ಕೇರಳ ಉಚ್ಚ ನ್ಯಾಯಾಲಯದ ತೀರ್ಪು

ತಿರುವನಂತಪುರಂ (ಕೇರಳ) – ಪತ್ನಿಯ ಆದಾಯವು ಸ್ಥಿರವಾಗಿಲ್ಲದಿದ್ದರೆ ಅಥವಾ ಆಕೆ ತನ್ನ ಖರ್ಚುಗಳನ್ನು ನಿಭಾಯಿಸಲು ಸಾಧ್ಯವಾಗದಿದ್ದರೆ, ಆಕೆಯ ಜೀವನಾಂಶ ಪಡೆಯುವ ಹಕ್ಕು ಹಾಗೆಯೇ ಉಳಿಯುತ್ತದೆ. ಆಕೆಯನ್ನು ಈ ಹಕ್ಕಿನಿಂದ ವಂಚಿತಗೊಳಿಸುವಂತಿಲ್ಲ ಎಂದು ಕೇರಳ ಉಚ್ಚ ನ್ಯಾಯಾಲಯವು ವಿಚ್ಛೇದನದ ಪ್ರಕರಣವೊಂದರಲ್ಲಿ ಮಹತ್ವದ ತೀರ್ಪು ನೀಡಿದೆ. ನ್ಯಾಯಮೂರ್ತಿ ಕೌಸರ್ ಎಡಪ್ಪಗಾಥ ಅವರು ಸರ್ವೋಚ್ಚ ನ್ಯಾಯಾಲಯದ ತೀರ್ಪುಗಳನ್ನು ಉಲ್ಲೇಖಿಸಿ ಈ ತೀರ್ಪನ್ನು ಪ್ರಕಟಿಸಿದರು. ನ್ಯಾಯಮೂರ್ತಿಗಳು, ಗಳಿಸುವ ಸಾಮರ್ಥ್ಯ ಮತ್ತು ವಾಸ್ತವವಾಗಿ ಸಾಕಷ್ಟು ಆದಾಯವನ್ನು ಗಳಿಸುವುದು, ಇವೆರಡರ ನಡುವೆ ವ್ಯತ್ಯಾಸವಿದೆ. ಎಂದು ಹೇಳಿದರು.
ಯಾವ ಪ್ರಕರಣ?
ಮಹಿಳೆಯು, ತನಗೆ ಹೊಲಿಗೆ ಕೆಲಸ ಗೊತ್ತಿದೆ, ಆದರೆ ತನಗೆ ಶಾಶ್ವತ ಕೆಲಸವಿಲ್ಲ ಮತ್ತು ಆದಾಯವೂ ಸಾಕಷ್ಟು ಇಲ್ಲ. ಆಕೆ ತನ್ನ ಪತಿಯ ಮೇಲೆ ಮಾನಸಿಕ ಮತ್ತು ದೈಹಿಕ ದೌರ್ಜನ್ಯದ ಆರೋಪ ಮಾಡಿದ್ದರು. ಇಬ್ಬರೂ ಬೇರೆಯಾದ ನಂತರ ಮಕ್ಕಳು ಮಹಿಳೆಯೊಂದಿಗೆ ವಾಸಿಸುತ್ತಿದ್ದಾರೆ. ಈ ಕಾರಣಕ್ಕಾಗಿ, ಮಹಿಳೆಯು ತನಗೆ ಹಾಗೂ ತನ್ನ ಮಕ್ಕಳಿಗೆ ಜೀವನಾಂಶಕ್ಕಾಗಿ ಬೇಡಿಕೆ ಸಲ್ಲಿಸಿದ್ದರು. ಆಕೆಯ ಪತಿಯು ಒಬ್ಬ ದರ್ಜಿ ಆಗಿದ್ದು, ಆತ ಪತ್ನಿ ಮತ್ತು ಮಕ್ಕಳಿಗೆ ಜೀವನಾಂಶ ನೀಡಲು ಸಾಕಾಗುವಷ್ಟು ಸಂಪಾದಿಸುತ್ತಾನೆ. ಮಹಿಳೆಯು ತನ್ನ ಪತಿಯಿಂದ ತನಗಾಗಿ ಪ್ರತಿ ತಿಂಗಳು 15 ಸಾವಿರ ರೂಪಾಯಿ ಹಾಗೂ ಇಬ್ಬರು ಮಕ್ಕಳಿಗಾಗಿ ತಲಾ ಪ್ರತಿ ತಿಂಗಳು 10 ಸಾವಿರ ರೂಪಾಯಿ ಜೀವನಾಂಶ ನೀಡುವಂತೆ ಬೇಡಿಕೆ ಸಲ್ಲಿಸಿದ್ದರು.
ಗುಜರಾತ್ನಲ್ಲಿ ನುಸುಳುಕೋರರ ವಿರುದ್ಧ ‘ಆಪರೇಷನ್ ಡೆಲ್ಟಾ ಹಂಟ್’: 2 ದಿನಗಳಲ್ಲಿ 501 ಬಾಂಗ್ಲಾದೇಶಿ ನಾಗರಿಕರ ಬಂಧನ !
ಕೇರಳಕ್ಕೆ ಮುಂಗಾರು ಮಳೆಯು ಆಗಮನ !
ಆರೋಪಿ ಶಾಹಿನಾ ರಫೀಕ್ ಇವಳನ್ನು ಪುಣೆಗೆ ತನಿಖೆಗಾಗಿ ಕರೆಯಿಸಲಾಗಿದೆ
ಬರಕತ ಉಲ್ಲಾ ವಿಶ್ವವಿದ್ಯಾಲಯದ ಹೆಸರು ‘ವಾಗ್ದೇವಿ ಭೋಜಪಾಲ ವಿಶ್ವವಿದ್ಯಾಲಯ’ ಎಂದು ಬದಲಾಗಲಿದೆ !
ಗೋರೆಗಾಂವ್: ಸರಕಾರಿ ಭೂಮಿಯಲ್ಲಿದ್ದ ಅಕ್ರಮ ದರ್ಗಾ ನೆಲಸಮ !
TMC Cut Money : ಬಂಗಾಳ: ಲಂಚದ ಹಣವನ್ನು ಜನರಿಗೆ ಹಿಂತಿರುಗಿಸುತ್ತಿರುವ ತೃಣಮೂಲ ಕಾಂಗ್ರೆಸ್ ನಾಯಕರು!