ದೆಹಲಿ ಬಾಂಬ್ ಸ್ಫೋಟ ಪ್ರಕರಣ: ಉತ್ತರಾಖಂಡದ ಓರ್ವ ಮೌಲಾನಾ ಬಂಧನ

(ಮೌಲಾನಾ ಅಂದರೆ ಇಸ್ಲಾಂನ ಧಾರ್ಮಿಕ ನಾಯಕ)

ಡೆಹ್ರಾಡೂನ್ (ಉತ್ತರಾಖಂಡ) – ದೆಹಲಿ ಬಾಂಬ್ ಸ್ಫೋಟದ ಪ್ರಕರಣದಲ್ಲಿ, ರಾಷ್ಟ್ರೀಯ ತನಿಖಾ ತಂಡದ ಪೊಲೀಸರು ಉತ್ತರಾಖಂಡದ ಹಲ್ದ್ವಾನಿಯಿಂದ ಮೌಲಾನಾ ಆಸಿಮ್ ಮತ್ತು ಇನ್ನೊಬ್ಬ ವ್ಯಕ್ತಿ ಸೇರಿ ಇಬ್ಬರನ್ನು ಬಂಧಿಸಿದ್ದಾರೆ. ಈ ಇಬ್ಬರ ಹೆಸರುಗಳು ಸ್ಫೋಟದಲ್ಲಿ ಸಾವನ್ನಪ್ಪಿದ ಭಯೋತ್ಪಾದಕ ಡಾ. ಉಮರ್ ಅವನ ಮೊಬೈಲ್‌ನಲ್ಲಿ ದೊರೆತಿವೆ. ಮೌಲಾನಾನನ್ನು ಬನ್ಭೂಲ್‌ಪುರದಿಂದ ಮತ್ತು ಇನ್ನೊಬ್ಬ ವ್ಯಕ್ತಿಯನ್ನು ರಾಜ್‌ಪುರ ಪ್ರದೇಶದಿಂದ ಬಂಧಿಸಲಾಗಿದೆ. ತನಿಖಾ ತಂಡವು ಇಬ್ಬರನ್ನೂ ವಿಚಾರಣೆಗಾಗಿ ದೆಹಲಿಗೆ ಕರೆದೊಯ್ದಿದೆ.

ಮೌಲಾನಾ ಆಸಿಮ್ ಕಳೆದ ೪ ವರ್ಷಗಳಿಂದ ಬಿಲಾಲಿ ಮಸೀದಿಯಲ್ಲಿ ಮಕ್ಕಳಿಗೆ ಪಾಠ ಮಾಡುತ್ತಿದ್ದನು. ಈ ಕಾರ್ಯಾಚರಣೆಯ ನಂತರ, ಬನ್ಭೂಲ್‌ಪುರದ ಮಸೀದಿ ಬಳಿ ಪೊಲೀಸರನ್ನು ನಿಯೋಜಿಸಲಾಗಿದೆ. ಅದರ ಜೊತೆಗೆ ಸಂಪೂರ್ಣ ಬನ್ಭೂಲ್‌ಪುರ ಪ್ರದೇಶದಲ್ಲಿಯೂ ತಪಾಸಣೆ ನಡೆಸಲಾಗುತ್ತಿದೆ. ಬರುವ-ಹೋಗುವ ಪ್ರತಿಯೊಂದು ವಾಹನವನ್ನು ತಪಾಸಣೆ ಮಾಡಲಾಗುತ್ತಿದೆ.

ಸಂಪಾದಕೀಯ ನಿಲುವು

ದೇಶದಲ್ಲಿನ ಪ್ರತಿಯೊಬ್ಬ ಮೌಲಾನಾ ಮೇಲೆ ಈಗ ನಿಗಾ ಇಡುವ ಸಮಯ ಬಂದಿದೆ!