ಕೇರಳದ ಮುನಂಬಂನಲ್ಲಿ ಭೂ ವಿವಾದ

ಕೊಚ್ಚಿ (ಕೇರಳ) – ಕೇರಳ ರಾಜ್ಯದ ಮುನಂಬಂನಲ್ಲಿನ ಒಂದು ಆಸ್ತಿಯನ್ನು ವಕ್ಫ್ ಎಂದು ಘೋಷಿಸಿದ ನಂತರ, ಅಲ್ಲಿನ ಸುಮಾರು 600 ಕುಟುಂಬಗಳ ಸ್ಥಳಾಂತರದ ಸಾಧ್ಯತೆ ಉಂಟಾಯಿತು. ಈ ಹಿನ್ನೆಲೆಯಲ್ಲಿ, ಆ ಆಸ್ತಿಯನ್ನು ಪರಿಶೀಲಿಸಲು ಸರಕಾರ ರಚಿಸಿದ ತನಿಖಾ ಆಯೋಗದ ನಿರ್ಧಾರಕ್ಕೆ ಕೇರಳ ಉಚ್ಚ ನ್ಯಾಯಾಲಯನ ವಿಭಾಗೀಯ ಪೀಠವು ಮಾನ್ಯತೆ ನೀಡಿತ್ತು. ಇದರ ವಿರುದ್ಧ ವಕ್ಫ್ ಮಂಡಳಿಯು ಸರ್ವೋಚ್ಚ ನ್ಯಾಯಾಲಯದಲ್ಲಿ ಸವಾಲು ಹಾಕಿದೆ.
ಮುನಂಬಂನಲ್ಲಿನ ಭೂ ವಿವಾದವು 404.76 ಎಕರೆಗೆ ಸಂಬಂಧಿಸಿತ್ತು; ಆದರೆ ಸಮುದ್ರದ ನೀರಿನಿಂದಾದ ಭೂ ಸವೆತದಿಂದಾಗಿ ಅದು ಸುಮಾರು 135.11 ಎಕರೆಗೆ ಇಳಿದಿದೆ. 1950 ರಲ್ಲಿ ಸಿದ್ದಿಕ್ ಸೈತ್ ಎಂಬ ವ್ಯಕ್ತಿಯು ಈ ಭೂಮಿಯನ್ನು ಫಾರೂಕ್ ಕಾಲೇಜಿಗೆ ಉಡುಗೊರೆಯಾಗಿ ನೀಡಿದ್ದರು. ಆದಾಗ್ಯೂ, ಈ ಭೂಮಿಯ ಮೇಲೆ ಈಗಾಗಲೇ ಅನೇಕ ಜನರ ಮನೆಗಳಿದ್ದವು. ಇದರಿಂದಾಗಿ ಕಾಲೇಜು ಮತ್ತು ಅಲ್ಲಿ ವಾಸಿಸುವ ನಾಗರಿಕರ ನಡುವೆ ಕಾನೂನು ಹೋರಾಟ ನಡೆಯುತ್ತಿದೆ. ನಂತರ ಕಾಲೇಜು ಭೂಮಿಯ ಕೆಲವು ಭಾಗವನ್ನು ಈ ನಿವಾಸಿಗಳಿಗೆ ಮಾರಾಟ ಮಾಡಿದೆ. ಈ ಭೂಮಿ ಮಾರಾಟ ಮಾಡುವಾಗ, ಇದು ವಕ್ಫ್ ಭೂಮಿ ಎಂದು ನಮೂದಿಸಿರಲಿಲ್ಲ. 2019 ರಲ್ಲಿ ಕೇರಳ ವಕ್ಫ್ ಮಂಡಳಿಯು ಈ ಭೂಮಿಯನ್ನು ಔಪಚಾರಿಕವಾಗಿ ವಕ್ಫ್ ಆಸ್ತಿ ಎಂದು ನೋಂದಾಯಿಸಿತು, ಇದರಿಂದಾಗಿ ಹಿಂದಿನ ಮಾರಾಟಗಳು ರದ್ದಾದವು. ಇದರಿಂದ ನಿವಾಸಿಗಳು ಪ್ರತಿಭಟನೆ ವ್ಯಕ್ತಪಡಿಸಿದರು.
ಕೇರಳಮ್ದಲ್ಲಿ ‘ಇಸ್ಲಾಂ ಫ್ರೆಂಡ್ಲಿ’ ಜಿಮ್ ಕುರಿತು ವಿವಾದ
ಪುಣೆ ನಗರದಲ್ಲಿ ಮತ್ತೆ ‘ಕಾರ್ಪೊರೇಟ್ ಜಿಹಾದ್’ ಪ್ರಕರಣ
‘ದಾರುಲ್ ಉಲೂಮ್ ದೇವಬಂದ್’ ಭಯೋತ್ಪಾದಕರ ಕೇಂದ್ರವಾಗಿರುವುದರಿಂದ ಅದನ್ನು ನೆಲಸಮ ಮಾಡಿ ! – ಹಿಂದೂ ರಕ್ಷಾ ದಳದ ಬೇಡಿಕೆ
ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಅವರನ್ನು ಭಗವಾನ್ ಶಿವನ ರೂಪದಲ್ಲಿ ತೋರಿಸಿದ ‘ವಿಶ್ವವಾಣಿ’ ಪತ್ರಿಕೆ !
‘ಭಂಡಾರ ಎಂದರೆ ಶುದ್ಧ ಅರಿಶಿನ’ ಎಂದು ಘೋಷಿಸುವಂತೆ ಅನ್ನ ಮತ್ತು ಔಷಧ ಆಡಳಿತಕ್ಕೆ (FDA) ಆಗ್ರಹ!
ಪಾನ್ ಮಸಾಲಾ, ಗುಟ್ಕಾ ಮತ್ತು ಕಲಬೆರಕೆ ಆಹಾರ ಪದಾರ್ಥಗಳ ಒಂದೂವರೆ ಕೋಟಿಗೂ ಹೆಚ್ಚು ಮೌಲ್ಯದ ದಾಸ್ತಾನು ವಶ