ಮಾದಕ ಪದಾರ್ಥ ಮಾರಾಟ ಮಾಡುವ ಮುಸ್ಲಿಂ ಯುವಕರನ್ನು ಬಂಧಿಸಿದ ಕಾರಣ ಮುಸಲ್ಮಾನರ ಗುಂಪಿನಿಂದ ಪೊಲೀಸ್ ಠಾಣೆಯಲ್ಲಿ ಗಲಾಟೆ – Mumbai Drugs Muslims Protest

ವಿಕ್ರೋಳಿ (ಮುಂಬಯಿ) ಇಲ್ಲಿ ನಡೆದ ಘಟನೆ

ಮುಂಬಯಿ – ವಿಕ್ರೋಳಿಯಲ್ಲಿ ಅಮಲು ಪದಾರ್ಥಗಳನ್ನು ಮಾರಾಟ ಮಾಡುತ್ತಿದ್ದ ಮುಸಲ್ಮಾನ ಯುವಕರನ್ನು ಹಿಡಿದು ಶಿವಸೈನಿಕರು ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಲು ಹೋಗಿದ್ದಾಗ, ಮುಸಲ್ಮಾನರ ಗುಂಪು ವಿಕ್ರೋಳಿ ಪೊಲೀಸ್ ಠಾಣೆಗೆ ನುಗ್ಗಿ ಗಲಾಟೆ ಎಬ್ಬಿಸಿತು. ಈ ಸಮಯದಲ್ಲಿ ಮುಸಲ್ಮಾನ ಮಹಿಳೆಯರು ಪೊಲೀಸರ ಮೇಲೆ ಹಲ್ಲೆ ನಡೆಸಿದರು. (ಮುಸಲ್ಮಾನ ಪುರುಷರು ಮಾತ್ರವಲ್ಲ, ಮಹಿಳೆಯರೂ ಈಗ ಪೊಲೀಸರ ಮೇಲೆ ದಾಳಿ ಮಾಡಲು ಪ್ರಾರಂಭಿಸಿದ್ದಾರೆ, ಇದು ನಾಚಿಕೆಗೇಡಿನ ಸಂಗತಿ! – ಸಂಪಾದಕರು) ಆದರೆ, ಪೊಲೀಸರು ಈ ಸಮಯದಲ್ಲಿ ಸೌಮ್ಯ ನಿಲುವು ತೆಗೆದುಕೊಂಡರು. ಈ ಪ್ರಕರಣದಲ್ಲಿ ಹಿನಾ ತಸ್ವೀರ್ ಖುರೇಶಿ ಮತ್ತು ಶಬಾನಾ ಖಾಸಿಂ ಶೇಖ್ ಎಂಬ ಮಹಿಳೆಯರ ವಿರುದ್ಧ ವಿಕ್ರೋಳಿ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದೆ. ಡಿಸೆಂಬರ್ 2 ರ ರಾತ್ರಿ ಈ ಘಟನೆ ನಡೆದಿದೆ.

1. ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸುವ ಮೊದಲು ರಾತ್ರಿ 11:30 ಕ್ಕೆ ವಿಕ್ರೋಳಿ (ಪೂರ್ವ) ಯ ಟಾಗೋರ್ ನಗರದಲ್ಲಿರುವ ರೂಬಿ ಆಸ್ಪತ್ರೆ ಬಳಿ ಮಾದಕ ಪದಾರ್ಥಗಳನ್ನು ಮಾರಾಟ ಮಾಡುತ್ತಿದ್ದ ಮುಸಲ್ಮಾನ ಯುವಕರನ್ನು ಶಿವಸೈನಿಕರು ರೆಡ್ ಹ್ಯಾಂಡಾಗಿ ಹಿಡಿದರು.

2. ಶಿವಸೇನೆಯ ಈಶಾನ್ಯ ಮುಂಬಯಿ ಯುವಸೇನೆಯ ಅಧ್ಯಕ್ಷರಾದ ಸರ್ದಾರ್ ಗುರ್ಜ್ಯಾತೆ ಸಿಂಗ್ ಅವರೊಂದಿಗೆ ಇತರ ಶಿವಸೈನಿಕರು ಮಾದಕ ಪದಾರ್ಥ ಮಾರಾಟ ಮಾಡುತ್ತಿದ್ದ ಮುಸಲ್ಮಾನ ಯುವಕರನ್ನು ಹಿಡಿದರು.

3. ಶಿವಸೈನಿಕರು ಘಟನಾ ಸ್ಥಳಕ್ಕೆ ಪೊಲೀಸರನ್ನು ಕರೆಸಿದರು; ಆದರೆ ಅದೇ ಸಮಯದಲ್ಲಿ, ಮಾದಕ ಪದಾರ್ಥ ಮಾರಾಟ ಮಾಡುತ್ತಿದ್ದ ಮುಸಲ್ಮಾನ ಯುವಕರ ಬೆಂಬಲಕ್ಕಾಗಿ ದೊಡ್ಡ ಸಂಖ್ಯೆಯಲ್ಲಿ ಮುಸಲ್ಮಾನರ ಗುಂಪು ಅಲ್ಲಿಗೆ ಬಂತು.

4. ಮುಸಲ್ಮಾನರ ಗುಂಪು ಘಟನಾ ಸ್ಥಳದಲ್ಲಿ ಕೂಗಾಡುತ್ತಾ, ಮಾದಕ ಪದಾರ್ಥ ಮಾರಾಟ ಮಾಡುತ್ತಿದ್ದ ಯುವಕರು ಓಡಿಹೋಗಲು ಸಹಾಯ ಮಾಡಿದರು. ಈ ಪ್ರಕರಣದಲ್ಲಿ ಶಿವಸೈನಿಕ ಗಣೇಶ ರೋಕಡೆ ಅವರು ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದು, ಹಿನಾ ಖುರೇಶಿ, ತಸ್ವೀರ್ ಖುರೇಶಿ ಮತ್ತು ಮೊಸೀನ್ ವಿರುದ್ಧ ಪ್ರಕರಣ ದಾಖಲಾಗಿದೆ.

5. ಈ ಘಟನೆಯ ನಂತರ, ಘಟನಾ ಸ್ಥಳದಲ್ಲಿ ಗಲಭೆ ಮಾಡಿದ ಮಹಿಳೆಯರನ್ನು ಪೊಲೀಸರು ವಿಕ್ರೋಳಿ ಪೊಲೀಸ್ ಠಾಣೆಗೆ ಕರೆತಂದರು; ಆದರೆ ಅಲ್ಲಿಯೂ ಈ ಮಹಿಳೆಯರು ಗಲಭೆ ಮಾಡಿದರು.

ಸಂಪಾದಕೀಯ ನಿಲುವು

  • ಮುಸಲ್ಮಾನರು ಪೊಲೀಸ್ ಠಾಣೆಗೆ ನುಗ್ಗಿ ಗದ್ದಲ ಎಬ್ಬಿಸುವಷ್ಟು ಉದ್ಧಟರಾಗಿದ್ದರೆ ಮತ್ತು ಇದರ ಮೇಲೆ ಪೊಲೀಸರು ಸೌಮ್ಯ ನಿಲುವು ತೆಗೆದುಕೊಳ್ಳುತ್ತಿದ್ದರೆ, ಇದು ಪೊಲೀಸರಿಗೆ ನಾಚಿಕೆಗೇಡಿನ ಸಂಗತಿ.
  • ಮಾದಕ ಪದಾರ್ಥ ಕಳ್ಳಸಾಗಣೆದಾರರಿಗೆ ಬೆಂಬಲ ನೀಡಲು ಸೇರಿರುವ ಗುಂಪಿಗೂ ಶಿಕ್ಷೆಯಾಗಬೇಕು; ಇದರಿಂದ ಅವರು ದಾರಿಗೆ ಬರುತ್ತಾರೆ.