ನಿಧನ ವಾರ್ತೆ

ದಕ್ಷಿಣ ಕನ್ನಡ – ಬೆಳ್ತಂಗಡಿಯ ಶೇ. ೬೨ ರಷ್ಟು ಆಧ್ಯಾತ್ಮಿಕ ಮಟ್ಟದ ಸನಾತನ ಸಾಧಕರಾದ ಪೆರ್ನ ಗೌಡ (೯೦ ವರ್ಷ) ಇವರು ನವೆಂಬರ್‌ ೬ ರಂದು ವಯೋಮಾನದಿಂದ ನಿಧನರಾಗಿದ್ದಾರೆ. ಅವರು ಸನಾತನದ ಸಾಧಕರಾದ ಶ್ರೀ. ಆನಂದ ಗೌಡ ಹಾಗೂ ಹಿಂದೂ ಜನಜಾಗೃತಿ ಸಮಿತಿಯ ಸಾಧಕರಾದ ಶ್ರೀ. ವಿಜಯಕುಮಾರ ಇವರ ತಂದೆಯಾಗಿದ್ದಾರೆ. ದಿವಂಗತ ಪೆರ್ನ ಗೌಡ ಇವರು ಪತ್ನಿ, ಮೂವರು ಗಂಡು ಮಕ್ಕಳು, ಇಬ್ಬರು ಹೆಣ್ಣು ಮಕ್ಕಳು, ೩ ಮಂದಿ ಸೊಸೆಯಂದಿರು, ಇಬ್ಬರು ಅಳಿಯಂದಿರು ಮತ್ತು ೭ ಮಂದಿ ಮೊಮ್ಮಕ್ಕಳು, ಇಬ್ಬರು ಮರಿಮೊಮ್ಮಕ್ಕಳ್ಳನ್ನು ಅಗಲಿದ್ದಾರೆ.

ದಿವಂಗತ ಪೆರ್ನ ಗೌಡ ಇವರಿಗೆ ಸದ್ಗತಿ ದೊರೆಯಲೆಂದು ಸನಾತನ ಪರಿವಾರದಿಂದ ಶ್ರೀಕೃಷ್ಣನ ಚರಣಗಳಲ್ಲಿ ಪ್ರಾರ್ಥನೆ.