|

ಮುಂಬಯಿ – ಕಾನೂನುಗಳನ್ನು ರೂಪಿಸುವ ಜನಪ್ರತಿನಿಧಿಗಳೇ ಪರೋಕ್ಷವಾಗಿ ಕಾನೂನಿನ ಕಟ್ಟುಪಾಡಿನಿಂದ ದೂರ ಉಳಿದಿರುವ ವಿಷಯ ಬೆಳಕಿಗೆ ಬಂದಿದೆ. ಶಾಸಕರು ಮತ್ತು ಸಂಸದರ ವಿರುದ್ಧ ಕೌಟುಂಬಿಕ ಹಿಂಸಾಚಾರ, ಅತ್ಯಾಚಾರ, ಕೊಲೆ ಮತ್ತು ಇತರ ಅಪರಾಧಗಳ ಒಟ್ಟು ೪೮೮ ಪ್ರಕರಣಗಳು ಬಾಕಿ ಇವೆ. ಮುಂಬಯಿ ಉಚ್ಚ ನ್ಯಾಯಾಲಯನ ಕಾರ್ಯವ್ಯಾಪ್ತಿಗೆ ಬರುವ ಗೋವಾ ಮತ್ತು ದೀವ್-ದಮನ್ ನಲ್ಲಿನ ಪ್ರಕರಣಗಳೂ ಕೂಡ ಸೇರಿವೆ. ಈ ಪೈಕಿ ಕೆಲವೇ ಕೆಲವು ಪ್ರಕರಣಗಳು ಇತ್ಯರ್ಥಗೊಂಡಿವೆ. ಇನ್ನೂ ೪೭೮ ಪ್ರಕರಣಗಳ ಇತ್ಯರ್ಥವಾಗಿಲ್ಲ ಎಂಬ ಮಾಹಿತಿಯನ್ನು ರಾಜ್ಯ ಸರಕಾರದ ಪರವಾಗಿ ನವೆಂಬರ್ ೧೪ ರಂದು ಮುಂಬಯಿ ಉಚ್ಚ ನ್ಯಾಯಾಲಯಗೆ ಮಾಹಿತಿ ನೀಡಲಾಯಿತು.
ಪ್ರಕರಣಗಳನ್ನು ತಕ್ಷಣ ಇತ್ಯರ್ಥಗೊಳಿಸಿ! – ಉಚ್ಚ ನ್ಯಾಯಾಲಯ
ಬಾಕಿ ಇರುವ ಪ್ರಕರಣಗಳನ್ನು ತ್ವರಿತವಾಗಿ ಇತ್ಯರ್ಥಗೊಳಿಸಲು, ಈ ಪ್ರಕರಣಗಳ ವರ್ಗೀಕರಣದ ಪ್ರಕಾರ ಮುಂಬಯಿ ಉಚ್ಚ ನ್ಯಾಯಾಲಯ ಕಾಲಮಿತಿಯನ್ನು ನಿಗದಿಪಡಿಸಿದೆ. ಯಾವ ಪ್ರಕರಣಗಳಲ್ಲಿ ಅಂತಿಮ ವಾದ-ವಿವಾದ ನಡೆಯುತ್ತಿದೆಯೋ, ಆ ನ್ಯಾಯಾಲಯದ ಪ್ರಕ್ರಿಯೆಯನ್ನು ೩೦ ದಿನಗಳಲ್ಲಿ ಪೂರ್ಣಗೊಳಿಸಿ ಸಾಧ್ಯವಾದಷ್ಟು ಬೇಗ ಪ್ರಕರಣಗಳ ತೀರ್ಪನ್ನು ನೀಡಿ. ಆರೋಪಿಗಳ ಜವಾಬ್ದಾರಿಯನ್ನು ದಾಖಲಿಸುವ ಹಂತದಲ್ಲಿರುವ ಪ್ರಕರಣಗಳಲ್ಲಿ, ಮುಂದಿನ ೩ ವಾರಗಳಲ್ಲಿ ಜವಾಬ್ದಾರಿ ದಾಖಲಿಸುವ ಪ್ರಕ್ರಿಯೆಯನ್ನು ಪೂರ್ಣಗೊಳಿಸಿ. ಅಲ್ಲದೇ, ಆರೋಪ ನಿಗದಿಪಡಿಸುವ ಹಂತದಲ್ಲಿರುವ ಪ್ರಕರಣಗಳಲ್ಲಿ ಪ್ರಕ್ರಿಯೆಯನ್ನು ೪ ವಾರಗಳಲ್ಲಿ ಪೂರ್ಣಗೊಳಿಸಿ. ಆರೋಪಿಗಳು ನ್ಯಾಯಾಲಯದಲ್ಲಿ ಹಾಜರಿರುವಂತೆ ನೋಡಿಕೊಳ್ಳಲು ಅವರ ವಕೀಲರಿಗೂ ಕೂಡ ನೋಟಿಸ್ ನೀಡಿ ಎಂದು ಉಚ್ಚ ನ್ಯಾಯಾಲಯ ರಾಜ್ಯದ ಎಲ್ಲ ಸೆಷನ್ಸ್ ನ್ಯಾಯಾಲಯಗಳಿಗೆ ಆದೇಶಿಸಿದೆ.
ಜನಪ್ರತಿನಿಧಿಗಳ ವಿರುದ್ಧದ ಪ್ರಕರಣಗಳ ಮೇಲಿನ ತಡೆಯಾಜ್ಞೆ ತೆಗೆದುಹಾಕಲು ಏನು ಮಾಡಲಾಗಿದೆ?
ಮುಖ್ಯ ಸರಕಾರಿ ವಕೀಲರಾದ ಮಾನ್ಕುವರ್ ದೇಶ್ಮುಖ್ ಅವರು ಬಾಕಿ ಇರುವ ಪ್ರಕರಣಗಳ ಮಾಹಿತಿಯನ್ನು ಮುಖ್ಯ ನ್ಯಾಯಮೂರ್ತಿ ಚಂದ್ರಶೇಖರ ಮತ್ತು ನ್ಯಾಯಮೂರ್ತಿ ನಿಜಾಮುದ್ದೀನ್ ಜಮಾದಾರ್ ಅವರ ವಿಶೇಷ ವಿಭಾಗೀಯ ಪೀಠದ ಮುಂದೆ ನೀಡುವಾಗ, ಕೆಲವು ಪ್ರಕರಣಗಳಿಗೆ ಉಚ್ಚ ನ್ಯಾಯಾಲಯನಿಂದಲೇ ತಡೆಯಾಜ್ಞೆ ನೀಡಲಾಗಿದೆ ಎಂದು ಸ್ಪಷ್ಟಪಡಿಸಿದರು. ಆಗ ‘ಈ ತಡೆಯಾಜ್ಞೆಯನ್ನು ತೆಗೆದುಹಾಕಲು ರಾಜ್ಯ ಸರಕಾರ ಏನು ಪ್ರಯತ್ನ ಮಾಡಿದೆ?’ ಎಂದು ಉಚ್ಚ ನ್ಯಾಯಾಲಯ ಪ್ರಶ್ನಿಸಿತು. ಆಗ, ‘ಈ ವಿಚಾರಣೆಗಳನ್ನು ತುರ್ತಾಗಿ ನಡೆಸಲು ಅರ್ಜಿಗಳನ್ನು ಸಲ್ಲಿಸಲಾಗುವುದು’ ಎಂದು ಮುಖ್ಯ ಸರಕಾರಿ ವಕೀಲರಾದ ದೇಶ್ಮುಖ್ ಭರವಸೆ ನೀಡಿದರು.
ರಾಜ್ಯದ ಶಾಸಕರು ಮತ್ತು ಸಂಸದರ ವಿರುದ್ಧ ದಾಖಲಾದ ಅಪರಾಧಗಳ ಕುರಿತು ಸ್ವಯಂ ಪ್ರೇರಿತ ಅರ್ಜಿ!
‘ದೇಶದ ಜನಪ್ರತಿನಿಧಿಗಳ ಪ್ರತಿಮೆ ಸ್ವಚ್ಛವಾಗಿರಬೇಕು’ ಎಂಬ ವಿಷಯಕ್ಕೆ ಸಂಬಂಧಿಸಿದ ಒಂದು ಅರ್ಜಿಯ ತೀರ್ಪಿನಲ್ಲಿ ಸರ್ವೋಚ್ಚ ನ್ಯಾಯಾಲಯವು ದೇಶಾದ್ಯಂತದ ಎಲ್ಲ ಉಚ್ಚ ನ್ಯಾಯಾಲಯಗಳು ಸ್ವಯಂ ಪ್ರೇರಿತವಾಗಿ ಅರ್ಜಿಗಳನ್ನು ದಾಖಲಿಸಿಕೊಂಡು ಈ ಕುರಿತು ಸೂಕ್ತ ನಿರ್ಧಾರ ತೆಗೆದುಕೊಳ್ಳುವಂತೆ ಆದೇಶಿಸಿತ್ತು. ಅದರಂತೆ, ೨೦೨೩ ರಲ್ಲಿ ಮುಂಬಯಿ ಉಚ್ಚ ನ್ಯಾಯಾಲಯನ ಆಗಿನ ಮುಖ್ಯ ನ್ಯಾಯಮೂರ್ತಿ ದೇವೇಂದ್ರಕುಮಾರ್ ಉಪಾಧ್ಯಾಯ ಅವರು ಇಂತಹ ಅರ್ಜಿಗಳನ್ನು ದಾಖಲಿಸಿಕೊಂಡಿದ್ದರು. ಈ ಅರ್ಜಿಯ ಪ್ರಕಾರ, ರಾಜ್ಯ ಸರಕಾರವು ಜನಪ್ರತಿನಿಧಿಗಳ ವಿರುದ್ಧ ಹಿಂಪಡೆದ ಪ್ರಕರಣಗಳ ನಿರ್ಧಾರವನ್ನು ಪುನರಾವಲೋಕನ ಮಾಡಬೇಕೆಂದು ಉಚ್ಚ ನ್ಯಾಯಾಲಯ ಸ್ಪಷ್ಟಪಡಿಸಿದೆ. ಅಲ್ಲದೇ, ರಾಜ್ಯ ಸರಕಾರವು ಪ್ರಕರಣವನ್ನು ಹಿಂಪಡೆಯಲು ಬೇಡಿಕೆ ಸಲ್ಲಿಸದಿದ್ದರೂ ಕೂಡ ಸಂಬಂಧಪಟ್ಟ ಹಾಲಿ-ಮಾಜಿ ಶಾಸಕ-ಸಂಸದರು ಅರ್ಜಿ ಸಲ್ಲಿಸಿದ ಪ್ರಕರಣಗಳ ಪಟ್ಟಿಯನ್ನು ಸಹ ಸಲ್ಲಿಸುವಂತೆ ಉಚ್ಚ ನ್ಯಾಯಾಲಯ ರಾಜ್ಯ ಸರಕಾರಕ್ಕೆ ಆದೇಶಿಸಿದೆ.
ಬದರಿನಾಥ ದೇವಸ್ಥಾನದ ದೇಣಿಗೆ ಹಣ ಕಳ್ಳತನ ಪ್ರಕರಣ; ದೇವಸ್ಥಾನದ ಮಾಜಿ ಅಧಿಕಾರಿಯ ಬಂಧನ : Badrinath Temple Arrest
‘ಹಿಂದಿ ಮತ್ತು ಉರ್ದು ಭಾರತದ ಭಾಷೆಗಳು, ಆದರೆ ಸಂಸ್ಕೃತ ಹೊರಗಿನಿಂದ ಬಂದಿದೆಯಂತೆ!’ : Congress MP Mohammad Javed
ಮಾಫಿಯಾಗಳನ್ನು ನರಕಕ್ಕೆ ಅಥವಾ ಜೈಲಿಗೆ ಕಳುಹಿಸುತ್ತೇನೆ ! – ಮುಖ್ಯಮಂತ್ರಿ ಯೋಗಿ ಆದಿತ್ಯನಾಥ : CM Yogi Adityanath
‘ಶ್ರೀಕೃಷ್ಣ ಮುಸಲ್ಮಾನರಾಗಿದ್ದರು ಮತ್ತು ದಿನಕ್ಕೆ ೫ ಬಾರಿ ನಮಾಜ್ ಮಾಡುತ್ತಿದ್ದರಂತೆ!’– Maulana Jarjis Ansari
ವಂಚನೆ ಅಥವಾ ಬ್ಲ್ಯಾಕ್ ಮೇಲ್ ಮೂಲಕ ದೈಹಿಕ ಸಂಬಂಧವಾದರೆ, ಅದನ್ನು ‘ಬಲಾತ್ಕಾರ’ ಎಂದು ಪರಿಗಣಿಸಲಾಗುವುದು! – ಮದ್ರಾಸ್ ಉಚ್ಚ ನ್ಯಾಯಾಲಯ
‘ಐ.ಆರ್.ಸಿ.ಟಿ.ಸಿ.’ಯ ಹೊಸ ಜಾಲತಾಣ ಕಾರ್ಯಾರಂಭ : ಟಿಕೆಟ್ ಕಾಯ್ದಿರಿಸುವಿಕೆ ಮತ್ತಷ್ಟು ಸುಲಭ