ಹಿಂದೂತ್ವಕ್ಕಾಗಿ ೯ ವರ್ಷ ಜೈಲು ಶಿಕ್ಷೆ ಅನುಭವಿಸಿದ ಡಾ. ವೀರೇಂದ್ರ ಸಿಂಹ ತಾವಡೆ ಅವರ ಆದರ್ಶ ತೆಗೆದುಕೊಳ್ಳಬೇಕು! – ನಿತಿನ್ ಶಿಂದೆ, ಹಿಂದೂ ಏಕತಾ ಆಂದೋಲನ Sanatan Rashtra Shankhanad Mahotsav

‘ಸನಾತನ ರಾಷ್ಟ್ರ ಶಂಖನಾದ ಮಹೋತ್ಸವ’ಕ್ಕೆ ಮಾಜಿ ಶಾಸಕ ನಿತಿನ್ ಶಿಂದೆ ಮತ್ತು ಸ್ವಾತಿ ಶಿಂದೆ ಅವರಿಗೆ ಆಹ್ವಾನ!

ಶ್ರೀ. ನಿತಿನ್ ಶಿಂದೆ (ಎಡಕ್ಕೆ) ಅವರಿಗೆ ‘ಸನಾತನ ಶಂಖನಾದ ಮಹೋತ್ಸವ’ಕ್ಕೆ ಆಮಂತ್ರಣ ನೀಡುತ್ತಿರುವ ಶ್ರೀ. ಅಭಯ ವರ್ತಕ

ಸಾಂಗ್ಲಿ, ನವೆಂಬರ್ ೧೫ (ವಾರ್ತೆ) – ಸನಾತನ ಸಂಸ್ಥೆಯ ವಕ್ತಾರ ಶ್ರೀ. ಅಭಯ ವರ್ತಕ್ ಮತ್ತು ಡಾ. ವೀರೇಂದ್ರ ಸಿಂಹ ತಾವಡೆ ಅವರು ನವೆಂಬರ್ ೧೪ ರಂದು ‘ಹಿಂದೂ ಏಕತಾ ಆಂದೋಲನ’ದ ರಾಜ್ಯಾಧ್ಯಕ್ಷ ಮತ್ತು ಮಾಜಿ ಶಾಸಕ ಶ್ರೀ. ನಿತಿನ್ ಶಿಂದೆ, ಹಾಗೂ ಅವರ ಪತ್ನಿ ಮತ್ತು ಮಾಜಿ ನಗರಸಭೆ ಸದಸ್ಯೆ ಸೌ. ಸ್ವಾತಿ ಶಿಂದೆ ಅವರನ್ನು ಸಾಂಗ್ಲಿಯಲ್ಲಿರುವ ಅವರ ನಿವಾಸದಲ್ಲಿ ಸೌಹಾರ್ದ ಭೇಟಿ ಮಾಡಿದರು. ಈ ಸಂದರ್ಭದಲ್ಲಿ ಶ್ರೀ. ಮತ್ತು ಸೌ. ಶಿಂದೆ ಅವರು ಶ್ರೀ. ಅಭಯ ವರ್ತಕ್ ಮತ್ತು ಡಾ. ವೀರೇಂದ್ರ ಸಿಂಹ ತಾವಡೆ ಅವರಿಗೆ ಕೇಸರಿ ಶಾಲು ಹೊದಿಸಿ ಸನ್ಮಾನ ಮಾಡಿದರು.

ಶ್ರೀ. ಅಭಯ ವರ್ತಕ್ ಅವರನ್ನು ಸನ್ಮಾನಿಸುತ್ತಿರುವಾಗ (ಎಡಕ್ಕೆ) ಶ್ರೀ. ನಿತಿನ್ ಶಿಂದೆ ಮತ್ತು ಡಾ. ವೀರೇಂದ್ರ ಸಿಂಹ ತಾವಡೆ

ಈ ವೇಳೆ ಮಾತನಾಡಿದ ಶ್ರೀ. ನಿತಿನ್ ಶಿಂದೆ ಅವರು ತಮ್ಮ ಕಾರ್ಯಕರ್ತರಿಗೆ, “ದೊಡ್ಡ ಛಲ ಮತ್ತು ಹಠದಿಂದ ಹಿಂದೂತ್ವದ ಕಾರ್ಯ ಮಾಡಿದ ಡಾ. ವೀರೇಂದ್ರ ಸಿಂಹ ತಾವಡೆ ಅವರ ಕಾರ್ಯವನ್ನು ತಡೆಯಲು, ಸುಳ್ಳು ಕೇಸುಗಳನ್ನು ದಾಖಲಿಸಿ ಅವರನ್ನು ೯ ವರ್ಷಗಳ ಕಾಲ ಕಾರಾಗೃಹದಲ್ಲಿಟ್ಟರು; ಆದರೆ ಅವರು ವಿಚಲಿತರಾಗಲಿಲ್ಲ. ಎಲ್ಲ ಹಿಂದೂಗಳೂ ಅವರ ಆದರ್ಶವನ್ನು ತೆಗೆದುಕೊಳ್ಳಬೇಕು. ಅವರ ಕಾರ್ಯದ ಬಗ್ಗೆ ನಮಗೆ ಹೆಮ್ಮೆಯಿದೆ. ಅವರಂತೆ ಅಡೆತಡೆಗಳನ್ನು ಎದುರಿಸಿ ಛಲದಿಂದ ಹಿಂದೂತ್ವದ ಕಾರ್ಯ ಮಾಡಬೇಕು” ಎಂದು ಹೇಳಿದರು.

ಡಾ ವೀರೇಂದ್ರ ಸಿಂಹ ತಾವಡೇ (ಮಧ್ಯದಲ್ಲಿ) ಇವರ ಸತ್ಕಾರ ಮಾಡುತ್ತಿರುವ ಸೌ. ಸ್ವಾತಿ ಶಿಂದೆ

ಈ ಸಂದರ್ಭದಲ್ಲಿ ಮಾಜಿ ನಗರಸಭೆ ಸದಸ್ಯೆ ಸೌ. ಸ್ವಾತಿ ಶಿಂದೆ ಅವರು, “ನಗರಪಾಲಿಕೆಯ ಚುನಾವಣಾ ಪ್ರಚಾರಕ್ಕೆ ಇಂದು ಶುಭಾರಂಭ ಮಾಡಬೇಕಿತ್ತು. ಅದರ ನಿಮಿತ್ತ ಡಾ. ವೀರೇಂದ್ರ ಸಿಂಹ ತಾವಡೆ ಮತ್ತು ಶ್ರೀ. ಅಭಯ ವರ್ತಕ್ ಅವರು ನನ್ನ ನಿವಾಸಕ್ಕೆ ಕಾಲಿಟ್ಟಿದ್ದರಿಂದ ನಾನು ಧನ್ಯಳಾದೆ” ಎಂದು ಹೇಳುವಾಗ ಅವರ ಕಣ್ಣುಗಳು ತುಂಬಿ ಬಂದವು.

ಶ್ರೀ. ನಿತಿನ್ ಶಿಂದೆ (ಮಧ್ಯ), ಡಾ. ವೀರೇಂದ್ರಸಿಂಹ ತಾವಡೆ (ಎಡ) ಮತ್ತು ಶ್ರೀ. ಅಭಯ್ ವರ್ತಕ್ ಅವರು

ಈ ಸಂದರ್ಭದಲ್ಲಿ ಶ್ರೀ. ಅಭಯ ವರ್ತಕ್ ಅವರು ದೆಹಲಿಯಲ್ಲಿ ನಡೆಯಲಿರುವ ‘ಸನಾತನ ರಾಷ್ಟ್ರ ಶಂಖನಾದ ಮಹೋತ್ಸವ’ಕ್ಕೆ ಶ್ರೀ. ನಿತಿನ್ ಶಿಂದೆ ಅವರಿಗೆ ಆಮಂತ್ರಣ ನೀಡಿದರು.

ಈ ವೇಳೆ ಸನಾತನ ಸಂಸ್ಥೆಯ ಸಾಧಕಿಯರಾದ ಸೌ. ಸ್ಮಿತಾ ಮೈಣಕರ್, ಶ್ರೀಮತಿ ಮಧುರಾ ತೋಫಖಾನೆ, ಭಾಜಪ ನಾಯಕ ಶ್ರೀಕಾಂತ್ ತಾತ್ಯಾ ಶಿಂದೆ, ಕಾರ್ಯಕರ್ತರಾದ ಸರ್ವಶ್ರೀ ಮನೋಜ್ ಸಾಳುಂಖೆ, ಅನಿರುದ್ಧ ಕುಂಭಾರ್, ದಿಗ್ವಿಜಯ್ ಶಿಂದೆ, ಅರವಿಂದ್ ಯೇತನಾಳೆ, ಶುಭಂ ಗವಳಿ, ಗಜಾನನ್ ಮಾನೆ, ಶ್ರೀಧರ ಮೇಸ್ತ್ರಿ, ಪೈಲ್ವಾನ್ ಶಾಂತಾರಾಮ್ ಶಿಂದೆ ಮೊದಲಾದವರು ಉಪಸ್ಥಿತರಿದ್ದರು.