ಇಸ್ಲಾಂನಲ್ಲಿ ಭಯೋತ್ಪಾದನೆಗೆ ಸ್ಥಾನವಿಲ್ಲ! – ಸಚಿವ ಜಮೀರ್ ಅಹ್ಮದ್ ಖಾನ್ : Zameer Ahmed Khan

ರಾಜ್ಯದ ಕಾಂಗ್ರೆಸ್ ಸರಕಾರದ ಸಚಿವ ಜಮೀರ್ ಅಹ್ಮದ್ ಖಾನ್ ಅವರ ಹೇಳಿಕೆ

ಜಮೀರ್ ಅಹ್ಮದ್ ಖಾನ್

ಬೆಂಗಳೂರು – ಇಸ್ಲಾಂ ಧರ್ಮದಲ್ಲಿ ಭಯೋತ್ಪಾದನೆಗೆ ಸ್ಥಾನವಿಲ್ಲ. ಭಯೋತ್ಪಾದಕರು ಮುಸಲ್ಮಾನರಾಗಿರಲು ಸಾಧ್ಯವಿಲ್ಲ ಎಂದು ಕಾಂಗ್ರೆಸ್ ಸರಕಾರದ ಸಚಿವ ಜಮೀರ್ ಅಹ್ಮದ್ ಖಾನ್ ಅವರು ಹೇಳಿಕೆ ನೀಡಿದ್ದಾರೆ. ಅವರು ಇಲ್ಲಿ ಪತ್ರಕರ್ತರೊಂದಿಗೆ ಮಾತನಾಡುತ್ತಿದ್ದರು. ‘ಇಸ್ಲಾಂ ಧರ್ಮದ ಪ್ರಕಾರ ಭಯೋತ್ಪಾದನೆ ಮಾಡುವವನು ಮುಸಲ್ಮಾನನಲ್ಲ. ಅವನು ಹಾಗೆ ಮಾಡಿದರೆ, ಹುಳುಗಳು ಬಿದ್ದು ಸಾಯುತ್ತಾನೆ’ ಎಂದೂ ಅವರು ಹೇಳಿದರು.

ಜಮೀರ್ ಖಾನ್ ಅವರು, ‘ಬಿಹಾರ ಚುನಾವಣೆಗೆ ಒಂದು ದಿನ ಮೊದಲು ಸ್ಫೋಟ ಹೇಗೆ ನಡೆಯಿತು? ಇದರಿಂದ ಯಾರಿಗೆ ಲಾಭವಾಗಲಿದೆ?’ ಎಂದು ಪ್ರಶ್ನಿಸಿದರು.

ಸಂಪಾದಕೀಯ ನಿಲುವು

  • ಇಸ್ಲಾಂನಲ್ಲಿ ಭಯೋತ್ಪಾದನೆಗೆ ಸ್ಥಾನವಿಲ್ಲ ಎಂದು ಒಪ್ಪಿಕೊಂಡರೆ, ಪ್ರಪಂಚದಾದ್ಯಂತ ಭಯೋತ್ಪಾದನೆಯು ಮುಸಲ್ಮಾನರಿಂದಲೇ ಏಕೆ ಆಗುತ್ತಿದೆ? ಇದರ ಹಿಂದೆ ಯಾವ ಮನಃಸ್ಥಿತಿ ಇದೆ? ಭಾರತದಲ್ಲಿ ಹಿಂದೂಗಳನ್ನೇ ಏಕೆ ಗುರಿಯಾಗಿಸಲಾಗುತ್ತದೆ? ಇದಕ್ಕೆ ಜಮೀರ್ ಖಾನ್ ಅವರು ಉತ್ತರ ನೀಡಬೇಕು!
  • ಹೀಗಿದ್ದರೆ, ಮುಸಲ್ಮಾನರ ಧಾರ್ಮಿಕ ಪುಸ್ತಕಗಳಲ್ಲಿ ‘ಜಿಹಾದ್’ (ಇಸ್ಲಾಂ ಧರ್ಮಕ್ಕಾಗಿ ಮುಸಲ್ಮಾನೇತರರ ವಿರುದ್ಧ ಸಾರಿದ ಯುದ್ಧ), ‘ಕಿತಾಲ್ ಫೀ ಸಬೀಲಿಲ್ಲಾಹ್’ (ಮುಸಲ್ಮಾನ ಸಮಾಜದ ರಕ್ಷಣೆಗಾಗಿ ಮತ್ತು ಅಲ್ಲಾಹ್‌ ಗಾಗಿ ಹೋರಾಡುವುದು) ಮುಂತಾದ ಪದಗಳನ್ನು ಏಕೆ ನೀಡಲಾಗಿದೆ? ಹಾಗೆಯೇ ಅವುಗಳನ್ನು ಭಾರತದಾದ್ಯಂತ ಇರುವ ಮದರಸಾಗಳಲ್ಲಿ ಏಕೆ ಕಲಿಸಲಾಗುತ್ತದೆ? ಈ ಬಗ್ಗೆ ಖಾನ್ ಅವರು ಏಕೆ ಮಾತನಾಡುವುದಿಲ್ಲ?