ಸಂಸತ್ತಿನಲ್ಲಿ ನಾಟಕ ಬೇಡ, ಕೆಲಸ ಮಾಡಿ! – ಪ್ರಧಾನಮಂತ್ರಿ ಮೋದಿ

ಸಂಸತ್ತಿನ ಚಳಿಗಾಲದ ಅಧಿವೇಶನದ ಆರಂಭ; ವಿರೋಧ ಪಕ್ಷಗಳಿಗೆ ಪ್ರಧಾನಮಂತ್ರಿ ಮೋದಿ ಅವರ ಕರೆ!

ನವದೆಹಲಿ – ವಿರೋಧ ಪಕ್ಷಗಳು ಇತ್ತೀಚಿನ ಚುನಾವಣೆಗಳಲ್ಲಿನ ಸೋಲಿನ ಹತಾಶೆಯಿಂದ ಹೊರಬರಬೇಕು ಮತ್ತು ಸದನದಲ್ಲಿ ಬಲವಾದ ವಿಷಯಗಳನ್ನು ಪ್ರಸ್ತಾಪಿಸಬೇಕು. ವಿರೋಧ ಪಕ್ಷಗಳು ಬಯಸಿದರೆ, ಅವರು ಹೇಗೆ ಕಾರ್ಯನಿರ್ವಹಿಸಬೇಕು ಎಂಬುದರ ಕುರಿತು ಸಲಹೆ ನೀಡಲು ನಾನು ಸಿದ್ಧನಿದ್ದೇನೆ ಎಂದು ಪ್ರಧಾನಮಂತ್ರಿ ನರೇಂದ್ರ ಮೋದಿ ಅವರು ಸಂಸತ್ತಿನ ಚಳಿಗಾಲದ ಅಧಿವೇಶನದ ಪ್ರಾರಂಭದಲ್ಲಿ ವಿರೋಧ ಪಕ್ಷಗಳಿಗೆ ಕಿವಿಮಾತು ಹೇಳಿದರು. ಪ್ರಧಾನಿ ಅವರು ಮಾಧ್ಯಮಗಳೊಂದಿಗೆ ಮಾತನಾಡುತ್ತಿದ್ದರು.

ಪ್ರಧಾನಮಂತ್ರಿ ಮೋದಿ ಅವರು ಮುಂದೆ ಮಾತನಾಡಿ,

ಈ ಅಧಿವೇಶನವು ಸೋಲಿನ ಹತಾಶೆಯ ಅಥವಾ ಗೆಲುವಿನ ಅಹಂಕಾರದ ಮೈದಾನವಾಗಬಾರದು. ಹೊಸ ಪೀಳಿಗೆಯ ಸದಸ್ಯರು ಅನುಭವದಿಂದ ಪ್ರಯೋಜನ ಪಡೆಯಬೇಕು. ನಾಟಕ ಮಾಡುವುದಕ್ಕಿಂತ ಹೆಚ್ಚಾಗಿ ಭಾಷಣದ ಮೇಲೆ ಗಮನ ನೀಡಬೇಕು. ಘೋಷಣೆಗಳಿಗಿಂತ ಹೆಚ್ಚಾಗಿ ನೀತಿಗಳ ಮೇಲೆ ಒತ್ತು ನೀಡಬೇಕು ಎಂದು ಹೇಳಿದರು.

ಗದ್ದಲದಿಂದಾಗಿ ಲೋಕಸಭೆಯ ಕಲಾಪ ಸ್ಥಗಿತ

ಮತದಾರರ ಪಟ್ಟಿಯ ‘ವಿಶೇಷ ಆಳವಾದ ಪರಿಶೀಲನೆ’ ಎಂಬ ವಿಷಯದ ಕುರಿತು ವಿರೋಧ ಪಕ್ಷಗಳು ಲೋಕಸಭೆಯಲ್ಲಿ ಗದ್ದಲ ಸೃಷ್ಟಿಸಿದ ಕಾರಣ, ಕಲಾಪವನ್ನು ಮೊದಲು ಮಧ್ಯಾಹ್ನ 12 ಗಂಟೆಯವರೆಗೆ ಮತ್ತು ನಂತರ ಮಧ್ಯಾಹ್ನ 2 ಗಂಟೆಯವರೆಗೆ ಮುಂದೂಡಲಾಯಿತು. ಈ ಪ್ರಕ್ರಿಯೆಯನ್ನು ಹಿಂಪಡೆಯಬೇಕೆಂದು ವಿರೋಧ ಪಕ್ಷಗಳು ಆಗ್ರಹಿಸುತ್ತಿದ್ದವು. (ಕಳೆದ ಹಲವು ವರ್ಷಗಳಿಂದ ಸಂಸತ್ತಿನಲ್ಲಿ ಮತ್ತು ರಾಜ್ಯಗಳ ವಿಧಾನಮಂಡಲಗಳಲ್ಲಿ ನಿರಂತರವಾಗಿ ಗದ್ದಲ ಮಾಡಲಾಗುತ್ತಿದೆ ಮತ್ತು ಇದರಿಂದ ದೇಶಕ್ಕೆ ಕೋಟ್ಯಂತರ ರೂಪಾಯಿಗಳ ಹಾನಿಯಾಗುತ್ತಿದೆ. ಆದರೂ ಯಾವುದೇ ದೃಢ ಪರಿಹಾರ ಕಂಡುಹಿಡಿಯಲಾಗುತ್ತಿಲ್ಲ ಎಂಬುದು ವಿಶ್ವದ ದೊಡ್ಡ ಪ್ರಜಾಪ್ರಭುತ್ವ ರಾಷ್ಟ್ರಕ್ಕೆ ನಾಚಿಕೆಗೇಡಿನ ಸಂಗತಿ! – ಸಂಪಾದಕರು).