‘ಸನಾತನ ರಾಷ್ಟ್ರ ಶಂಖನಾದ ಮಹೋತ್ಸವ’ದ ‘ಕೌಂಟ್‌ಡೌನ್’ (ಹಿಮ್ಮುಖ ಎಣಿಕೆ) ಶುರು !

ದೆಹಲಿ – ‘ಸನಾತನ ರಾಷ್ಟ್ರ ಶಂಖನಾದ ಮಹೋತ್ಸವ’ಕ್ಕೆ ಈಗ ಕೆಲವೇ ದಿನಗಳು ಉಳಿದಿವೆ. ಪ್ರತಿಯೊಬ್ಬ ರಾಷ್ಟ್ರ ಮತ್ತು ಧರ್ಮಪ್ರೇಮಿಯ ಕುತೂಹಲವು ಉತ್ತುಂಗಕ್ಕೇರಿದೆ. ಆ ದಿನವು ಸಮೀಪಿಸುತ್ತಾ ಬಂದಂತೆ, ಪ್ರತಿಯೊಬ್ಬರಲ್ಲಿಯೂ ಧರ್ಮಚೇತನೆ ಜಾಗೃತಗೊಳ್ಳುತ್ತಿದೆ. ಈ ಹಿನ್ನೆಲೆಯಲ್ಲಿ, ಮಹೋತ್ಸವದ www.SanatanRashtraShankhnad.inhttp://www.SanatanRashtraShankhnad.in ವೆಬ್‌ಸೈಟ್‌ನಲ್ಲಿ ‘ಕೌಂಟ್‌ಡೌನ್’ (ದಿನಗಳ ಹಿಮ್ಮುಖ ಎಣಿಕೆ) ಪ್ರಾರಂಭವಾಗಿದೆ. ಮಹೋತ್ಸವಕ್ಕೆ ಎಷ್ಟು ದಿನಗಳು, ಎಷ್ಟು ಗಂಟೆಗಳು, ಎಷ್ಟು ನಿಮಿಷಗಳು ಮತ್ತು ಎಷ್ಟು ಸೆಕೆಂಡುಗಳು ಉಳಿದಿವೆ ಎಂಬ ಸ್ವರೂಪದ ಆಂಕೆಗಳನ್ನು ಅದರಲ್ಲಿ ನೀಡಲಾಗಿದೆ. ‘ಬದುಕಿನಲ್ಲಿ ಒಮ್ಮೆ ಮಾತ್ರ ಆಧ್ಯಾತ್ಮಿಕ ಜಾಗೃತಿಯ ಅವಕಾಶ ಸಿಗುತ್ತಿದೆ. ಪಾಲ್ಗೊಳ್ಳಿ, ಬೆಂಬಲಿಸಿ ಮತ್ತು ಇತಿಹಾಸದ ಭಾಗವಾಗಿರಿ’, ಎಂಬ ಕರೆಯು ಈ ದಿನಗಳ ಎಣಿಕೆಯ ಪುಟದಲ್ಲಿ ನೀಡಲಾಗಿದೆ.