ರಾಜಸ್ಥಾನ: ‘ಸಂಸ್ಕೃತಿ ಯುವ ಸಂಸ್ಥೆ’ಯ ಅಂತರರಾಷ್ಟ್ರೀಯ ಅಧ್ಯಕ್ಷ ಪಂಡಿತ್ ಸುರೇಶ್ ಮಿಶ್ರ ಅವರಿಗೆ ದೆಹಲಿಯಲ್ಲಿ ನಡೆಯುವ ಸನಾತನ ರಾಷ್ಟ್ರ ಶಂಖನಾದ ಮಹೋತ್ಸವಕ್ಕೆ ಆಮಂತ್ರಣ ! Sanatan Rashtra Shankanad Mahotsav

ಎಡದಿಂದ: ಸುರೇಶ ಮಿಶ್ರ, ಶ್ರೀ. ರಮೇಶ್ ಶಿಂದೆ ಮತ್ತು ಶ್ರೀ ಆನಂದ ಜಾಖೋಟಿಯಾ.

ಜೈಪುರ (ರಾಜಸ್ಥಾನ) – ಇಲ್ಲಿನ ‘ಸಂಸ್ಕೃತಿ ಯುವ ಸಂಸ್ಥೆ’ಯ ಅಂತರರಾಷ್ಟ್ರೀಯ ಅಧ್ಯಕ್ಷರು ಹಾಗೂ ‘ಸರ್ವ ಬ್ರಾಹ್ಮಣ ಮಹಾಸಭೆ’ಯ ಸಂಸ್ಥಾಪಕರಾದ ಪಂಡಿತ್ ಸುರೇಶ್ ಮಿಶ್ರ ಅವರಿಗೆ ಡಿಸೆಂಬರ್ ೧೩ ಮತ್ತು ೧೪ ರಂದು ದೆಹಲಿಯಲ್ಲಿ ನಡೆಯಲಿರುವ ಸನಾತನ ರಾಷ್ಟ್ರ ಶಂಖನಾದ ಮಹೋತ್ಸವಕ್ಕೆ ಆಹ್ವಾನ ನೀಡಲಾಗಿದೆ. ಹಿಂದೂ ಜನಜಾಗೃತಿ ಸಮಿತಿಯ ರಾಷ್ಟ್ರೀಯ ವಕ್ತಾರರಾದ ಶ್ರೀ. ರಮೇಶ್ ಶಿಂದೆ ಮತ್ತು ಸಮಿತಿಯ ಮಧ್ಯಪ್ರದೇಶ ಹಾಗೂ ರಾಜಸ್ಥಾನ ಸಂಯೋಜಕರಾದ ಶ್ರೀ. ಆನಂದ ಜಾಖೋಟಿಯಾ ಅವರು ಪಂಡಿತ್ ಮಿಶ್ರ ಅವರನ್ನು ಭೇಟಿ ಮಾಡಿ ಮಹೋತ್ಸವಕ್ಕೆ ಆಹ್ವಾನಿಸಿದರು.