ಫಿರೋಜ್‌ಪುರ್ (ಪಂಜಾಬ್) ನಲ್ಲಿ ಆರ್‌ಎಸ್‌ಎಸ್ ಕಾರ್ಯಕರ್ತನ ಮಗನಿಗೆ ಗುಂಡಿಕ್ಕಿ ಹತ್ಯೆ – RSS Worker’s Son Shot Dead in Punjab

ಫಿರೋಜ್‌ಪುರ್ (ಪಂಜಾಬ್) – ಇಲ್ಲಿ ಆರ್‌ಎಸ್‌ಎಸ್‌ನ ಹಿರಿಯ ಕಾರ್ಯಕರ್ತ ಬಲದೇವ್ ರಾಜ್ ಅರೋರಾ ಅವರ ಪುತ್ರ ನವೀನ್ ಅರೋರಾ ಅವರನ್ನು ಗುಂಡಿಟ್ಟು ಹತ್ಯೆ ಮಾಡಲಾಗಿದೆ. ನವೀನ್ ಅವರಿಗೆ ಮೋಚಿ ಬಜಾರ್‌ನಲ್ಲಿ ಅಂಗಡಿಯಿತ್ತು. ಅವರು ಆ ರಾತ್ರಿ ಅಂಗಡಿ ಮುಚ್ಚಿ ಮನೆಗೆ ಹೋಗುತ್ತಿದ್ದಾಗ, ಯುಕೋ ಬ್ಯಾಂಕ್ ಬಳಿ ಇಬ್ಬರು ಅಪರಿಚಿತ ವ್ಯಕ್ತಿಗಳು ಅವರನ್ನು ತಡೆದು ಗುಂಡು ಹಾರಿಸಿದ್ದಾರೆ. ಗುಂಡು ನೇರವಾಗಿ ತಲೆಗೆ ತಗುಲಿದ ಪರಿಣಾಮ ಅವರು ಸ್ಥಳದಲ್ಲೇ ಸಾವನ್ನಪ್ಪಿದ್ದಾರೆ. ಪ್ರಾಥಮಿಕ ತನಿಖೆಯಲ್ಲಿ ಇದು ಉದ್ದೇಶಪೂರ್ವಕ ಹತ್ಯೆ ಎಂದು ಕಂಡುಬಂದಿದೆ. ಈ ಘಟನೆಯ ನಂತರ ನಗರದಲ್ಲಿ ಭಯದ ವಾತಾವರಣ ನಿರ್ಮಾಣವಾಗಿದೆ. ವ್ಯಾಪಾರಿಗಳು ಮಾರುಕಟ್ಟೆ ಬಂದ್ ಮಾಡಿ ಪ್ರತಿಭಟನೆ ವ್ಯಕ್ತಪಡಿಸಿದ್ದಾರೆ.

ಭಾಜಪ ನಾಯಕರು ಕೂಡ ರಸ್ತೆಗೆ ಇಳಿದು ಸರಕಾರ ಮತ್ತು ಪೊಲೀಸರ ವಿರುದ್ಧ ತೀವ್ರ ಅಸಮಾಧಾನ ವ್ಯಕ್ತಪಡಿಸಿದ್ದಾರೆ. ರಾಜ್ಯದಲ್ಲಿ ಅಪರಾಧಿಗಳ ಧೈರ್ಯ ಹೆಚ್ಚಿದ್ದು, ಕಾನೂನಿನ ಜಾರಿ ದುರ್ಬಲಗೊಂಡಿದೆ ಎಂದು ಅವರು ಹೇಳಿದ್ದಾರೆ. ಪೊಲೀಸರು ನಗರಾದ್ಯಂತ ಕಟ್ಟೆಚ್ಚರ ಘೋಷಿಸಿ ದಿಗ್ಬಂಧನ ಹಾಕಿದ್ದಾರೆ. ಆರೋಪಿಗಳ ಪತ್ತೆಗಾಗಿ ಹಲವು ತಂಡಗಳು ಕಾರ್ಯನಿರ್ವಹಿಸುತ್ತಿವೆ.

ಸಂಪಾದಕೀಯ ನಿಲುವು

ಪಂಜಾಬ್‌ನಲ್ಲಿ ಕಳೆದ ಕೆಲವು ವರ್ಷಗಳಿಂದ ಹಿಂದುತ್ವನಿಷ್ಠ ಸಂಘಟನೆಗಳ ನಾಯಕರು, ಪದಾಧಿಕಾರಿಗಳು ಮತ್ತು ಹಿಂದುತ್ವನಿಷ್ಠರ ಹತ್ಯೆಗಳು ನಿರಂತರವಾಗಿ ನಡೆಯುತ್ತಿವೆ; ಆದರೆ ಅವರನ್ನು ರಕ್ಷಿಸುವಲ್ಲಿ ಸರ್ವಪಕ್ಷ ಸರಕಾರಗಳು ವಿಫಲವಾಗಿವೆ ಎಂಬುದು ನಾಚಿಕೆಗೇಡಿನ ಸಂಗತಿ!