ದೆಹಲಿ ಬಾಂಬ್ ಸ್ಫೋಟದ ನಂತರ ಭಯೋತ್ಪಾದನೆಯನ್ನು ಬೆಂಬಲಿಸಿದ ೨೦ ಮುಸಲ್ಮಾನರ ಬಂಧನ Muslim Terrorism Supports Arrested

ಗುವಾಹಟಿ (ಅಸ್ಸಾಂ) – ಕೆಂಪು ಕೋಟೆ ಬಳಿ ನಡೆದ ಭೀಕರ ಸ್ಫೋಟದ ನಂತರ ದೇಶಾದ್ಯಂತದ ಭದ್ರತಾ ಸಂಸ್ಥೆಗಳು ಎಚ್ಚೆತ್ತುಕೊಂಡಿವೆ. ಈ ಹಿನ್ನೆಲೆಯಲ್ಲಿ, ಸಾಮಾಜಿಕ ಮಾಧ್ಯಮಗಳಲ್ಲಿ ಶಂಕಿತ ಅಥವಾ ಭಯೋತ್ಪಾದನೆಗೆ ಬೆಂಬಲ ನೀಡುವ ಅಭಿಪ್ರಾಯಗಳನ್ನು ವ್ಯಕ್ತಪಡಿಸಿದ ೨೦ ಮುಸಲ್ಮಾನರನ್ನು ಅಸ್ಸಾಂ ಪೊಲೀಸರು ಬಂಧಿಸಿದ್ದಾರೆ. ಶಂಕಿತ ಸಾಮಾಜಿಕ ಮಾಧ್ಯಮ ಪೋಸ್ಟ್‌ಗಳ ಮೇಲೆ ನಿರಂತರ ನಿಗಾ ಇಡಲಾಗುತ್ತಿದೆ. ದೇಶವಿರೋಧಿ ಪ್ರವೃತ್ತಿಗಳನ್ನು ಬೆಂಬಲಿಸುವವರ ಮೇಲೆ ಮುಂದೆಯೂ ಕಠಿಣ ಕ್ರಮ ಕೈಗೊಳ್ಳಲಾಗುವುದು ಎಂದು ಪೊಲೀಸರು ಸ್ಪಷ್ಟಪಡಿಸಿದ್ದಾರೆ.

ಮುಖ್ಯಮಂತ್ರಿಗಳ ಎಚ್ಚರಿಕೆ

ಮುಖ್ಯಮಂತ್ರಿ ಹೀಮಂತ ಬಿಸ್ವ ಸರಮಾ ಅವರು ಮಾತನಾಡುತ್ತಾ, ರಾಷ್ಟ್ರ ವಿರೋಧಿ ಟೀಕೆ ಅಥವಾ ಕೃತಿಗಳ ಬಗ್ಗೆ ರಾಜ್ಯ ಸರಕಾರವು ಕಠಿಣ ನೀತಿಯನ್ನು ಅನುಸರಿಸುತ್ತಿದೆ ಎಂದು ತಿಳಿಸಿದ್ದಾರೆ.

ಸಂಪಾದಕೀಯ ನಿಲುವು

ಇಂತಹವರನ್ನೂ ಭಯೋತ್ಪಾದಕರು ಎಂದು ಘೋಷಿಸಿ, ಅದಕ್ಕೆ ಅನುಗುಣವಾಗಿ ಅವರ ಮೇಲೆ ಕ್ರಮ ಕೈಗೊಳ್ಳಬೇಕು!