚ್ಚುವ ವಸ್ತ್ರ)

ಇಸ್ಲಾಮಾಬಾದ್ (ಪಾಕಿಸ್ತಾನ) – “ಹಿರಿಯ ನಾಯಕರೊಬ್ಬರು ಮುಸ್ಲಿಂ ಮಹಿಳೆಯ ಹಿಜಾಬ್ ಅನ್ನು ಬಲವಂತವಾಗಿ ತೆಗೆಯುವುದು ದೊಡ್ಡ ತಪ್ಪು. ಭಾರತದಲ್ಲಿ ಮುಸ್ಲಿಂ ಸಮುದಾಯದ ವಿರುದ್ಧ ದ್ವೇಷ ಹೆಚ್ಚುತ್ತಿದೆ. ಇಂತಹ ಘಟನೆಗಳಿಂದ ಭಾರತದಲ್ಲಿ ಮುಸ್ಲಿಂ ಮಹಿಳೆಯರ ಅವಮಾನವನ್ನು ಸಾಮಾನ್ಯಗೊಳಿಸುವ ಅಪಾಯವಿದೆ. ಅಲ್ಲದೆ, ಇದು ಮುಸ್ಲಿಮರ ವಿರುದ್ಧದ ಅಸಹಿಷ್ಣುತೆಯನ್ನು ಉತ್ತೇಜಿಸುತ್ತದೆ,” ಎಂದು ಪಾಕಿಸ್ತಾನದ ವಿದೇಶಾಂಗ ಸಚಿವಾಲಯದ ವಕ್ತಾರ ತಾಹಿರ್ ಹುಸೇನ್ ಅಂದ್ರಾಬಿ ಪತ್ರಿಕಾಗೋಷ್ಠಿಯೊಂದರಲ್ಲಿ ಪ್ರತಿಕ್ರಿಯಿಸಿದರು.

ಬಿಹಾರದಲ್ಲಿ ಆಯುಷ್ ವೈದ್ಯರಿಗೆ ನೇಮಕಾತಿ ಪತ್ರ ವಿತರಿಸುವಾಗ ಮುಖ್ಯಮಂತ್ರಿ ನಿತೀಶ ಕುಮಾರ ಅವರು ಮಹಿಳಾ ವೈದ್ಯೆ ನುಸ್ರತ್ ಅವರಿಗೆ ಹಿಜಾಬ್ ಬಗ್ಗೆ ಪ್ರಶ್ನಿಸಿ, ನಂತರ ಸ್ವತಃ ಅವರ ಹಿಜಾಬ್ ತೆಗೆದಿದ್ದರು. ಈ ಘಟನೆಯ ಕುರಿತು ಪಾಕಿಸ್ತಾನ ಈ ರೀತಿ ಪ್ರತಿಕ್ರಿಯಿಸಿದೆ. ಇದಕ್ಕೂ ಮೊದಲು ಪಾಕಿಸ್ತಾನದ ಕುಖ್ಯಾತ ಗ್ಯಾಂಗ್‌ಸ್ಟರ್ ಭಾಟಿ ಎಂಬಾತ ನಿತೀಶ ಕುಮಾರ ಅವರಿಗೆ ಬೆದರಿಕೆ ಹಾಕಿದ್ದನು. ಈ ಹಿನ್ನೆಲೆಯಲ್ಲಿ ನಿತೀಶ ಕುಮಾರ ಅವರ ಭದ್ರತೆಯನ್ನು ಇನ್ನಷ್ಟು ಹೆಚ್ಚಿಸಲಾಗಿದೆ.

ಸಂಪಾದಕೀಯ ನಿಲುವು

  • ಪಾಕಿಸ್ತಾನದಲ್ಲಿ ಕಳೆದ 78 ವರ್ಷಗಳಿಂದ ಹಿಂದೂಗಳ ನರಮೇಧ ನಡೆಯುತ್ತಿದೆ. 1947ರಲ್ಲಿ ಶೇ. 14% ರಷ್ಟಿದ್ದ ಹಿಂದೂಗಳ ಸಂಖ್ಯೆ ಈಗ ಕೇವಲ ಶೇ. 1% ಕ್ಕೆ ಇಳಿದಿದೆ. ಇದರ ಬಗ್ಗೆ ಪಾಕಿಸ್ತಾನ ಯಾವಾಗ ಮಾತನಾಡುತ್ತದೆ? ಮತ್ತು ಭಾರತವು ಪಾಕಿಸ್ತಾನವನ್ನು ಈ ಬಗ್ಗೆ ಯಾವಾಗ ಪ್ರಶ್ನಿಸುತ್ತದೆ?
  • ಪಾಶ್ಚಾತ್ಯ ದೇಶಗಳಂತೆ ಭಾರತದಲ್ಲೂ ಈಗ ಸಾರ್ವಜನಿಕ ಸ್ಥಳಗಳಲ್ಲಿ ಹಿಜಾಬ್, ನಕಾಬ್ ಮತ್ತು ಬುರ್ಖಾ ಧರಿಸುವುದನ್ನು ನಿಷೇಧಿಸಬೇಕು!