ಇತರೆ ೨ ಜನರ ಬಂಧನ

ಜಲಾಲಾಬಾದ್ (ಪಂಜಾಬ್) – ಪಂಜಾಬ್ ಪೊಲೀಸರು ರಾ.ಸ್ವ.ಸಂಘದ ಸ್ವಯಂಸೇವಕ ನವೀನ್ ಅರೋರಾ ಅವರ ಹತ್ಯೆಯ ಪ್ರಮುಖ ಸೂತ್ರಧಾರನಾದ ಬಾದಲ್ ಅಲಿಯಾಸ್ ಬಂಟಿ ಎಂಬಾತನನ್ನು ಇಲ್ಲಿನ ಒಂದು ಸ್ಮಶಾನ ಭೂಮಿ ಹತ್ತಿರ ನಡೆದ ಗುಂಡಿನ ಚಕಮಕಿಯಲ್ಲಿ ಹತ್ಯೆ ಮಾಡಿದ್ದಾರೆ. ಹಾಗೂ ಬಂಟಿಯೊಂದಿಗೆ ಇದ್ದ ಹರ್ಷ್ ಮತ್ತು ಕನವ್ ಎಂಬ ಇಬ್ಬರು ಸಹಚರರನ್ನು ಘಟನಾ ಸ್ಥಳದಲ್ಲಿ ಬಂಧಿಸಲಾಗಿದೆ. ಈ ಮೂವರು ನವೀನ್ ಅರೋರಾ ಮೇಲೆ ಗುಂಡು ಹಾರಿಸಿ ಹತ್ಯೆ ಮಾಡಿದ್ದರು. ಆರೋಪಿಗಳಿಂದ ಶಸ್ತ್ರಾಸ್ತ್ರಗಳನ್ನು ವಶಪಡಿಸಿಕೊಳ್ಳಲಾಗಿದೆ. ಪೊಲೀಸರ ತನಿಖೆಯ ಪ್ರಕಾರ, ಈ ಹತ್ಯೆಯು ಪೂರ್ವ ನಿಯೋಜಿತ ಪಿತೂರಿಯ ಭಾಗವಾಗಿತ್ತು. ಇದರಲ್ಲಿ 5 ಜನರು ಭಾಗಿಯಾಗಿದ್ದರು. ಈ ಹಿಂದೆ ಗುರುಸಿಮ್ರನ್ ಸಿಂಗ್ ಅಲಿಯಾಸ್ ಜತಿನ್ ಕಾಲಿಯನ್ನು ಎನ್ಕೌಂಟರ್ನಲ್ಲಿ ಹತ್ಯೆ ಮಾಡಲಾಗಿತ್ತು. ಈ ಹತ್ಯೆಯ ಹಿಂದಿನ ಕಾರಣ ಇದುವರೆಗೂ ಸ್ಪಷ್ಟವಾಗಿಲ್ಲ.
ಈಗ ಮಥುರಾ, ಬೃಂದಾವನ ಮತ್ತು ಶ್ರೀಕೃಷ್ಣ ಜನ್ಮಭೂಮಿ ಕುರಿತೂ ಬಹಿರಂಗವಾಗಿ ಚರ್ಚೆಯಾಗಬೇಕು! – ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್
ಬಿಹಾರದಲ್ಲಿ ಮಿಷನರಿಗಳಿಂದ ಹಿಂದೂಗಳಿಗೆ ಆಮಿಷವೊಡ್ಡಿ ಕ್ರೈಸ್ತರನ್ನಾಗಿ ಮಾಡುವ ಪ್ರಯತ್ನ!
ರಾಜ್ಯದಲ್ಲಿ ಎರಡು ಬೇರೆ ಬೇರೆ ಘಟನೆಗಳಲ್ಲಿ ಮತಾಂಧ ಮುಸಲ್ಮಾನರಿಂದ ಇಬ್ಬರು ಹಿಂದೂ ಯುವತಿಯರ ಹತ್ಯೆ
ಮುಂಬಯಿನಲ್ಲಿ 6 ಹೋಟೆಲ್ ಸೇರಿದಂತೆ ಬೇಕರಿ ಮತ್ತು ಕ್ಲಬ್ಗಳ ಪರವಾನಗಿ ಅಮಾನತು: 19 ಜನರ ಬಂಧನ!
ಚಿಕ್ಕಮಗಳೂರು ದತ್ತಪೀಠ ಪ್ರದೇಶದ ಇಸ್ಲಾಮೀಕರಣದ ಪಿತೂರಿ ನಡೆಯುತ್ತಿದೆ ಎಂದು ಆರೋಪ!
ಹಾವೇರಿ : ಮಸೀದಿ ಎದುರು ಪಟಾಕಿ ಸಿಡಿಸಿದ ಕಾರಣಕ್ಕೆ ರೈತನ ಕೈ ಕತ್ತರಿಸಿದ ಮತಾಂಧರು!