
ನವದೆಹಲಿ – ಡಿಸೆಂಬರ್ ೧೩ ರಿಂದ ೧೪ ರವರೆಗೆ ರಾಜಧಾನಿ ದೆಹಲಿಯಲ್ಲಿನ ‘ಭಾರತ್ ಮಂಟಪ’ ದಲ್ಲಿ ‘ಸನಾತನ ರಾಷ್ಟ್ರ ಶಂಖನಾದ ಮಹೋತ್ಸವ’ ಕಾರ್ಯಕ್ರಮವನ್ನು ಭವ್ಯವಾಗಿ ಆಯೋಜಿಸಲಾಗಿದೆ. ಸನಾತನ ರಾಷ್ಟ್ರ ಶಂಖನಾದ ಮಹೋತ್ಸವವು ಒಂದು ದೊಡ್ಡ ರಾಷ್ಟ್ರ ಕಾರ್ಯದ ಆರಂಭವಾಗಿದೆ ಎಂದು ‘ಹಿಂದೂ ಫ್ರಂಟ್ ಫಾರ್ ಜಸ್ಟೀಸ್’ನ ವಕ್ತಾರರು ಮತ್ತು ಸುಪ್ರೀಂ ಕೋರ್ಟ್ನ ವಕೀಲರಾದ ವಿಷ್ಣು ಶಂಕರ್ ಜೈನ್ ಅವರು ಒಂದು ವೀಡಿಯೋ ಮೂಲಕ ಹೇಳಿಕೆ ನೀಡಿದ್ದಾರೆ.
सनातन राष्ट्र शंखनाद महोत्सव में सहभागी होकर इसे भव्य और सफल बनाएं !
— अधिवक्ता @Vishnu_Jain1, सर्वोच्च न्यायालय तथा अध्यक्ष हिन्दू फ्रंट फॉर जस्टिस, दिल्लीसेव कल्चर सेव भारत फाउंडेशन प्रस्तुत
☀️ सनातन राष्ट्र शंखनाद महोत्सव 🚩🗓️ 13-15 दिसंबर 2025
📍भारत मंडपम्, इंद्रप्रस्थ… pic.twitter.com/ZWFWd4tfPP— Sanatan Sanstha (@SanatanSanstha) November 26, 2025
ಸನಾತನ ರಾಷ್ಟ್ರ ಶಂಖನಾದ ಮಹೋತ್ಸವದಲ್ಲಿ ಧರ್ಮಾಭಿಮಾನಿ ಹಿಂದೂಗಳು ಭಾಗವಹಿಸುವಂತೆ ಆಹ್ವಾನ ನೀಡುವಾಗ ನ್ಯಾಯವಾದಿ ವಿಷ್ಣು ಶಂಕರ್ ಜೈನ್ ಅವರು ಮಾತನಾಡಿ, “ಈ ಮಹೋತ್ಸವದ ಮುಖ್ಯ ವಿಷಯ ‘ಸನಾತನ ರಾಷ್ಟ್ರ’ ಆಗಿದೆ. ‘ಸನಾತನ ರಾಷ್ಟ್ರ’ ಸ್ಥಾಪನೆಯ ದಿಕ್ಕಿನಲ್ಲಿ ಒಂದು ನಿರ್ಣಾಯಕ ಹೆಜ್ಜೆಯಾಗಿ ಈ ಕಾರ್ಯಕ್ರಮದ ಶಂಖನಾದ ಘೋಷಣೆ ಮಾಡಲಾಗುತ್ತಿದೆ. ಈ ಮೂರು ದಿನಗಳ ಮಹೋತ್ಸವದಲ್ಲಿ ಸನಾತನ ರಾಷ್ಟ್ರದ ಸ್ಥಾಪನೆಗಾಗಿ ಭವಿಷ್ಯದಲ್ಲಿ ಯಾವ ಕಾರ್ಯದಿಶೆಯನ್ನು ನಿರ್ಧರಿಸಬೇಕು ಎಂಬುದರ ಕುರಿತು ವಿಚಾರ ಸಂಕೀರ್ಣವನ್ನು ಆಯೋಜಿಸಲಾಗುವುದು. ಈ ಕಾರ್ಯಕ್ರಮದಲ್ಲಿ ಸನಾತನ ಸಂಸ್ಕೃತಿಯ ಸುರಕ್ಷತೆ ಮತ್ತು ಸನಾತನ ಭಾರತದ ಸುರಕ್ಷತೆಯ ಬಗ್ಗೆ ವಿಚಾರಮಂಥನ ನಡೆಯಲಿದೆ. ಆದ್ದರಿಂದ, ಸನಾತನ ರಾಷ್ಟ್ರದ ಪರಿಕಲ್ಪನೆಯನ್ನು ಸಾಕಾರಗೊಳಿಸಲು ಈ ಕಾರ್ಯಕ್ರಮದಲ್ಲಿ ಭಾಗವಹಿಸಿ ಮತ್ತು ಯಶಸ್ವಿಗೊಳಿಸಬೇಕೆಂದು ನಾನು ಮನವಿ ಮಾಡುತ್ತೇನೆ.” ಎಂದು ಜೈನ್ ಅವರು ಹೇಳಿದರು.
ಕೇರಳಮ್ದಲ್ಲಿ ‘ಇಸ್ಲಾಂ ಫ್ರೆಂಡ್ಲಿ’ ಜಿಮ್ ಕುರಿತು ವಿವಾದ
ಪುಣೆ ನಗರದಲ್ಲಿ ಮತ್ತೆ ‘ಕಾರ್ಪೊರೇಟ್ ಜಿಹಾದ್’ ಪ್ರಕರಣ
‘ದಾರುಲ್ ಉಲೂಮ್ ದೇವಬಂದ್’ ಭಯೋತ್ಪಾದಕರ ಕೇಂದ್ರವಾಗಿರುವುದರಿಂದ ಅದನ್ನು ನೆಲಸಮ ಮಾಡಿ ! – ಹಿಂದೂ ರಕ್ಷಾ ದಳದ ಬೇಡಿಕೆ
ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಅವರನ್ನು ಭಗವಾನ್ ಶಿವನ ರೂಪದಲ್ಲಿ ತೋರಿಸಿದ ‘ವಿಶ್ವವಾಣಿ’ ಪತ್ರಿಕೆ !
‘ಭಂಡಾರ ಎಂದರೆ ಶುದ್ಧ ಅರಿಶಿನ’ ಎಂದು ಘೋಷಿಸುವಂತೆ ಅನ್ನ ಮತ್ತು ಔಷಧ ಆಡಳಿತಕ್ಕೆ (FDA) ಆಗ್ರಹ!
ಪಾನ್ ಮಸಾಲಾ, ಗುಟ್ಕಾ ಮತ್ತು ಕಲಬೆರಕೆ ಆಹಾರ ಪದಾರ್ಥಗಳ ಒಂದೂವರೆ ಕೋಟಿಗೂ ಹೆಚ್ಚು ಮೌಲ್ಯದ ದಾಸ್ತಾನು ವಶ