ಕೇರಳ ಉಚ್ಚ ನ್ಯಾಯಾಲಯದ ತೀರ್ಪಿನ ವಿರುದ್ಧ ವಕ್ಫ್ ಮಂಡಳಿಯಿಂದ ಸರ್ವೋಚ್ಚ ನ್ಯಾಯಾಲಯದಲ್ಲಿ ಸವಾಲು Kerala Waqf Land Dispute

ಕೇರಳದ ಮುನಂಬಂನಲ್ಲಿ ಭೂ ವಿವಾದ

ಕೊಚ್ಚಿ (ಕೇರಳ) – ಕೇರಳ ರಾಜ್ಯದ ಮುನಂಬಂನಲ್ಲಿನ ಒಂದು ಆಸ್ತಿಯನ್ನು ವಕ್ಫ್ ಎಂದು ಘೋಷಿಸಿದ ನಂತರ, ಅಲ್ಲಿನ ಸುಮಾರು 600 ಕುಟುಂಬಗಳ ಸ್ಥಳಾಂತರದ ಸಾಧ್ಯತೆ ಉಂಟಾಯಿತು. ಈ ಹಿನ್ನೆಲೆಯಲ್ಲಿ, ಆ ಆಸ್ತಿಯನ್ನು ಪರಿಶೀಲಿಸಲು ಸರಕಾರ ರಚಿಸಿದ ತನಿಖಾ ಆಯೋಗದ ನಿರ್ಧಾರಕ್ಕೆ ಕೇರಳ ಉಚ್ಚ ನ್ಯಾಯಾಲಯ‌ನ ವಿಭಾಗೀಯ ಪೀಠವು ಮಾನ್ಯತೆ ನೀಡಿತ್ತು. ಇದರ ವಿರುದ್ಧ ವಕ್ಫ್ ಮಂಡಳಿಯು ಸರ್ವೋಚ್ಚ ನ್ಯಾಯಾಲಯದಲ್ಲಿ ಸವಾಲು ಹಾಕಿದೆ.

ಮುನಂಬಂನಲ್ಲಿನ ಭೂ ವಿವಾದವು 404.76 ಎಕರೆಗೆ ಸಂಬಂಧಿಸಿತ್ತು; ಆದರೆ ಸಮುದ್ರದ ನೀರಿನಿಂದಾದ ಭೂ ಸವೆತದಿಂದಾಗಿ ಅದು ಸುಮಾರು 135.11 ಎಕರೆಗೆ ಇಳಿದಿದೆ. 1950 ರಲ್ಲಿ ಸಿದ್ದಿಕ್ ಸೈತ್ ಎಂಬ ವ್ಯಕ್ತಿಯು ಈ ಭೂಮಿಯನ್ನು ಫಾರೂಕ್ ಕಾಲೇಜಿಗೆ ಉಡುಗೊರೆಯಾಗಿ ನೀಡಿದ್ದರು. ಆದಾಗ್ಯೂ, ಈ ಭೂಮಿಯ ಮೇಲೆ ಈಗಾಗಲೇ ಅನೇಕ ಜನರ ಮನೆಗಳಿದ್ದವು. ಇದರಿಂದಾಗಿ ಕಾಲೇಜು ಮತ್ತು ಅಲ್ಲಿ ವಾಸಿಸುವ ನಾಗರಿಕರ ನಡುವೆ ಕಾನೂನು ಹೋರಾಟ ನಡೆಯುತ್ತಿದೆ. ನಂತರ ಕಾಲೇಜು ಭೂಮಿಯ ಕೆಲವು ಭಾಗವನ್ನು ಈ ನಿವಾಸಿಗಳಿಗೆ ಮಾರಾಟ ಮಾಡಿದೆ. ಈ ಭೂಮಿ ಮಾರಾಟ ಮಾಡುವಾಗ, ಇದು ವಕ್ಫ್ ಭೂಮಿ ಎಂದು ನಮೂದಿಸಿರಲಿಲ್ಲ. 2019 ರಲ್ಲಿ ಕೇರಳ ವಕ್ಫ್ ಮಂಡಳಿಯು ಈ ಭೂಮಿಯನ್ನು ಔಪಚಾರಿಕವಾಗಿ ವಕ್ಫ್ ಆಸ್ತಿ ಎಂದು ನೋಂದಾಯಿಸಿತು, ಇದರಿಂದಾಗಿ ಹಿಂದಿನ ಮಾರಾಟಗಳು ರದ್ದಾದವು. ಇದರಿಂದ ನಿವಾಸಿಗಳು ಪ್ರತಿಭಟನೆ ವ್ಯಕ್ತಪಡಿಸಿದರು.