85 ಸಾವಿರದ 450 ಹೆಕ್ಟೇರ್ ಪ್ರದೇಶದಲ್ಲಿ ಕೃಷಿಗೆ ಪ್ರಾರಂಭ!

ಮುಂಬಯಿ, ಡಿಸೆಂಬರ್ ೧ – ಗುಜರಾತ ರಾಜ್ಯದ ಮಾದರಿಯಂತೆಯೇ ಮಹಾರಾಷ್ಟ್ರದಲ್ಲಿಯೂ ನೈಸರ್ಗಿಕ ಕೃಷಿಗೆ ಆದ್ಯತೆ ನೀಡುವ ನೀತಿಯನ್ನು ಮಹಾರಾಷ್ಟ್ರ ಸರಕಾರ ಅಳವಡಿಸಿಕೊಂಡಿದೆ. ನೈಸರ್ಗಿಕ ಕೃಷಿಗೆ ಉತ್ತೇಜನ ನೀಡಲು ರಾಜ್ಯದ 2 ಲಕ್ಷ 13 ಸಾವಿರದ 625 ರೈತರನ್ನು ಆಯ್ಕೆ ಮಾಡಲಾಗಿದ್ದು, ರಾಜ್ಯದ 85 ಸಾವಿರದ 450 ಹೆಕ್ಟೇರ್ ಪ್ರದೇಶದಲ್ಲಿ ನೈಸರ್ಗಿಕ ಕೃಷಿಯನ್ನು ಪ್ರಾರಂಭಿಸಲಾಗುವುದು. ರಾಜ್ಯದ ಎಲ್ಲ 34 ಜಿಲ್ಲೆಗಳಲ್ಲಿ ನೈಸರ್ಗಿಕ ಕೃಷಿಯನ್ನು ಪ್ರಾರಂಭಿಸಲಾಗುವುದು ಎಂದು ಕೃಷಿ ಇಲಾಖೆ ಮಾಹಿತಿ ನೀಡಿದೆ.
1. ನೈಸರ್ಗಿಕ ಕೃಷಿಗಾಗಿ 50 ಹೆಕ್ಟೇರ್ ಪ್ರದೇಶದ ಒಂದು ಗುಂಪು ರಚಿಸಲಾಗುವುದು. ಪ್ರತಿ ರೈತರಿಗೆ ಗರಿಷ್ಠ 1 ಎಕರೆ ಮಿತಿಯಲ್ಲಿ ಲಾಭ ನೀಡಲಾಗುವುದು. ಒಂದು ಗುಂಪಿನಲ್ಲಿ ಕನಿಷ್ಠ 125 ರೈತರು ಇರಲಿದ್ದಾರೆ.
2. ಒಮ್ಮೆ ಆಯ್ಕೆಯಾದ ಫಲಾನುಭವಿಗಳ ಗುಂಪಿಗೆ 2 ವರ್ಷಗಳವರೆಗೆ ಲಾಭ ನೀಡಲಾಗುವುದು.
3. ಈ ಯೋಜನೆಯಡಿಯಲ್ಲಿ ಒಂದು ಗುಂಪಿಗೆ 2 ಕೃಷಿ ಸ್ನೇಹಿತರು, 1 ಸಾವಿರದ 709 ಗುಂಪುಗಳಿಗಾಗಿ 3 ಸಾವಿರದ 418 ಕೃಷಿ ಸ್ನೇಹಿತರನ್ನು ಆಯ್ಕೆ ಮಾಡಲಾಗಿದೆ.
4. ನೈಸರ್ಗಿಕ ಕೃಷಿಯ ಪ್ರಚಾರ-ಪ್ರಸಾರಕ್ಕಾಗಿ ಗ್ರಾಮ ಪಂಚಾಯತ್ ಮಟ್ಟದಲ್ಲಿ ಜಾಗೃತಿ ಮೂಡಿಸಲಾಗುವುದು ಮತ್ತು ಅದರ ಕುರಿತು ತರಬೇತಿಗಳನ್ನು ಆಯೋಜಿಸಲಾಗುವುದು. ನೈಸರ್ಗಿಕ ಕೃಷಿಗಾಗಿ ಆರ್ಥಿಕ ಸಹಾಯ ಪಡೆಯುವ ರೈತರಿಗೆ ರಾಸಾಯನಿಕ ಗೊಬ್ಬರಗಳು, ಬಿ.ಟಿ. ಬೀಜಗಳು ಮತ್ತು ಕೀಟನಾಶಕಗಳ ಬಳಕೆಗೆ ನಿರ್ಬಂಧವಿರುತ್ತದೆ.
5. ನೈಸರ್ಗಿಕ ಕೃಷಿಗೆ ಅಗತ್ಯವಿರುವ ಕೃಷಿ ಪದ್ಧತಿಯನ್ನು ಅನುಸರಿಸುವ ರೈತರಿಗೆ ಈ ಯೋಜನೆಗೆ ಆದ್ಯತೆ ನೀಡಲಾಗುವುದು. ಸ್ವಯಂಪ್ರೇರಣೆಯಿಂದ ಸಿದ್ಧರಿರುವ ರೈತರಿಗೆ ಇದರಲ್ಲಿ ಆದ್ಯತೆ ಸಿಗುತ್ತದೆ. ಯೋಜನೆಯಲ್ಲಿ ಮಹಿಳಾ ರೈತರಿಗೆ ಶೇ. 30ರಷ್ಟು ಆದ್ಯತೆ ನೀಡಲಾಗುವುದು.
‘ಎನ್ಸಿಇಆರ್ಟಿ’ಯ 9ನೇ ತರಗತಿಯ ಪುಸ್ತಕದಲ್ಲಿ ತುರ್ತು ಪರಿಸ್ಥಿತಿಯ ಮಾಹಿತಿ ಸೇರ್ಪಡೆ : NCERT Introduces Emergency
ಆರೋಪಿ ಭೀಮರಾವ್ ಕಾಂಬ್ಳೆಗೆ ದೋಷಿ ಎಂದು ತೀರ್ಪು; ಜೂನ್ 29 ರಂದು ಅಂತಿಮ ಶಿಕ್ಷೆ ಪ್ರಕಟ : Nasrapur Case
ಎನ್ಸಿಇಆರ್ಟಿ ಪಠ್ಯದಲ್ಲಿ ಮರಾಠಾ ಸಾಮ್ರಾಜ್ಯದ ಇತಿಹಾಸ: ಮಹಾರಾಷ್ಟ್ರ ಶಿಕ್ಷಣ ಸಚಿವರ ಆಗ್ರಹ
ಶ್ರೀರಾಮಮಂದಿರದಲ್ಲಿ ದೇಣಿಗೆ ಕಳ್ಳತನ ಪ್ರಕರಣ: ಅಂತಿಮವಾಗಿ ದೂರು ದಾಖಲು
ಘಾಜಿಯಾಬಾದ್ (ಉತ್ತರ ಪ್ರದೇಶ) ಇಲ್ಲಿ ವೈದ್ಯ ನದೀಮ್ ನಿಂದ ರೋಗಿಯ ತಪ್ಪು ರಕ್ತನಾಳ ಕತ್ತರಿಸಿದ! : Doctor cuts wrong Vein
ದೇವತೆ, ಭಾರತಮಾತೆ ಮತ್ತು ರಾಜಕೀಯ ಹುತಾತ್ಮರ ಹೆಸರಿನಲ್ಲಿ ಪ್ರಮಾಣವಚನ ಸ್ವೀಕರಿಸಲು ಸಾಧ್ಯವಿಲ್ಲ !