ರಾಂಚಿ (ಝಾರಖಂಡ) ಇಲ್ಲಿನ ವಿಶ್ವ ಹಿಂದೂ ಪರಿಷತ್ತಿನ ಅಧ್ಯಕ್ಷರಾದ ಚಂದ್ರಕಾಂತ ರಾಯಪತ ಅವರಿಗೆ ದೆಹಲಿಯಲ್ಲಿನ ‘ಸನಾತನ ರಾಷ್ಟ್ರ ಶಂಖನಾದ ಮಹೋತ್ಸವ’ಕ್ಕೆ ಆಹ್ವಾನ

ಎಡಗಡೆಯಿಂದ ಪೂ. (ಸೌ.) ಸುನೀತಾ ಖೇಮಕಾ, ಶ್ರೀಚಿತ್‌ಶಕ್ತಿ (ಸೌ.) ಅಂಜಲಿ ಮುಕುಲ ಗಾಡಗೀಳ, ಶ್ರೀ. ಚಂದ್ರಕಾಂತ ರಾಯಪತ, ಪೂ. ಪ್ರದೀಪ ಖೇಮಕಾ ಮತ್ತು ಶ್ರೀ. ಶಂಭೂ ಗವಾರೆ

ನವ ದೆಹಲಿ – ವಿಶ್ವ ಹಿಂದೂ ಪರಿಷತ್ತಿನ ಜಾರ್ಖಂಡನ ರಾಂಚಿ ವಿಭಾಗದ ಅಧ್ಯಕ್ಷರಾದ ಶ್ರೀ. ಚಂದ್ರಕಾಂತ ರಾಯಪತ ಅವರಿಗೆ ದೆಹಲಿಯಲ್ಲಿ ನಡೆಯಲಿರುವ ‘ಸನಾತನ ರಾಷ್ಟ್ರ ಶಂಖನಾದ ಮಹೋತ್ಸವ’ಕ್ಕಾಗಿ ಆಹ್ವಾನ ನೀಡಲಾಯಿತು. ಸನಾತನ ಸಂಸ್ಥೆಯ ಸಂಸ್ಥಾಪಕರಾದ ಸಚ್ಚಿದಾನಂದ ಪರಬ್ರಹ್ಮ ಡಾ. ಜಯಂತ ಆಠವಲೆ ಅವರ ಆಧ್ಯಾತ್ಮಿಕ ಉತ್ತರಾಧಿಕಾರಿಗಳಲ್ಲೊಬ್ಬರಾದ ಶ್ರೀಚಿತ್‌ಶಕ್ತಿ (ಸೌ.) ಅಂಜಲಿ ಮುಕುಲ ಗಾಡಗೀಳ ಅವರು ಮಹೋತ್ಸವಕ್ಕೆ ಅವರಿಗೆ ಆಮಂತ್ರಣ ನೀಡಿದರು. ಈ ಸಂದರ್ಭದಲ್ಲಿ ಸನಾತನ ಸಂಸ್ಥೆಯ ಸಂತರಾದ ಪೂ. ಪ್ರದೀಪ ಖೇಮಕಾ, ಪೂ. (ಸೌ.) ಸುನೀತಾ ಖೇಮಕಾ, ಹಾಗೂ ಹಿಂದೂ ಜನಜಾಗೃತಿ ಸಮಿತಿಯ ಶ್ರೀ. ಶಂಭು ಗವಾರೆ ಅವರು ಉಪಸ್ಥಿತರಿದ್ದರು.

ಈ ಭವ್ಯ ಮಹೋತ್ಸವವು ಮುಂಬರುವ ಡಿಸೆಂಬರ 13 ರಿಂದ 14 ರ ಕಾಲಾವಧಿಯಲ್ಲಿ ಭಾರತ ಮಂಟಪಂ, ನವ ದೆಹಲಿಯಲ್ಲಿ ನಡೆಯಲಿದ್ದು, ರಾಷ್ಟ್ರಚೇತನವನ್ನು ಜಾಗೃತಗೊಳಿಸುವುದು ಮತ್ತು ಧರ್ಮಶಿಕ್ಷಣದ ಮೂಲಕ ಸಮಾಜವನ್ನು ಒಗ್ಗೂಡಿಸುವುದು ಈ ಆಯೋಜನೆಯ ಉದ್ದೇಶವಾಗಿದೆ.