ತಿರುಪತಿ ದೇವಸ್ಥಾನದ ಲಡ್ಡು ಪ್ರಸಾದದಲ್ಲಿನ ಕಲಬೆರಕೆ ಪ್ರಕರಣ: ಹಿರಿಯ ಅಧಿಕಾರಿಯ ಬಂಧನ Tirupati Temple Prasadam Adulteration Case

ತಿರುಪತಿ (ಆಂಧ್ರಪ್ರದೇಶ) – ಸುಪ್ರಸಿದ್ಧ ತಿರುಮಲ ತಿರುಪತಿ ದೇವಸ್ಥಾನದ ಲಡ್ಡು ಮಹಾಪ್ರಸಾದದ ಕಲಬೆರಕೆ ಪ್ರಕರಣದಲ್ಲಿ ವಿಶೇಷ ತನಿಖಾ ದಳವು ದೇವಸ್ಥಾನದ ಹಿರಿಯ ಅಧಿಕಾರಿ ಆರ್.ಎಸ್.ಎಸ್. ವಿ.ಆರ್. ಸುಬ್ರಹ್ಮಣ್ಯಂ ಅವರನ್ನು ಬಂಧಿಸಿದೆ. ಇವರು ೨೦೧೯ ರಿಂದ ೨೦೨೪ ರ ಅವಧಿಯಲ್ಲಿ ತಿರುಪತಿಯಲ್ಲಿ ಮಹಾ ವ್ಯವಸ್ಥಾಪಕರಾಗಿದ್ದರು (ಖರೀದಿ ವಿಭಾಗ) ಈ ಅವಧಿಯಲ್ಲಿ ತುಪ್ಪ, ಗೋಡಂಬಿ, ಏಲಕ್ಕಿ ಮುಂತಾದ ನೂರಾರು ಕೋಟಿ ರೂಪಾಯಿ ಮೌಲ್ಯದ ಕಚ್ಚಾವಸ್ತುಗಳ ಖರೀದಿಯು ಇವರ ಅಧೀನದಲ್ಲಿ ಮಾಡಲಾಗುತ್ತಿತ್ತು. ಇವರ ಬಂಧನದಿಂದಾಗಿ, ಲಡ್ಡು ಹಗರಣವು ಕೇವಲ ಹೊರಗಿನ ಪೂರೈಕೆದಾರರಿಗೆ ಮಾತ್ರ ಸೀಮಿತವಾಗಿರದೆ, ದೇವಸ್ಥಾನದ ಒಳಗಿನ ಅಧಿಕಾರಿಗಳ ಸಹಭಾಗಿತ್ವವೂ ಇದರಲ್ಲಿತ್ತು ಎಂಬುದು ಸ್ಪಷ್ಟವಾಗಿದೆ.

ದೇವಸ್ಥಾನದಲ್ಲಿನ ಕೆಲವು ಅಧಿಕಾರಿಗಳು ಭಾಗಿಯಾಗದೇ ಇದ್ದಿದ್ದರೆ, ಇಷ್ಟು ದೊಡ್ಡ ಪ್ರಮಾಣದಲ್ಲಿ ಕಲಬೆರಕೆ ಮಾಡುವುದು ಸಾಧ್ಯವಿರಲಿಲ್ಲ ಎಂದು ತನಿಖಾಧಿಕಾರಿಗಳು ಅಭಿಪ್ರಾಯಪಟ್ಟಿದ್ದಾರೆ.

ಸಂಪಾದಕೀಯ ನಿಲುವು

ದೇವಸ್ಥಾನದ ಪ್ರಸಾದದಲ್ಲಿ ಭ್ರಷ್ಟಾಚಾರ ಮಾಡುವವರಿಗೆ ಗಲ್ಲು ಶಿಕ್ಷೆ ವಿಧಿಸಬೇಕು!