ಗರ್ಭಿಣಿಯರು ಮತ್ತು ನವಜಾತ ಶಿಶುಗಳ ಆರೋಗ್ಯದ ಮೇಲೆಯೂ ಪರಿಣಾಮ ಆಗುತ್ತಿದೆ !

ಚಂಡೀಗಢ (ಹರಿಯಾಣ) – ಹರಿಯಾಣದಲ್ಲಿ ವಾಯುಮಾಲಿನ್ಯದ ಪರಿಣಾಮವು ಈಗ ಗರ್ಭಿಣಿ ಮಹಿಳೆಯರು ಮತ್ತು ನವಜಾತ ಶಿಶುಗಳ ಮೇಲೂ ಕಾಣಿಸಿಕೊಳ್ಳಲಾರಂಭಿಸಿದೆ. ಮಾಲಿನ್ಯದಿಂದಾಗಿ ಅವಧಿಗೂ ಮುನ್ನ ಹೆರಿಗೆಯಾಗುವ ಪ್ರಮಾಣ ಹೆಚ್ಚುತ್ತಿರುವುದು ಗಮನಕ್ಕೆ ಬಂದಿದೆ. ರೋಹತಕ್ನ ಸ್ತ್ರೀರೋಗ ವಿಭಾಗದ ಮುಖ್ಯಸ್ಥರಾದ ಡಾ. ಪುಷ್ಪಾ ದಹಿಯಾ ಅವರು ಈ ನಿಷ್ಕರ್ಷವನ್ನು ಮಂಡಿಸಿದ್ದಾರೆ. ಅವರ ಪ್ರಕಾರ, ಕಳೆದ ಒಂದು ವರ್ಷದಲ್ಲಿ ಇಲ್ಲಿ ಒಟ್ಟು 13 ಸಾವಿರದ 500 ಹೆರಿಗೆಗಳಾಗಿವೆ. ಅವುಗಳಲ್ಲಿ 18 ರಷ್ಟು, ಅಂದರೆ ಅಂದಾಜು 2 ಸಾವಿರದ 430 ಶಿಶುಗಳು ಪೂರ್ಣಾವಧಿಗಿಂತ ಮೊದಲೇ ಜನಿಸಿವೆ.
೧. ಡಾ. ಪುಷ್ಪಾ ಅವರ ಅಭಿಪ್ರಾಯದಂತೆ, ಇದರ ಹಿಂದೆ ಮಾಲಿನ್ಯವು ಪ್ರಮುಖ ಅಂಶವಾಗಿದೆ. ಗಾಳಿಯಲ್ಲಿ ಬೆರೆತಿರುವ ರಾಸಾಯನಿಕ ಕಣಗಳು ಉಸಿರಾಟದ ಮೂಲಕ ದೇಹವನ್ನು ಪ್ರವೇಶಿಸಿ ರಕ್ತದ ಮೂಲಕ ಗರ್ಭವನ್ನು ತಲುಪುತ್ತವೆ. ಗಾಳಿ ಕಲುಷಿತವಾಗಿರುವುದರಿಂದ ಕೆಮ್ಮು, ಶೀತ ಮತ್ತು ಅಸ್ತಮಾ ಹೆಚ್ಚಾಗಿದೆ. ಈ ಸ್ಥಿತಿಯು ಗರ್ಭಿಣಿಯರಿಗೆ ಅಪಾಯಕಾರಿಯಾಗಿದೆ. ಪದೇ ಪದೇ ಬರುವ ಕೆಮ್ಮು ಸಹ ಗರ್ಭದ ಮೇಲೆ ಪರಿಣಾಮ ಬೀರುತ್ತದೆ. ಈ ಎಲ್ಲಾ ಅಂಶಗಳು ಅವಧಿಗೂ ಮುನ್ನ ಹೆರಿಗೆಯಾಗುವ ಸಾಧ್ಯತೆಯನ್ನು ಹೆಚ್ಚಿಸುತ್ತವೆ. ಇದರ ಜೊತೆಗೆ, ಅಧಿಕ ರಕ್ತದೊತ್ತಡ, ಮಧುಮೇಹ, ಮಲೇರಿಯಾ ಮತ್ತು ಡೆಂಗ್ಯೂ ಇದ್ದರೂ ಸಹ ಅವಧಿಗೂ ಮುನ್ನ ಹೆರಿಗೆಯಾಗುವ ಅಪಾಯ ಹೆಚ್ಚಾಗುತ್ತದೆ.
೨. ಡಾ. ದಹಿಯಾ ಅವರ ಪ್ರಕಾರ, 36 ವಾರಗಳ ಮೊದಲು ಆಗುವ ಜನನವನ್ನು ಅವಧಿಗೂ ಮುನ್ನ ಹೆರಿಗೆ ಎಂದು ಪರಿಗಣಿಸಲಾಗುತ್ತದೆ. ಕೆಲವು ಶಿಶುಗಳು 28 ವಾರಗಳ ಮೊದಲು, ಕೆಲವು 28 ರಿಂದ 32 ವಾರಗಳ ನಡುವೆ ಮತ್ತು ಕೆಲವು 37 ವಾರಗಳ ಮೊದಲು ಜನಿಸುತ್ತಿವೆ. 34 ರಿಂದ 36 ವಾರಗಳಲ್ಲಿ ಜನಿಸಿದ ಶಿಶುಗಳಿಗೆ ಹೋಲಿಸಿದರೆ ಸ್ವಲ್ಪ ಕಡಿಮೆ ಸಮಸ್ಯೆಗಳು ಎದುರಾಗುತ್ತವೆ. ಶಿಶು ಕಡಿಮೆ ದಿನಗಳಲ್ಲಿ ಜನಿಸಿದರೆ, ಅಪಾಯವು ಹೆಚ್ಚು ಇರುತ್ತದೆ.
ಹೇಗೆ ಕಾಳಜಿ ವಹಿಸಬೇಕು?
ಡಾ. ದಹಿಯಾ ಅವರ ಪ್ರಕಾರ, ನಿಯಮಿತ ಪರೀಕ್ಷೆ ಮತ್ತು ವೈದ್ಯರ ಸಲಹೆಯಂತೆ ಔಷಧಿಗಳನ್ನು ತೆಗೆದುಕೊಳ್ಳುವುದರಿಂದ ಅವಧಿಗೂ ಮುನ್ನ ಹೆರಿಗೆಯಾಗುವ ಪ್ರಮಾಣವನ್ನು ಕಡಿಮೆ ಮಾಡಬಹುದು. ಹಸಿರು ತರಕಾರಿಗಳು, ಹಾಲು ಮತ್ತು ಲಸ್ಸಿ ಸೇವನೆಯು ಪೌಷ್ಟಿಕಾಂಶದ ಕೊರತೆಯನ್ನು ನೀಗಿಸುತ್ತದೆ.
ಅವಧಿಗೂ ಮುನ್ನ ಜನಿಸಿದ ಶಿಶುಗಳಿಗೆ ಎದುರಾಗುವ ತೊಂದರೆಗಳು
ಅವಧಿಗೂ ಮುನ್ನ ಜನಿಸಿದ ನವಜಾತ ಶಿಶುಗಳಿಗೆ ಹೊರಗಿನ ತಾಪಮಾನವನ್ನು ಸಹಿಸಲು ಸಾಧ್ಯವಾಗುವುದಿಲ್ಲ. ಅವರಿಗೆ ಚಳಿ ಆಗುವುದು, ರಕ್ತದಲ್ಲಿನ ಸಕ್ಕರೆ ಹೆಚ್ಚಾಗುವುದು, ಕಾಮಾಲೆ (ಹಳದಿ ಬಣ್ಣಕ್ಕೆ ತಿರುಗುವುದು) ಮತ್ತು ಸೋಂಕಿನ ಅಪಾಯ ಹೆಚ್ಚು ಇರುತ್ತದೆ. ಅವರಿಗೆ ಹೆಚ್ಚಿನ ಕಾಳಜಿಯ ಅವಶ್ಯಕತೆಯಿದೆ. ದೇಹ ದುರ್ಬಲವಾಗಿರುವುದರಿಂದ ಅವರಿಗೆ ದೃಷ್ಟಿ ಕಡಿಮೆಯಾಗುವ ಸಾಧ್ಯತೆ ಇರುತ್ತದೆ. ಸೋಂಕು ಬೇಗನೆ ತಗಲಬಹುದು. ಬಾಲ್ಯಾವಸ್ಥೆಯಲ್ಲಿ ಸರಿಯಾದ ಕಾಳಜಿ ವಹಿಸದಿದ್ದರೆ, ಬುದ್ಧಿ ಕಡಿಮೆ ಆಗಬಹುದು.
ಗರ್ಭಿಣಿಯರಿಗೆ ಮಾಲಿನ್ಯ ಏಕೆ ಅಪಾಯಕಾರಿ?
ಮಾಲಿನ್ಯದಿಂದಾಗಿ ಮಹಿಳೆಯರಲ್ಲಿ ಸೋಂಕಿನ ಅಪಾಯ ಹೆಚ್ಚಾಗುತ್ತದೆ. ಆರೋಗ್ಯ ಹದಗೆಡುವುದರಿಂದ ಪೋಷಣೆ ಕಡಿಮೆ ಪ್ರಮಾಣದಲ್ಲಿ ಸಿಗುತ್ತದೆ ಮತ್ತು ರೋಗನಿರೋಧಕ ಶಕ್ತಿ ಕಡಿಮೆಯಾಗುತ್ತದೆ. ದೇಹದಲ್ಲಿ ಜೀವಸತ್ವಗಳು ಮತ್ತು ಪ್ರೋಟೀನ್ಗಳು ಕಡಿಮೆಯಾಗುತ್ತವೆ. ಇದರಿಂದ ಗರ್ಭದಲ್ಲಿರುವ ಶಿಶುಗೆ ಕೂಡ ಅಗತ್ಯ ಪೋಷಣೆ ಸಿಗುವುದಿಲ್ಲ. ಮಾಲಿನ್ಯದಿಂದಾಗಿ ಗರ್ಭಾಶಯದಲ್ಲಿ ರೂಪುಗೊಳ್ಳುವ ಪ್ಲಾಸೆಂಟಾ ಗರ್ಭಕ್ಕೆ ಸಾಕಷ್ಟು ಆಮ್ಲಜನಕವನ್ನು ಒದಗಿಸಲು ವಿಫಲವಾಗುತ್ತದೆ ಎಂದು ನಾಗರಿಕ ಆಸ್ಪತ್ರೆಯ ಸ್ತ್ರೀರೋಗ ವಿಭಾಗದ ತಜ್ಞರಾದ ಡಾ. ಸುರೇಂದ್ರ ಮಲಿಕ್ ಅವರು ಮಾಹಿತಿ ನೀಡಿದ್ದಾರೆ.
ಬದರಿನಾಥ ದೇವಸ್ಥಾನದ ದೇಣಿಗೆ ಹಣ ಕಳ್ಳತನ ಪ್ರಕರಣ; ದೇವಸ್ಥಾನದ ಮಾಜಿ ಅಧಿಕಾರಿಯ ಬಂಧನ : Badrinath Temple Arrest
‘ಹಿಂದಿ ಮತ್ತು ಉರ್ದು ಭಾರತದ ಭಾಷೆಗಳು, ಆದರೆ ಸಂಸ್ಕೃತ ಹೊರಗಿನಿಂದ ಬಂದಿದೆಯಂತೆ!’ : Congress MP Mohammad Javed
ಮಾಫಿಯಾಗಳನ್ನು ನರಕಕ್ಕೆ ಅಥವಾ ಜೈಲಿಗೆ ಕಳುಹಿಸುತ್ತೇನೆ ! – ಮುಖ್ಯಮಂತ್ರಿ ಯೋಗಿ ಆದಿತ್ಯನಾಥ : CM Yogi Adityanath
‘ಶ್ರೀಕೃಷ್ಣ ಮುಸಲ್ಮಾನರಾಗಿದ್ದರು ಮತ್ತು ದಿನಕ್ಕೆ ೫ ಬಾರಿ ನಮಾಜ್ ಮಾಡುತ್ತಿದ್ದರಂತೆ!’– Maulana Jarjis Ansari
ವಂಚನೆ ಅಥವಾ ಬ್ಲ್ಯಾಕ್ ಮೇಲ್ ಮೂಲಕ ದೈಹಿಕ ಸಂಬಂಧವಾದರೆ, ಅದನ್ನು ‘ಬಲಾತ್ಕಾರ’ ಎಂದು ಪರಿಗಣಿಸಲಾಗುವುದು! – ಮದ್ರಾಸ್ ಉಚ್ಚ ನ್ಯಾಯಾಲಯ
‘ಐ.ಆರ್.ಸಿ.ಟಿ.ಸಿ.’ಯ ಹೊಸ ಜಾಲತಾಣ ಕಾರ್ಯಾರಂಭ : ಟಿಕೆಟ್ ಕಾಯ್ದಿರಿಸುವಿಕೆ ಮತ್ತಷ್ಟು ಸುಲಭ