ಆಪರೇಷನ್ ಸಿಂಧೂರ್’ಗೆ ಪ್ರತೀಕಾರ ತೀರಿಸಿಕೊಳ್ಳಲು ಮಸೂದ್ ಅಜರ್ ಭಯೋತ್ಪಾದಕರಿಗೆ ಆದೇಶ ನೀಡಿದ್ದ!

ಇಸ್ಲಾಮಾಬಾದ್ (ಪಾಕಿಸ್ತಾನ) – ‘ಆಪರೇಷನ್ ಸಿಂಧೂರ್’ನಲ್ಲಿ ಮಸೂದ್ ಅಜರ್ಗೆ ಆದ ಆಘಾತದ ನಂತರ, ಭಾರತದಲ್ಲಿ ದಾಳಿ ನಡೆಸಲು ತನ್ನ ಭಯೋತ್ಪಾದಕರಿಗೆ ಆದೇಶ ನೀಡಿದ್ದಾನೆ. ಭಾರತದಲ್ಲೇ ಸಕ್ರಿಯವಾಗಿರುವ ಅವನ ಗುಪ್ತ ಗುಂಪುಗಳು ಭಯೋತ್ಪಾದಕ ದಾಳಿಗಳನ್ನು ನಡೆಸಲಿವೆ ಎಂದು ಪಾಕಿಸ್ತಾನದ ಹಿರಿಯ ಪತ್ರಕರ್ತ ಜಾವೇದ್ ಚೌಧರಿ ಮೇ 2025 ರಲ್ಲಿ ಹೇಳಿದ್ದ ವೀಡಿಯೊ ಈಗ ಹೊರಬಂದಿದೆ. ದೆಹಲಿಯಲ್ಲಿ ನಡೆದ ಬಾಂಬ್ ಸ್ಫೋಟ ಮತ್ತು ಅದಕ್ಕೆ ಸಂಬಂಧಿಸಿದಂತೆ ಬಂಧಿತರಾದ ಭಯೋತ್ಪಾದಕರು ಅದೇ ಪಿತೂರಿಯ ಭಾಗ ಎಂದು ಈಗ ಹೇಳಲಾಗುತ್ತಿದೆ.
Senior Pakistani journalist Javed Chaudhry had already hinted in May that a terror strike in India was coming.
In his video, he openly claimed:
👉 Masood Azhar keeps India on edge, with sleeper cells running deep inside the country👉 Pakistan has revived the networks of Hafiz… https://t.co/hwEW3ZOWve pic.twitter.com/MhAu9W7lL6
— Sanatan Prabhat (@SanatanPrabhat) November 16, 2025
ಈ ವೀಡಿಯೊದಲ್ಲಿ ಜಾವೇದ್ ಚೌಧರಿ ಅವರು, ಮಸೂದ್ ಅಜರ್ನಿಂದ ಭಾರತ ಅಸಮಾಧಾನಗೊಂಡಿರುತ್ತದೆ; ಏಕೆಂದರೆ ಅವನ ಜಾಲವು ಆಳವಾಗಿದೆ ಮತ್ತು ಅವನ ಬೆಂಬಲಿಗರು ಅವನಿಗೆ ನಿಷ್ಠರಾಗಿದ್ದಾರೆ. ಅವನು ಪ್ರತೀಕಾರ ತೀರಿಸಿಕೊಳ್ಳುವುದಾಗಿ ಘೋಷಿಸಿದ್ದಾನೆ. ಪಾಕಿಸ್ತಾನ ಇಲ್ಲಿಯವರೆಗೆ ಮಸೂದ್ ಅಜರ್ ಮತ್ತು ಹಾಫಿಜ್ ಸಯೀದ್ ಅವರ ಜಾಲವನ್ನು ತಡೆದಿತ್ತು; ಆದರೆ ಈಗ ಅವರಿಗೆ ಸ್ವಾತಂತ್ರ್ಯ ನೀಡಲಾಗಿದೆ. ಪಾಕಿಸ್ತಾನ ತನ್ನ ಭಯೋತ್ಪಾದಕರಿಂದ ಭಾರತದಲ್ಲಿ ಮತ್ತೆ ದಾಳಿಗಳನ್ನು ನಡೆಸಲಿದೆ ಎಂದು ಹೇಳಿದ್ದಾರೆ.
ಸಂಪಾದಕೀಯ ನಿಲುವುಇದು ಭಾರತೀಯ ಗುಪ್ತಚರ ಸಂಸ್ಥೆಗಳಿಗೆ ಗೊತ್ತಿರಲಿಲ್ಲವೇ? ಇನ್ನೂ ಎಷ್ಟು ಕಡೆ ದಾಳಿಗಳು ನಡೆಯಲಿವೆ ಎಂಬುದನ್ನು ಪತ್ತೆ ಹಚ್ಚಿ ತಡೆಯಬೇಕಿದೆ! |
ಅರುಣಾಚಲ ಪ್ರದೇಶದಲ್ಲಿ ಚೀನಾ ಸೇನೆಯ ನುಸುಳುವಿಕೆ ನಡೆದಿಲ್ಲ! – ಭಾರತೀಯ ಸೇನೆಯ ಸ್ಪಷ್ಟನೆ
ಶ್ರೀರಾಮ ಮಂದಿರದ ದಾನ ಕಳ್ಳತನದ ದೊಡ್ಡ ಹೆಸರುಗಳನ್ನು ಬಹಿರಂಗಪಡಿಸಿದರೆ, ಅವರು ನನ್ನನ್ನು ಕೊಲ್ಲುವರು! – ಪಂಡಿತ್ ಧೀರೇಂದ್ರಕೃಷ್ಣ ಶಾಸ್ತ್ರಿ
‘ಯಾರು ನೀರನ್ನು ತಡೆಯುತ್ತಾರೋ, ಅವರ ಕೈಗಳನ್ನು ಮುರಿಯುತ್ತೇವೆ !’
ಅಮರನಾಥ ಯಾತ್ರೆಗೂ ಮುನ್ನ ಉಗ್ರನ ಬಂಧನ
ಪಾಕಿಸ್ತಾನವನ್ನು ಮತ್ತೆ ‘ಎಫ್ಎಟಿಎಫ್’ನ ‘ಗ್ರೇ ಲಿಸ್ಟ್’ಗೆ ಸೇರಿಸಲು ಭಾರತದ ಸಿದ್ಧತೆ
ಪಾಕಿಸ್ತಾನದಲ್ಲಿ 125 ವರ್ಷ ಹಳೆಯ ಗುರುದ್ವಾರವನ್ನು ನೆಲಸಮಗೊಳಿಸಲು ಯತ್ನ : Pakistan Gurdwara