ಸನಾತನ ರಾಷ್ಟ್ರ ಶಂಖನಾದ ಮಹೋತ್ಸವ: ಒಂದು ಮಹಾನ್ ರಾಷ್ಟ್ರ ಕಾರ್ಯದ ಆರಂಭ! – ನ್ಯಾಯವಾದಿ ವಿಷ್ಣು ಶಂಕರ್ ಜೈನ್, ಸರ್ವೋಚ್ಚ ನ್ಯಾಯಾಲಯ

ನವದೆಹಲಿ – ಡಿಸೆಂಬರ್ ೧೩ ರಿಂದ ೧೪ ರವರೆಗೆ ರಾಜಧಾನಿ ದೆಹಲಿಯಲ್ಲಿನ ‘ಭಾರತ್ ಮಂಟಪ’ ದಲ್ಲಿ ‘ಸನಾತನ ರಾಷ್ಟ್ರ ಶಂಖನಾದ ಮಹೋತ್ಸವ’ ಕಾರ್ಯಕ್ರಮವನ್ನು ಭವ್ಯವಾಗಿ ಆಯೋಜಿಸಲಾಗಿದೆ. ಸನಾತನ ರಾಷ್ಟ್ರ ಶಂಖನಾದ ಮಹೋತ್ಸವವು ಒಂದು ದೊಡ್ಡ ರಾಷ್ಟ್ರ ಕಾರ್ಯದ ಆರಂಭವಾಗಿದೆ ಎಂದು ‘ಹಿಂದೂ ಫ್ರಂಟ್ ಫಾರ್ ಜಸ್ಟೀಸ್’ನ ವಕ್ತಾರರು ಮತ್ತು ಸುಪ್ರೀಂ ಕೋರ್ಟ್‌ನ ವಕೀಲರಾದ ವಿಷ್ಣು ಶಂಕರ್ ಜೈನ್ ಅವರು ಒಂದು ವೀಡಿಯೋ ಮೂಲಕ ಹೇಳಿಕೆ ನೀಡಿದ್ದಾರೆ.

ಸನಾತನ ರಾಷ್ಟ್ರ ಶಂಖನಾದ ಮಹೋತ್ಸವದಲ್ಲಿ ಧರ್ಮಾಭಿಮಾನಿ ಹಿಂದೂಗಳು ಭಾಗವಹಿಸುವಂತೆ ಆಹ್ವಾನ ನೀಡುವಾಗ ನ್ಯಾಯವಾದಿ ವಿಷ್ಣು ಶಂಕರ್ ಜೈನ್ ಅವರು ಮಾತನಾಡಿ, “ಈ ಮಹೋತ್ಸವದ ಮುಖ್ಯ ವಿಷಯ ‘ಸನಾತನ ರಾಷ್ಟ್ರ’ ಆಗಿದೆ. ‘ಸನಾತನ ರಾಷ್ಟ್ರ’ ಸ್ಥಾಪನೆಯ ದಿಕ್ಕಿನಲ್ಲಿ ಒಂದು ನಿರ್ಣಾಯಕ ಹೆಜ್ಜೆಯಾಗಿ ಈ ಕಾರ್ಯಕ್ರಮದ ಶಂಖನಾದ ಘೋಷಣೆ ಮಾಡಲಾಗುತ್ತಿದೆ. ಈ ಮೂರು ದಿನಗಳ ಮಹೋತ್ಸವದಲ್ಲಿ ಸನಾತನ ರಾಷ್ಟ್ರದ ಸ್ಥಾಪನೆಗಾಗಿ ಭವಿಷ್ಯದಲ್ಲಿ ಯಾವ ಕಾರ್ಯದಿಶೆಯನ್ನು ನಿರ್ಧರಿಸಬೇಕು ಎಂಬುದರ ಕುರಿತು ವಿಚಾರ ಸಂಕೀರ್ಣವನ್ನು ಆಯೋಜಿಸಲಾಗುವುದು. ಈ ಕಾರ್ಯಕ್ರಮದಲ್ಲಿ ಸನಾತನ ಸಂಸ್ಕೃತಿಯ ಸುರಕ್ಷತೆ ಮತ್ತು ಸನಾತನ ಭಾರತದ ಸುರಕ್ಷತೆಯ ಬಗ್ಗೆ ವಿಚಾರಮಂಥನ ನಡೆಯಲಿದೆ. ಆದ್ದರಿಂದ, ಸನಾತನ ರಾಷ್ಟ್ರದ ಪರಿಕಲ್ಪನೆಯನ್ನು ಸಾಕಾರಗೊಳಿಸಲು ಈ ಕಾರ್ಯಕ್ರಮದಲ್ಲಿ ಭಾಗವಹಿಸಿ ಮತ್ತು ಯಶಸ್ವಿಗೊಳಿಸಬೇಕೆಂದು ನಾನು ಮನವಿ ಮಾಡುತ್ತೇನೆ.” ಎಂದು ಜೈನ್ ಅವರು ಹೇಳಿದರು.