‘ಬಾಬರಿ, ತಲಾಖ್’ ತೀರ್ಪಿನಿಂದ ನ್ಯಾಯಾಲಯ ಸರಕಾರದ ಒತ್ತಡದಲ್ಲಿದೆ ಎನಿಸುತ್ತದೆ ! – ಮೌಲಾನಾ ಮೆಹಮೂದ್ ಮದನಿ

(ಮೌಲಾನಾ ಎಂದರೆ ಇಸ್ಲಾಂ ಧರ್ಮದ ವಿದ್ವಾಂಸ)

ಭೋಪಾಳ (ಮಧ್ಯಪ್ರದೇಶ) – ಬಾಬರಿ ಮಸೀದಿ ಮತ್ತು ತಲಾಖ್‌ಗೆ ಸಂಬಂಧಿಸಿದಂತೆ ನೀಡಲಾದ ನಿರ್ಣಯಗಳನ್ನು ನೋಡಿದರೆ, ನ್ಯಾಯಾಲಯಗಳು ಸರಕಾರದ ಒತ್ತಡದಲ್ಲಿ ಕೆಲಸ ಮಾಡುತ್ತಿವೆ ಎಂಬ ಭಾಸವಾಗುತ್ತದೆ ಎಂದು ‘ಜಮಿಯತ್ ಉಲೇಮಾ-ಎ-ಹಿಂದ್’ ಅಧ್ಯಕ್ಷ ಮೌಲಾನಾ ಮೆಹಮೂದ್ ಮದನಿ ಅವರು ಇಲ್ಲಿ ಜಮಿಯತ್‌ನ ನಿರ್ದೇಶನ ಮಂಡಳಿಯ ಸಭೆಯಲ್ಲಿ ಹೇಳಿದ್ದಾರೆ. ಸಂವಿಧಾನವು ಅಲ್ಪಸಂಖ್ಯಾತರಿಗೆ ನೀಡಿರುವ ಹಕ್ಕುಗಳನ್ನು ಬಹಿರಂಗವಾಗಿ ಉಲ್ಲಂಘಿಸುವ ಅನೇಕ ನಿರ್ಣಯಗಳನ್ನು ನ್ಯಾಯಾಲಯಗಳು ನೀಡಿವೆ. ‘ಪೂಜಾ ಸ್ಥಳಗಳ ಕಾಯಿದೆ ೧೯೯೧’ ರ ನಿಬಂಧನೆಗಳ ನಂತರವೂ ಕೆಲವು ಪ್ರಕರಣಗಳಲ್ಲಿ ನಡೆದ ಕ್ರಮಗಳು ಆ ಉಲ್ಲಂಘನೆಯ ಸ್ಪಷ್ಟ ಉದಾಹರಣೆಯಾಗಿದೆ ಎಂದು ಮದನಿ ಹೇಳಿದರು.

ಮದನಿ ಅವರು ಮಾಡಿದ ಹೇಳಿಕೆಗಳು!

ರಾಜ್ಯಘಟನೆ ಇರುವವರೆಗೂ ಸರ್ವೋಚ್ಚ ನ್ಯಾಯಾಲಯವನ್ನು ‘ಸರ್ವೋಚ್ಚ’ ಎಂದು ಹೇಳಬಹುದು! ರಾಜ್ಯಘಟನೆ ಸುರಕ್ಷಿತವಾಗಿರುವವರೆಗೆ ಮಾತ್ರ ಸರ್ವೋಚ್ಚ ನ್ಯಾಯಾಲಯವನ್ನು ‘ಸುಪ್ರೀಂ (ಸರ್ವೋಚ್ಚ)’ ಎಂದು ಕರೆಯಬಹುದು; ಇಲ್ಲದಿದ್ದರೆ, ಆ ಹೆಸರಿನ ಹಕ್ಕೇ ಇರುವುದಿಲ್ಲ.

‘ಭಯದಿಂದ ವಂದೇ ಮಾತರಂ ಹೇಳುವುದು ಎಂದರೆ ಮೃತಪ್ರಾಯ ಸಮಾಜದ ಗುರುತು ಅಂತೆ!’

ಭಯದಿಂದ ಶರಣಾಗುವ ಸಮಾಜಗಳು ತಮ್ಮನ್ನು ಕಳೆದುಕೊಳ್ಳುತ್ತವೆ. ಯಾರೋ ಹೇಳಿದರು ಎಂದು ‘ವಂದೇ ಮಾತರಂ’ ಹೇಳಲು ಪ್ರಾರಂಭಿಸುವುದು, ಇದು ಮೃತಪ್ರಾಯ ಸಮಾಜದ ಗುರುತಾಗಿದೆ. ಆತ್ಮವಿಶ್ವಾಸ ಕಳೆದುಕೊಂಡಂತೆ. ಸಮಾಜವು ಜೀವಂತವಾಗಿದ್ದರೆ, ಪರಿಸ್ಥಿತಿಯನ್ನು ಎದುರಿಸಬೇಕಾಗುತ್ತದೆ. (ದೇಶದ ಮೇಲೆ ಹೊರಗಿನ ಮುಸಲ್ಮಾನ ಆಕ್ರಮಣಕಾರರು ಆಕ್ರಮಣ ಮಾಡಿದ ನಂತರ ಅನೇಕ ಹಿಂದೂಗಳು ಭಯದಿಂದ ಇಸ್ಲಾಂ ಧರ್ಮವನ್ನು ಸ್ವೀಕರಿಸಿದ್ದರು. ಅವರದೇ ವಂಶಸ್ಥರಾಗಿರುವವರು ಇಂದು ‘ವಂದೇ ಮಾತರಂ’ ಹೇಳುವುದನ್ನು ಭಯ ಎನ್ನುತ್ತಿದ್ದಾರೆ, ಇದು ಹಾಸ್ಯವೇ ಸರಿ! – ಸಂಪಾದಕರು) ಮುಸಲ್ಮಾನ ಸಮಾಜವು ನಿರಾಶೆಯಿಂದ ದೂರವಿರಬೇಕು. ನಿರಾಶೆ ಯಾವುದೇ ಸಮಾಜಕ್ಕೆ ವಿಷದಂತೆ ಇರುತ್ತದೆ. (ಮುಸಲ್ಮಾನರು ನಿರಾಶರಾಗಿದ್ದಾರೆ ಎಂಬ ವಿಷಯವನ್ನು ಮದನಿ ಅವರು ಹೇಗೆ ಕಂಡುಹಿಡಿದರು? – ಸಂಪಾದಕರು)

ಎಲ್ಲಿ ದೌರ್ಜನ್ಯವಿದೆಯೋ ಅಲ್ಲಿ ಜಿಹಾದ್!

೧. ಸರಕಾರ ಮತ್ತು ಮಾಧ್ಯಮಗಳು ಒಂದು ಪವಿತ್ರ ಪದವನ್ನು ತಪ್ಪಾದ ಅರ್ಥದಲ್ಲಿ ಜಗತ್ತಿನ ಮುಂದೆ ಇಡುತ್ತಿವೆ. ‘ಜಿಹಾದ್’ಗೆ ವಿವಿಧ ಹಣೆಪಟ್ಟಿಗಳನ್ನು ಜೋಡಿಸಿ ಅದನ್ನು ಕೀಳುಮಟ್ಟಕ್ಕೆ ಇಳಿಸಲಾಗುತ್ತಿದೆ. (ಕೀಳುಮಟ್ಟಕ್ಕೆ ಇಳಿಸುತ್ತಿರುವುದು ಸರಕಾರ ಮತ್ತು ಮಾಧ್ಯಮಗಳಲ್ಲ, ಬದಲಿಗೆ ಮುಸಲ್ಮಾನರೇ. ಇದನ್ನು ಹೇಳುವ ಬದಲು ಮದನಿ ಅವರು ಇತರರನ್ನು ದೂಷಿಸುತ್ತಿದ್ದಾರೆ, ಇದರಿಂದ ಅವರೇ ದೊಡ್ಡ ಜಿಹಾದಿ ಎಂದು ಹೇಳಬೇಕಾಗುತ್ತದೆ! – ಸಂಪಾದಕರು)

೨. ಜಿಹಾದ್ ಯಾವಾಗಲೂ ಪವಿತ್ರವಾಗಿದ್ದು, ಇತರರ ಹಿತಕ್ಕಾಗಿ ಹೇಳಲಾಗಿದೆ. ಎಲ್ಲಿ ದೌರ್ಜನ್ಯವಿದೆಯೋ, ಅಲ್ಲಿ ಜಿಹಾದ್ ಇರುತ್ತದೆ. (ಹಾಗಾದರೆ, ಭಾರತ ಸೇರಿದಂತೆ ಜಗತ್ತಿನಾದ್ಯಂತ ಇಸ್ಲಾಮಿ ಭಯೋತ್ಪಾದಕ ಸಂಘಟನೆಗಳು ಯಾವ ದೌರ್ಜನ್ಯಗಳ ವಿರುದ್ಧ ಜಿಹಾದ್ ಮಾಡುತ್ತಿವೆ ಎಂಬುದನ್ನು ಮದನಿ ಅವರು ಹೇಳಬೇಕು! – ಸಂಪಾದಕರು)

೩. ಜಾತ್ಯತೀತ ಮತ್ತು ಪ್ರಜಾಪ್ರಭುತ್ವ ವ್ಯವಸ್ಥೆ ಇರುವ ಭಾರತದಲ್ಲಿ ಜಿಹಾದ್ ಬಗ್ಗೆ ಚರ್ಚಿಸುವ ಕಾರಣವಿಲ್ಲ. ಇಲ್ಲಿ ಮುಸಲ್ಮಾನರು ರಾಜ್ಯಘಟನೆಗೆ ನಿಷ್ಠರಾಗಿದ್ದಾರೆ. (ಕಾಶ್ಮೀರದಲ್ಲಿ ಡಾಕ್ಟರ್ ಭಯೋತ್ಪಾದಕ ಆಕ್ರಮಣ ಮಾಡುತ್ತಿದ್ದಾರೆ, ಅವರು ರಾಜ್ಯಘಟನೆಗೆ ನಿಷ್ಠರಾಗಿದ್ದಾರೆ ಎಂದು ಮದನಿ ಅವರಿಗೆ ಹೇಳಬೇಕಾಗಿದೆಯೇ? – ಸಂಪಾದಕರು)

೪. ಜಿಹಾದ್ ವೈಯಕ್ತಿಕ ಸೇಡಿನ ಪ್ರಕಾರವಲ್ಲ ಮತ್ತು ಅದರ ಬಗ್ಗೆ ನಿರ್ಧಾರವನ್ನು ಕೇವಲ ಧಾರ್ಮಿಕ ಕಾನೂನಿನಡಿಯಲ್ಲಿ ನಡೆಯುವ ಆಡಳಿತವು ತೆಗೆದುಕೊಳ್ಳಬಹುದು. ಲವ್ ಜಿಹಾದ್, ಭೂಮಿ ಜಿಹಾದ್ ಮತ್ತು ಉಗುಳು ಜಿಹಾದ್‌ನಂತಹ ಪದಗಳು ಮುಸಲ್ಮಾನರನ್ನು ಅವಮಾನಿಸುತ್ತವೆ. (ಈ ಅವಮಾನವನ್ನು ಇತರ ಧರ್ಮದವರು ಮಾಡುತ್ತಿಲ್ಲ, ಬದಲಿಗೆ ಮುಸಲ್ಮಾನರು ಇಂತಹ ಕೃತಿಗಳನ್ನು ಮಾಡುವ ಮೂಲಕವೇ ಮಾಡುತ್ತಿದ್ದಾರೆ. ಅವರ ವಿರುದ್ಧ ಮದನಿ ಅವರು ಒಂದು ಮಾತನ್ನೂ ಆಡುವುದಿಲ್ಲ. ಇದರಿಂದ ಇದಕ್ಕೆ ಅವರ ಬೆಂಬಲವಿದೆ ಎಂಬುದು ಸ್ಪಷ್ಟವಾಗುತ್ತದೆ! – ಸಂಪಾದಕರು)

೫. ಇಸ್ಲಾಂ ವಿರೋಧಿಗಳು ಜಿಹಾದ್‌ಗೆ ಹಿಂಸೆಯ ಅರ್ಥ ನೀಡಿ ಅದನ್ನು ಪ್ರಸ್ತುತಪಡಿಸಿದ್ದಾರೆ. ಇಸ್ಲಾಂನಲ್ಲಿ ಜಿಹಾದ್ ಅನ್ನು ಮುಸಲ್ಮಾನರಿಗೆ ಒಂದು ಪವಿತ್ರ ಕರ್ತವ್ಯವೆಂದು ಪರಿಗಣಿಸಲಾಗುತ್ತದೆ. (ಅಂತಹ ಜಿಹಾದ್ ಅನ್ನು ಯಾವ ಮುಸಲ್ಮಾನ ಯಾವಾಗ ಮತ್ತು ಎಲ್ಲಿ ಮಾಡುತ್ತಾನೆ ಅಥವಾ ಮಾಡಿದ್ದಾರೆ ಎಂಬುದಕ್ಕೆ ಮದನಿ ಅವರು ಉದಾಹರಣೆ ನೀಡಬೇಕು! – ಸಂಪಾದಕರು)

೬. ನಾಗರಿಕರ ಹಕ್ಕುಗಳನ್ನು ರಕ್ಷಿಸುವುದು ಸರಕಾರದ ಜವಾಬ್ದಾರಿಯಾಗಿದ್ದು, ಅದನ್ನು ಪಾಲಿಸದಿದ್ದರೆ ದೋಷ ಸರಕಾರದದ್ದೇ ಆಗಿರುತ್ತದೆ.

ದೇಶದ ಶೇ. ೬೦ ರಷ್ಟು ಜನರ ಬಳಿಗೆ ಮುಸಲ್ಮಾನರು ತಲುಪಬೇಕು!

ಪ್ರಸ್ತುತ ದೇಶದಲ್ಲಿ ಶೇ. ೧೦ ರಷ್ಟು ಜನರು ಮುಸಲ್ಮಾನರ ಪರವಾಗಿದ್ದಾರೆ, ಶೇ. ೩೦ ರಷ್ಟು ಜನರು ಅವರ ವಿರುದ್ಧ ಇದ್ದಾರೆ ಮತ್ತು ಶೇ. ೬೦ ರಷ್ಟು ಜನರು ಶಾಂತವಾಗಿದ್ದಾರೆ. ಮುಸಲ್ಮಾನರು ಈ ಶಾಂತ ವರ್ಗದೊಂದಿಗೆ ಸಂವಾದ ನಡೆಸಬೇಕು, ತಮ್ಮ ನಿಲುವನ್ನು ಸ್ಪಷ್ಟಪಡಿಸಬೇಕು; ಏಕೆಂದರೆ ಈ ವರ್ಗವು ಅವರ ವಿರುದ್ಧ ತಿರುಗಿದರೆ, ಗಂಭೀರ ಬಿಕ್ಕಟ್ಟು ಉಂಟಾಗಬಹುದು.

‘ವಂದೇ ಮಾತರಂ’ ಅನ್ನು ಇಡೀ ದೇಶದ ಮೇಲೆ ಹೇರುವುದು ಸರಿಯಲ್ಲವಂತೆ! – ‘ಜಮಾತ್-ಎ-ಇಸ್ಲಾಮಿ ಹಿಂದ್’ ಅಧ್ಯಕ್ಷ ಮೌಲಾನಾ ಸಾದತುಲ್ಲಾ ಹುಸೇನಿ

‘ಜಮಾತ್-ಎ-ಇಸ್ಲಾಮಿ ಹಿಂದ್’ ಅಧ್ಯಕ್ಷ ಮೌಲಾನಾ ಸಾದತುಲ್ಲಾ ಹುಸೇನಿ ಅವರು ಮೌಲಾನಾ ಮದನಿ ಅವರ ಹೇಳಿಕೆಗಳ ಕುರಿತು, ‘ವಂದೇ ಮಾತರಂ’ ನಂತಹ ವಿಷಯದ ಬಗ್ಗೆ ವಿವಾದ ಸೃಷ್ಟಿಸುವುದು ಅವಿವೇಕವಾಗಿದೆ. ಪ್ರತಿಯೊಬ್ಬ ವ್ಯಕ್ತಿಗೂ ತನ್ನ ಶ್ರದ್ಧೆಯ ಪ್ರಕಾರ ಬದುಕಲು ಮತ್ತು ತನ್ನದೇ ರೀತಿಯಲ್ಲಿ ದೇಶಭಕ್ತಿಯನ್ನು ವ್ಯಕ್ತಪಡಿಸಲು ಹಕ್ಕಿದೆ. ಒಂದೇ ಘೋಷಣೆಯನ್ನು ಇಡೀ ದೇಶದ ಮೇಲೆ ಹೇರುವುದು ಸರಿಯಲ್ಲ, ಎಂದು ಹೇಳಿದರು.

ಸಂಪಾದಕೀಯ ನಿಲುವು

  • ನ್ಯಾಯಾಲಯದ ತೀರ್ಪುಗಳು ಮುಸಲ್ಮಾನರ ವಿರುದ್ಧ ಹೋದಾಗ, ಅವರು ನ್ಯಾಯಾಲಯದ ಮೇಲೆ ಇಂತಹ ಆರೋಪಗಳನ್ನು ಮಾಡಲು ಪ್ರಯತ್ನಿಸುತ್ತಿರುವುದರಿಂದ, ನ್ಯಾಯಾಲಯವು ಇದನ್ನು ಗಮನಿಸಿ ಕ್ರಮ ಕೈಗೊಳ್ಳಲು ಆದೇಶಿಸಬೇಕು ಎಂದು ಜನರಿಗೆ ಅನಿಸುತ್ತದೆ!
  • ಇಂತಹ ಹೇಳಿಕೆಗಳು ಭಾರತೀಯ ಪ್ರಜಾಪ್ರಭುತ್ವದ ನ್ಯಾಯಾಂಗ ವ್ಯವಸ್ಥೆಯ ಬಗ್ಗೆ ಅಪನಂಬಿಕೆ ತೋರಿಸುವುದರ ಜೊತೆಗೆ ಅದನ್ನು ಅವಮಾನಿಸುವ ಪ್ರಯತ್ನವಾಗಿದೆ. ಆದ್ದರಿಂದ, ಇಂತಹ ಮೌಲಾನಾಗಳ ವಿರುದ್ಧ ರಾಷ್ಟ್ರದ್ರೋಹದ ಮೊಕದ್ದಮೆ ದಾಖಲಿಸಿ ಅವರನ್ನು ಜೈಲಿಗೆ ಹಾಕಬೇಕು!