200 ಕ್ಕೂ ಹೆಚ್ಚು ಅಪರಾಧಗಳ ಪ್ರಕರಣಕ್ಕೆ ಸಂಗ್ರಹಿಸಿದ ಸಾಕ್ಷ್ಯಗಳು ಕಣ್ಮರೆಯಾದ ಹಿನ್ನೆಲೆಯಲ್ಲಿ ಇಬ್ಬರು ಪೋಲಿಸ್ ಕಾನ್‌ಸ್ಟೆಬಲ್‌ಗಳ ಅಮಾನತು!

ಧುಳೆ ಜಿಲ್ಲೆಯ ಪೊಲೀಸ್ ಠಾಣೆಯಲ್ಲಿ ಆಘಾತಕಾರಿ ಘಟನೆ!

ನಿಜಾಮ್‌ಪುರ (ಧುಳೆ ಜಿಲ್ಲೆ) – ಇಲ್ಲಿನ ಪೊಲೀಸ್ ಠಾಣೆಯಲ್ಲಿ ಹಲವು ವರ್ಷಗಳಿಂದ ಬಾಕಿಯಿರುವ ಸಾಕ್ಷ್ಯಗಳ ಪರಿಶೀಲನೆಯಲ್ಲಿ, ಪೋಲೀಸ್ ಠಾಣೆಯಲ್ಲಿ ದಾಖಲಾದ ೨00ಕ್ಕೂ ಹೆಚ್ಚು ಅಪರಾಧಗಳ ಸಾಕ್ಷ್ಯಗಳು  ಕಾಣೆಯಾಗಿದೆ. ಈ ಪ್ರಕರಣದಲ್ಲಿ ಪೋಲಿಸ್ ಕಾನ್‌ಸ್ಟೆಬಲ್‌ಗಳಾದ ಮಹೇಂದ್ರ ಜಾಧವ್ ಮತ್ತು ಶರದ್ ಠಾಕ್ರೆ ಅವರ ವಿರುದ್ಧ ಕಟ್ಟುನಿಟ್ಟಿನ ಶಿಸ್ತು ಕ್ರಮ ಕೈಗೊಂಡು ಅವರನ್ನು ಅಮಾನತುಗೊಳಿಸಲಾಗಿದೆ. ಈ ಸಿಬ್ಬಂದಿಗಳಿಗೆ ಅನೇಕ ಬಾರಿ ಸೂಚನೆಗಳನ್ನು ನೀಡಲಾಯಿತು. ತನಿಖೆಗಾಗಿ ಸಾಕಷ್ಟು ಸಮಯ ನೀಡಲಾಯಿತು ಹಾಗೂ ಸ್ಪಷ್ಟೀಕರಣ ನೀಡಲು ಅವಕಾಶವನ್ನೂ ನೀಡಲಾಯಿತು; ಆದರೆ ಅವರು ಆರೋಪವನ್ನು ಒಪ್ಪಿಸಲಿಲ್ಲ. ಈ ಮುದ್ದೇಮಾಲಿನಲ್ಲಿ ನ್ಯಾಯಾಲಯದ ಪ್ರಕ್ರಿಯೆಗೆ ಬೇಕಾದ ಅಮೂಲ್ಯವಾದ ವಸ್ತುಗಳು ಮತ್ತು  ಪ್ರಮುಖ ಸಾಕ್ಷ್ಯಗಳೂ ಸೇರಿದ್ದವು.

ಸಂಪಾದಕೀಯ ನಿಲುವು

  • ಇಂತಹವರ ಅಮಾನತು ಸಾಲದು, ಅವರನ್ನು ವಜಾಗೊಳಿಸಬೇಕು!
  • ದಾಖಲಾತಿಗಳು ಹೇಗೆ ಕಣ್ಮರೆಯಾಗುತ್ತದೆ? ಅದನ್ನು ಸಂರಕ್ಷಿಸುವಲ್ಲಿ ಹಿರಿಯ ಅಧಿಕಾರಿಗಳಿಗೆ ಯಾವುದೇ ಜವಾಬ್ದಾರಿ ಇಲ್ಲವೇ? ಇಂತಹ ನಿಷ್ಕ್ರಿಯ ಅಧಿಕಾರಿಗಳ ಮೇಲೆ ಯಾವಾಗ ಕ್ರಮ ಕೈಗೊಳ್ಳಲಾಗುವುದು?