ಮಹಾರಾಷ್ಟ್ರದ ನಗರಸಭೆ ಮತ್ತು ನಗರ ಪಂಚಾಯಿತಿಗಳ ಸಾರ್ವತ್ರಿಕ ಚುನಾವಣೆಗೆ ಆಕ್ರಮಗಳಿಂದ ಕಳಂಕ! – Maharashtra Elections Tainted by Irregularities

  • ಹಣ ಹಂಚಿಕೆಯ ಪ್ರಕರಣಗಳು ಬಹಿರಂಗ

  • ಹೊಡೆದಾಟ ನಿಲ್ಲಿಸಲು ಪೊಲೀಸರ ಮಧ್ಯ ಪ್ರವೇಶ

ಮುಂಬಯಿ – ಮಹಾರಾಷ್ಟ್ರದ ವಿವಿಧ ಭಾಗಗಳಲ್ಲಿ ನಗರಸಭೆ ಮತ್ತು ನಗರ ಪಂಚಾಯಿತಿಗಳ ಸಾರ್ವತ್ರಿಕ ಚುನಾವಣೆಗಳು ನಡೆದವು. ಅನೇಕ ಸ್ಥಳಗಳಲ್ಲಿ ಮತದಾನವು ಸುಗಮವಾಗಿ ನಡೆಯಿತು; ಆದರೆ ಕೆಲವು ಸ್ಥಳಗಳಲ್ಲಿ ಗೊಂದಲ, ವಿವಾದ ಮತ್ತು ಹೊಡೆದಾಟಗಳು ನಡೆದು ಮತದಾನಕ್ಕೆ ಕಳಂಕ ತಂದವು. ಅಕಲೂಜ (ಸೋಲಾಪುರ ಜಿಲ್ಲೆ), ಹಿಂಗೋಲಿ, ಬೀಡ, ವಾಶಿಮ, ದರಿಯಾಪುರ (ಅಮರಾವತಿ), ಸಾತಾರಾ, ರಾಯಗಡ ಮುಂತಾದ ಕಡೆಗಳಲ್ಲಿ ಇ.ವಿ.ಎಂ. ಯಂತ್ರಗಳು ಕೆಟ್ಟು ಹೋಗಿದ್ದವು. ಇದರಿಂದಾಗಿ ಮತದಾರರು ಸರತಿ ಸಾಲಿನಲ್ಲಿ ನಿಲ್ಲುವಂತಾಯಿತು

ಸಂಪಾದಕೀಯ ನಿಲುವು

ಮತದಾನದ ಸಮಯದಲ್ಲಿ ಇಂತಹ ಅಕ್ರಮಗಳು ನಡೆಯುವುದು ಪ್ರಜಾಪ್ರಭುತ್ವಕ್ಕೆ ಮಾರಕವಾಗಿದೆ.