
ಸನಾತನ ಆಶ್ರಮದ ಶ್ರೀಮತಿ ಸುಲಭಾ ಮಾಲಖರೆ ಅಜ್ಜಿ ೧೩೬ ನೇ ವ್ಯಷ್ಟಿ ಸಂತಪದವಿಯಲ್ಲಿ ವಿರಾಜಮಾನರಾದರು !
ದೇವದ (ಪನವೇಲ್) – ಸಚ್ಚಿದಾನಂದ ಪರಬ್ರಹ್ಮ ಡಾ. ಆಠವಲೆ ಅವರ ಮೇಲೆ ಅಚಲ ಶ್ರದ್ಧೆಯಿರುವ ಸನಾತನ ಆಶ್ರಮದ ಶ್ರೀಮತಿ ಸುಲಭಾ ಮಾಲಖರೆ ಅಜ್ಜಿ (ವಯಸ್ಸು ೮೪ ವರ್ಷ) ಶೇ. ೭೧ ರಷ್ಟು ಆಧ್ಯಾತ್ಮಿಕ ಮಟ್ಟವನ್ನು ತಲುಪುವ ಮೂಲಕ ಸನಾತನ ಸಂಸ್ಥೆಯ ೧೩೬ ನೇ ವ್ಯಷ್ಟಿ ಸಂತಪದವಿಯಲ್ಲಿ ವಿರಾಜಮಾನರಾಗಿದ್ದಾರೆ. ಈ ಆನಂದದಾಯಕ ಸುದ್ದಿಯನ್ನು ಸನಾತನದ ಪೂ. (ಸೌ.) ಅಶ್ವಿನಿ ಪವಾರ ಅವರು ನವೆಂಬರ್ ೨೩ ರಂದು ಒಂದು ಅನೌಪಚಾರಿಕ ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದ ಸಾಧಕರಿಗೆ ತಿಳಿಸಿದರು. ಪೂ. (ಸೌ.) ಅಶ್ವಿನಿ ಪವಾರ ಅವರು ಪೂ. (ಶ್ರೀಮತಿ) ಸುಲಭಾ ಮಾಲಖರೆ ಅಜ್ಜಿ ಅವರಿಗೆ ಹೂವಿನ ಹಾರ ಹಾಕಿ, ಶಾಲು ಹೊದಿಸಿ, ಶ್ರೀಫಲ ಮತ್ತು ಉಡುಗೊರೆ ನೀಡಿ ಸನ್ಮಾನಿಸಿದರು. ಈ ವೇಳೆ ಉಪಸ್ಥಿತರಿದ್ದ ಆಶ್ರಮದ ಸಾಧಕರು ಪೂ. ಅಜ್ಜಿಯವರ ಗುಣವೈಶಿಷ್ಟ್ಯಗಳನ್ನು ವರ್ಣಿಸಿದರು. ಪೂ. ಅಜ್ಜಿಯವರು ತಮ್ಮ ಜೀವನದ ಹಿಂದಿನ ಪ್ರಸಂಗಗಳನ್ನು ಹೇಳಿ, ‘ಆ ಪ್ರಸಂಗಗಳಲ್ಲಿ ತಾವು ಸಚ್ಚಿದಾನಂದ ಪರಬ್ರಹ್ಮ ಡಾ. ಆಠವಲೆ ಅವರ ಕೃಪೆಯನ್ನು ಹೇಗೆ ಅನುಭವಿಸಿದೆ’, ಎಂಬುದನ್ನು ಎಲ್ಲರಿಗೂ ತಿಳಿಸಿದರು.
ಸೋಮನಾಥ ಜ್ಯೋತಿರ್ಲಿಂಗದ ದಿವ್ಯ ಅಂಶಗಳು ಸನಾತನ ಸಂಸ್ಥೆಗೆ ಪ್ರಾಪ್ತವಾಗುವ ವರೆಗಿನ ದಿವ್ಯ ಪ್ರಯಾಣ !
ಯಜ್ಞಸಂಸ್ಕೃತಿಯನ್ನು ಪುನರುಜ್ಜೀವನಗೊಳಿಸುವ ಸಚ್ಚಿದಾನಂದ ಪರಬ್ರಹ್ಮ ಡಾ. ಆಠವಲೆ !
ಯಜ್ಞಸಂಸ್ಕೃತಿಯ ಸಂವರ್ಧನೆ ಬಗ್ಗೆ ಸಚ್ಚಿದಾನಂದ ಪರಬ್ರಹ್ಮ ಡಾ. ಆಠವಲೆಯವರ ದೃಷ್ಟಿಕೋನ !
ಹಿಂದೂ ರಾಷ್ಟ್ರದ ಸ್ಥಾಪನೆಗಾಗಿಯೇ ಯಜ್ಞಸಮಾರಂಭ ಮತ್ತು ಸಮಷ್ಟಿ ಧರ್ಮಪ್ರಸಾರ !
೧೨ ಜ್ಯೋತಿರ್ಲಿಂಗಗಳಲ್ಲಿ ಪ್ರಥಮವಾಗಿರುವ ಮೂಲ ಸೋಮನಾಥ ಜ್ಯೋತಿರ್ಲಿಂಗದ ದಿವ್ಯ ಅಂಶಗಳು ಸನಾತನ ಸಂಸ್ಥೆಗೆ ಸಮರ್ಪಣೆ !
ಯಜ್ಞಗಳನ್ನು ಆಯೋಜಿಸುವಲ್ಲಿ ಸಚ್ಚಿದಾನಂದ ಪರಬ್ರಹ್ಮ ಡಾಕ್ಟರರ ವ್ಯಾಪಕ ಉದ್ದೇಶ !