ದೆಹಲಿ ಬಾಂಬ್ ಸ್ಫೋಟ: ಪಶ್ಚಿಮ ಬಂಗಾಳದಲ್ಲಿ ಅಲ್-ಫಲಾಹ್ ವಿಶ್ವವಿದ್ಯಾಲಯದ ವಿದ್ಯಾರ್ಥಿ ಬಂಧನ.

ನವದೆಹಲಿ – ರಾಷ್ಟ್ರೀಯ ತನಿಖಾ ಸಂಸ್ಥೆಯು ದೆಹಲಿಯ ಬಾಂಬ್ ಸ್ಫೋಟ ಪ್ರಕರಣದಲ್ಲಿ, ಫರಿದಾಬಾದ್‌ನ ಅಲ್-ಫಲಾಹ್ ವಿಶ್ವವಿದ್ಯಾಲಯದ ವಿದ್ಯಾರ್ಥಿ ಜಾನಿಸುರ್ ಆಲಂನನ್ನು ಪ.ಬಂಗಾಳದಲ್ಲಿ ಬಂಧಿಸಿದೆ. ಈತ ಮೂಲತಃ ಪಶ್ಚಿಮ ಬಂಗಾಳದ ದಿನಾಜಪುರ ಜಿಲ್ಲೆಯ ಕೋನಾಲ್ ಗ್ರಾಮದ ನಿವಾಸಿಯಾಗಿದ್ದು ಸದ್ಯ ಪಂಜಾಬ್‌ನ ಲುಧಿಯಾನದಲ್ಲಿ ನೆಲೆಸಿದ್ದನು. ಈ ಪ್ರಕರಣದಲ್ಲಿ ಅಲ್-ಫಲಾಹ್ ದ ೧೫ ವೈದ್ಯರು ಪರಾರಿಯಾಗಿದ್ದಾರೆ.

ಸಂಪಾದಕೀಯ ನಿಲುವು

ಈ ಪ್ರಕರಣದಲ್ಲಿ ಭಾಗಿಯಾಗಿರುವ ಎಲ್ಲಾ ಭಯೋತ್ಪಾದಕರ ವಿಚಾರಣೆಯನ್ನು ಶೀಘ್ರಗತಿಯ ನ್ಯಾಯಾಲಯದಲ್ಲಿ ನಡೆಸಿ, ಅಪರಾಧಿಗಳಿಗೆ ಗಲ್ಲು ಶಿಕ್ಷೆಯೇ ನೀಡಬೇಕು!