ಮಂದಿರಗಳ ನಿರ್ವಹಣೆಯನ್ನು ಸರಕಾರದ ಬದಲಾಗಿ ಭಕ್ತರೇ ಮಾಡಬೇಕು! – ಪ.ಪೂ. ಸರಸಂಘಚಾಲಕ ಡಾ. ಮೋಹನಜಿ ಭಾಗವತ್

ಚೆನ್ನೈ (ತಮಿಳುನಾಡು) – ಪ್ರಸ್ತುತ ದೇಶದಲ್ಲಿ ಮಂದಿರಗಳ ನಿರ್ವಹಣೆಯನ್ನು ಸರಕಾರವು ಮಾಡುತ್ತಿದೆ. ಈ ಪದ್ಧತಿಯನ್ನು ಬದಲಾಯಿಸಿ ಮಂದಿರದ ನಿರ್ವಹಣೆಯನ್ನು ಭಕ್ತರೇ ನೋಡಿಕೊಳ್ಳಬೇಕು. ಕೆಲವು ಮಂದಿರಗಳ ನಿರ್ವಹಣೆಯನ್ನು ಖಾಸಗಿ ವ್ಯಕ್ತಿಗಳು ಉತ್ತಮವಾಗಿ ನಡೆಸುತ್ತಾರೆ; ಇನ್ನೂ ಕೆಲವು ಮಂದಿರಗಳ ನಿರ್ವಹಣೆಯನ್ನು ಚೆನ್ನಾಗಿ ನಡೆಸಲಾಗುವುದಿಲ್ಲ. ಅದೇ ರೀತಿ ಕೆಲವು ಮಂದಿರಗಳ ನಿರ್ವಹಣೆಯನ್ನು ಸರಕಾರವು ಉತ್ತಮವಾಗಿ ನಡೆಸುತ್ತದೆ; ಆದರೆ ಕೆಲವು ಮಂದಿರಗಳ ನಿರ್ವಹಣೆಯನ್ನು ಉತ್ತಮವಾಗಿ ನಡೆಸಲಾಗುವುದಿಲ್ಲ. ಪ್ರಸ್ತುತ ಮಂದಿರಗಳ ನಿರ್ವಹಣೆಯನ್ನು ನಡೆಸಲು ಒಂದು ವ್ಯವಸ್ಥೆಯ ಅಗತ್ಯವಿದೆ. ಈ ಸಮಸ್ಯೆಗೆ ಪರಿಹಾರ ಕಂಡುಕೊಳ್ಳಲು ಒಂದು ಅಖಿಲ ಭಾರತ ಸಮಿತಿ, ಪ್ರಾಂತೀಯ ಸಮಿತಿ, ಜಿಲ್ಲಾ ಸಮಿತಿ ಮತ್ತು ಸ್ಥಳೀಯ ಸಮಿತಿ ಇರಬೇಕು. ಒಮ್ಮೆ ಈ ವ್ಯವಸ್ಥೆ ನಿರ್ಮಾಣವಾದರೆ, ಮಂದಿರಗಳ ನಿರ್ವಹಣೆಯನ್ನು ಸರಕಾರದ ಬದಲಾಗಿ ಭಕ್ತರು ಮಾಡಬೇಕೆ? ಎಂಬ ಬಗ್ಗೆ ಇರುವ ಎಲ್ಲ ಪ್ರಶ್ನೆಗಳಿಗೂ ಪರಿಹಾರ ಸಿಗುತ್ತದೆ ಎಂದು ಪ.ಪೂ. ಸರಸಂಘಚಾಲಕ ಡಾ. ಮೋಹನಜಿ ಭಾಗವತ್ ಅವರು ಇಲ್ಲಿ ಒಂದು ಕಾರ್ಯಕ್ರಮದಲ್ಲಿ ಮಾತನಾಡುವಾಗ ಹೇಳಿದರು.