
ನವದೆಹಲಿ – ಹಿಂದೂತ್ವನಿಷ್ಠ ಮಯಾಂಕ್ ಜೈನ್ ಅವರ ‘ಕ್ರಿಮ್ಸನ್ ಕ್ರಿಸೆಂಟ್ – ದ ಲಾಸ್ಟ್ ಕ್ವಾರ್ಟರ್’ ಎಂಬ ಸಾಕ್ಷ್ಯಚಿತ್ರವನ್ನು ಡಿಸೆಂಬರ್ 12 ರಂದು ‘ಕುರುಕ್ಷೇತ್ರ ಗುರುಕುಲ ಫೌಂಡೇಶನ್ ಧರ್ಮ ಅಲಂಕಾರ’ ಕಾರ್ಯಕ್ರಮದಲ್ಲಿ ಜಗದ್ಗುರು ಜ್ಯೋತಿರ್ಮಠ ಶಂಕರಾಚಾರ್ಯ ಶ್ರೀ ಸ್ವಾಮಿ ಅವಿಮುಕ್ತೇಶ್ವರಾನಂದ ಸರಸ್ವತಿ ಅವರು ಲೋಕಾರ್ಪಣೆಗೊಳಿಸಿದರು. ಈ ಸಂದರ್ಭದಲ್ಲಿ ಶಂಕರಾಚಾರ್ಯರು ಅವರಿಗೆ ಪ್ರಶಸ್ತಿ ನೀಡಿ ಗೌರವಿಸಿದರು. ಈ ಬಗ್ಗೆ ಪ್ರತಿಕ್ರಿಯಿಸಿದ ಮಯಾಂಕ್ ಜೈನ್, “ಇದು ಕೇವಲ ಪ್ರಶಸ್ತಿಯಲ್ಲ, ಬದಲಿಗೆ ಒಂದು ಸಾಂಸ್ಕೃತಿಕ ಚಳವಳಿಗೆ ಸಂದ ಗೌರವವಾಗಿದೆ” ಎಂದು ಹೇಳಿದರು.
🕉️ शंकराचार्य परम्परा | धर्म | सभ्यता 🕉️
🪔📜🦢⚖️On 12 December 2025, in Delhi, 🕉️ Shri Shankaracharya Avimukteshwarananda Saraswati ji 🕉️ released my documentary film, https://t.co/wyEM4OyDXa at a large public ceremony organised by @sdeo76 , and graciously conferred a medal… pic.twitter.com/WtTCRUheON
— Mayank Jain (@mayankjain100) December 16, 2025
‘ಕ್ರಿಮ್ಸನ್ ಕ್ರಿಸೆಂಟ್ – ದ ಲಾಸ್ಟ್ ಕ್ವಾರ್ಟರ್’ ಸಾಕ್ಷ್ಯಚಿತ್ರವು ಆಫ್ರಿಕಾ, ದಕ್ಷಿಣ ಏಷ್ಯಾ ಮತ್ತು ಆಗ್ನೇಯ ಏಷ್ಯಾದ ಮದರಸಾಗಳ ಮೂಲಕ ವಹಾಬಿ ಸಿದ್ಧಾಂತವು (ಕುರಾನ್ ಮತ್ತು ಸುನ್ನತ್ಗಳ ಅಕ್ಷರಶಃ ಅರ್ಥಕ್ಕೆ ಒತ್ತು ನೀಡುವ ಸಿದ್ಧಾಂತ) ಹೇಗೆ ಹರಡುತ್ತಿದೆ ಎಂಬ ಮಾಹಿತಿಯನ್ನು ಒಳಗೊಂಡಿದೆ. ಈ ಸಿದ್ಧಾಂತವನ್ನು ಹರಡಿದ ಸೌದಿ ಅರೇಬಿಯಾದಲ್ಲಿ ಇಂದು ರಾಜಕುಮಾರ ಮೊಹಮ್ಮದ್ ಬಿನ್ ಸಲ್ಮಾನ್ ಅವರ ನಾಯಕತ್ವದಲ್ಲಿ ಸುಧಾರಣೆಯ ಗಾಳಿ ಬೀಸುತ್ತಿದೆ. “ರಾಜಕುಮಾರ ಮೊಹಮ್ಮದ್ ಬಿನ್ ಸಲ್ಮಾನ್ ಅವರು ಕಟ್ಟರ್ ಇಸ್ಲಾಂನಲ್ಲಿ ಸುಧಾರಣೆ ತರುತ್ತಾರೆಯೇ?” ಎಂಬ ಪ್ರಶ್ನೆಯನ್ನು ಈ ಸಾಕ್ಷ್ಯಚಿತ್ರದಲ್ಲಿ ಎತ್ತಲಾಗಿದೆ.
ಹಿಂದೂತ್ವನಿಷ್ಠ ಮೀನಾಕ್ಷಿ ಶರಣ್ ಅವರಿಗೆ ‘ದೇವಿ ದುರ್ಗಾ’ ಪ್ರಶಸ್ತಿ ನೀಡಿ ಗೌರವ

ಕಳೆದ 1 ಸಾವಿರದ 400 ವರ್ಷಗಳಲ್ಲಿ ಸನಾತನ ಧರ್ಮದ ರಕ್ಷಣೆಗಾಗಿ ಪ್ರಾಣಾರ್ಪಣೆ ಮಾಡಿದ 80 ಕೋಟಿಗೂ ಹೆಚ್ಚು ಹಿಂದೂಗಳ ಸ್ಮರಣಾರ್ಥವಾಗಿ ‘ಅಯೋಧ್ಯಾ ಫೌಂಡೇಶನ್’ನ ಸಂಸ್ಥಾಪಕಿ ಮೀನಾಕ್ಷಿ ಶರಣ್ ಅವರು ಕಳೆದ 10 ವರ್ಷಗಳಿಂದ ‘ಸಾಮೂಹಿಕ ತರ್ಪಣ’ ಕಾರ್ಯಕ್ರಮವನ್ನು ನಡೆಸುತ್ತಿದ್ದಾರೆ.
शुभकामनाएं मीनाक्षी जी 🌷🌷 https://t.co/1Ncftn0Jza
— SSandeep Deo | संदीप देव (@sdeo76) December 15, 2025
ಅವರ ಈ ಸೇವೆಯನ್ನು ಗುರುತಿಸಿ ಸ್ವಾಮಿ ಅವಿಮುಕ್ತೇಶ್ವರಾನಂದರು ಅವರಿಗೆ ‘ದೇವಿ ದುರ್ಗಾ’ ಪ್ರಶಸ್ತಿ ನೀಡಿ ಗೌರವಿಸಿದರು. “ಶಂಕರಾಚಾರ್ಯರ ಆಶೀರ್ವಾದದಿಂದ ಈ ಉಪಕ್ರಮವನ್ನು ನಡೆಸುತ್ತಿರುವ ಹಿಂದೂತ್ವನಿಷ್ಠರ ಸಂಕಲ್ಪವು ಇನ್ನಷ್ಟು ದೃಢವಾಗಿದೆ” ಎಂದು ಮೀನಾಕ್ಷಿ ಶರಣ್ ತಿಳಿಸಿದರು.
ಕೇರಳಮ್ದಲ್ಲಿ ‘ಇಸ್ಲಾಂ ಫ್ರೆಂಡ್ಲಿ’ ಜಿಮ್ ಕುರಿತು ವಿವಾದ
ಪುಣೆ ನಗರದಲ್ಲಿ ಮತ್ತೆ ‘ಕಾರ್ಪೊರೇಟ್ ಜಿಹಾದ್’ ಪ್ರಕರಣ
‘ದಾರುಲ್ ಉಲೂಮ್ ದೇವಬಂದ್’ ಭಯೋತ್ಪಾದಕರ ಕೇಂದ್ರವಾಗಿರುವುದರಿಂದ ಅದನ್ನು ನೆಲಸಮ ಮಾಡಿ ! – ಹಿಂದೂ ರಕ್ಷಾ ದಳದ ಬೇಡಿಕೆ
ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಅವರನ್ನು ಭಗವಾನ್ ಶಿವನ ರೂಪದಲ್ಲಿ ತೋರಿಸಿದ ‘ವಿಶ್ವವಾಣಿ’ ಪತ್ರಿಕೆ !
‘ಭಂಡಾರ ಎಂದರೆ ಶುದ್ಧ ಅರಿಶಿನ’ ಎಂದು ಘೋಷಿಸುವಂತೆ ಅನ್ನ ಮತ್ತು ಔಷಧ ಆಡಳಿತಕ್ಕೆ (FDA) ಆಗ್ರಹ!
ಪಾನ್ ಮಸಾಲಾ, ಗುಟ್ಕಾ ಮತ್ತು ಕಲಬೆರಕೆ ಆಹಾರ ಪದಾರ್ಥಗಳ ಒಂದೂವರೆ ಕೋಟಿಗೂ ಹೆಚ್ಚು ಮೌಲ್ಯದ ದಾಸ್ತಾನು ವಶ