ಭಾರತಕ್ಕೆ ಕೆಣಕುವವರನ್ನು ನಾವು ಬಿಡುವುದಿಲ್ಲ! – ಸಂಜಯ್ ಸೇಠ್, ಕೇಂದ್ರ ರಕ್ಷಣಾ ರಾಜ್ಯ ಸಚಿವರು Shankanad Mahotsav Delhi 2025

ದೆಹಲಿ, ಡಿಸೆಂಬರ್ 13 (ವರದಿ) – ಇದು ಇಂದಿನ ಹೊಸ ಭಾರತವಾಗಿದೆ, ಸಾಧು-ಸಂತರ ಆಶೀರ್ವಾದದಿಂದ ಪ್ರಜ್ವಲಿತವಾಗಿರುವ ಇದು ಯಾರ ಮುಂದೆಯೂ ತಲೆಬಾಗುವುದಿಲ್ಲ ಮತ್ತು ಜಗತ್ತಿಗೆ ಭರವಸೆಯ ಹೊಸ ದಿಕ್ಕನ್ನು ನೀಡುತ್ತಿದೆ. ‘ಸನಾತನ ಧರ್ಮ’ವು ಕೇವಲ ವಿಶ್ವಶಾಂತಿ ಮತ್ತು ಮಾನವ ಕಲ್ಯಾಣದ ಮೂಲವಾಗಿದೆ; ಆದರೆ ಯಾರಾದರೂ ಗಡಿ ಮೀರಿದರೆ, ‘ಆಪರೇಷನ್ ಸಿಂಧೂರ್’ನಲ್ಲಿ ನಮ್ಮ ಸೈನಿಕರು ತೋರಿಸಿದ ಶೌರ್ಯವು ಕೆಣಕುವವರನ್ನು ಈ ದೇಶ ಬಿಡುವುದಿಲ್ಲ ಎಂಬುದನ್ನು ಸಾಬೀತುಪಡಿಸುತ್ತದೆ. ಇದು ಕೇವಲ ಭೂಮಿ ಅಲ್ಲ, ಇದು ತರ್ಪಣ ಮತ್ತು ಅರ್ಪಣೆ ಮಾಡುವ ಪವಿತ್ರ ಭೂಮಿಯಾಗಿದೆ, ಇಲ್ಲಿ ಭೂಭಾಗವನ್ನು ‘ತಾಯಿ’ ಮತ್ತು ಹಸುವನ್ನು ‘ಗೋಮಾತೆ’ ಎಂದು ಪರಿಗಣಿಸಲಾಗುತ್ತದೆ. ನಮ್ಮ ಧರ್ಮವು ಕೇವಲ ಆಧ್ಯಾತ್ಮಿಕವಾಗಿಲ್ಲ, ಇದು ವೈಜ್ಞಾನಿಕ ಮತ್ತು ಸಾವಿರಾರು ವರ್ಷಗಳ ಹಿಂದಿನ ಶಾಸ್ತ್ರಗಳನ್ನು ಆಧರಿಸಿದೆ. 500 ವರ್ಷಗಳ ಕಾಯುವಿಕೆಯ ನಂತರ ರಾಮಜನ್ಮಭೂಮಿಯಲ್ಲಿ ಶ್ರೀರಾಮನು ವಿರಾಜಮಾನವಾಗಿದ್ದು ನಮ್ಮ ಸಾಮೂಹಿಕ ತಪಸ್ಸಿನ ಫಲವಾಗಿದೆ. ಈ ಭೂಮಿ ಮಹಾರಾಣಾ ಪ್ರತಾಪ್, ಪುಣ್ಯಶ್ಲೋಕ ಅಹಲ್ಯಾಬಾಯಿ ಹೋಳ್ಕರ್ ಮತ್ತು ರಾಣಿ ಲಕ್ಷ್ಮೀಬಾಯಿ ಅವರ ಶೌರ್ಯದ ಮತ್ತು ವಿಶ್ವ ಕಲ್ಯಾಣ ಬಯಸುವ ಸನಾತನ ಸಂಸ್ಕೃತಿಯಾಗಿದೆ ಎಂದು ಕೇಂದ್ರ ರಕ್ಷಣಾ ರಾಜ್ಯ ಸಚಿವ ಶ್ರೀ. ಸಂಜಯ್ ಸೇಠ್ ಅವರು ಹೇಳಿದರು.

ಅವರು ಮಾತುಮುಂದುವರೆಸಿ, “ಗುಲಾಮಗಿರಿಯ ಬೇಡಿಗಳನ್ನು ಕಡಿದು ನಿಂತಿರುವ ಆತ್ಮವಿಶ್ವಾಸೀ ‘ಸನಾತನ ಭಾರತ’! ಈ ಭೂಮಿ ‘ವಿಶ್ವದ ಕಲ್ಯಾಣ’ವನ್ನೇ ಅಂತಿಮ ಗುರಿ ಎಂದು ನಂಬಿರುವ ಸಾವಿರಾರು ವರ್ಷಗಳ ಸನಾತನ ಸಂಸ್ಕೃತಿಯ ಕಥೆಯಾಗಿದೆ. ಮನೆ ಮನೆಗಳಲ್ಲಿ ‘ಸತ್ಯನಾರಾಯಣ’ ಪೂಜೆ ನಡೆಯುವಲ್ಲಿ, ನಾವು ನಮಗಾಗಿ ಅಲ್ಲ, ಮಾನವ ಸಮಾಜದ ಕಲ್ಯಾಣಕ್ಕಾಗಿ ಪ್ರಾರ್ಥಿಸುತ್ತೇವೆ. ಇದೇ ಭೂಮಿಯಲ್ಲಿ ಛತ್ರಪತಿ ಶಿವಾಜಿ ಮಹಾರಾಜರು ನೌಕಾಪಡೆಯ ಅಡಿಪಾಯ ಹಾಕಿದರು, ಮಹಾರಾಣಾ ಪ್ರತಾಪ್ ಮತ್ತು ರಾಣಿ ಲಕ್ಷ್ಮೀಬಾಯಿಯಂತಹ ವೀರರು ಶೌರ್ಯ ಮೆರೆದರು, ಮತ್ತು ಮೂರು ಶತಮಾನಗಳ ಹಿಂದೆ ಅಹಲ್ಯಾಬಾಯಿ ಹೋಳ್ಕರ್ ಅವರು ನ್ಯಾಯ ಮತ್ತು ಪಾರದರ್ಶಕತೆಯ ಆದರ್ಶವನ್ನು ಸ್ಥಾಪಿಸಿ ಸ್ತ್ರೀ ವಂದನೆಯ ಮಹತ್ವವನ್ನು ಸಾಬೀತುಪಡಿಸಿದರು; ಆದರೆ ದುರದೃಷ್ಟವಶಾತ್, ಕಳೆದ 60-65 ವರ್ಷಗಳಲ್ಲಿ ಅಕ್ಬರ್-ಬಾಬರ್‌ನಂತಹ ಆಕ್ರಮಣಕಾರರನ್ನು ‘ಮಹಾನ್’ ಎಂದು ಕರೆದು ನಮ್ಮನ್ನು ಗುಲಾಮಗಿರಿ ಮನಸ್ಥಿತಿಯಲ್ಲಿ ಬಂಧಿಸಲಾಗಿತ್ತು. ಈಗ ಈ ಹೊಸ ಭಾರತ ಜಾಗೃತಗೊಂಡಿದೆ. ಆ ಗುಲಾಮಗಿರಿಯ ಎಲ್ಲ ಚಿಹ್ನೆಗಳು ಮತ್ತು ಬೇಡಿಗಳನ್ನು ಸಂಪೂರ್ಣವಾಗಿ ಮುರಿಯಲಾಗುತ್ತಿದೆ. ಯಾವ ಭೂಮಿಗಾಗಿ ಮತಾಂತರವನ್ನು ಒಪ್ಪದೆ ಗುರು ಗೋವಿಂದ ಸಿಂಗ್ ಅವರ ಪುತ್ರರು ಸರ್ವೋಚ್ಚ ಬಲಿದಾನ ನೀಡಿದರೋ, ಆ ಡಿಸೆಂಬರ್ 26 ನ್ನು ನಾವು ‘ಬಲಿದಾನ ದಿವಸ’ ಎಂದು ಆಚರಿಸುವ ಸಂಕಲ್ಪವನ್ನು ಇಂದಿನ ದಿನ ಮಾಡೋಣ.”