|

ಭಾಗ್ಯನಗರ (ತೆಲಂಗಾಣ) – ಕೇಂದ್ರ ಗೃಹ ರಾಜ್ಯಮಂತ್ರಿ ಮತ್ತು ಭಾಜಪ ನಾಯಕ ಬಂಡಿ ಸಂಜಯ ಕುಮಾರ ಅವರು ಇಲ್ಲಿ ಪತ್ರಿಕಾಗೋಷ್ಠಿ ನಡೆಸಿ ಕಾಂಗ್ರೆಸ ಸರಕಾರ ಮತ್ತು ಎ.ಐ.ಎಂ.ಐ.ಎಂ. (ಆಲ್ ಇಂಡಿಯಾ ಮಜ್ಲಿಸ್-ಎ-ಇತ್ತೆಹಾದುಲ್ ಮುಸ್ಲಿಮೀನ್ – ಅಖಿಲ ಭಾರತ ಮುಸ್ಲಿಂ ಏಕತಾ ಸಂಘ) ವಿರುದ್ಧ ಗಂಭೀರ ಆರೋಪಗಳನ್ನು ಮಾಡುತ್ತಾ, ಹಳೆಯ ಭಾಗ್ಯನಗರದಲ್ಲಿ (ಓಲ್ಡ್ ಹೈದರಾಬಾದನಲ್ಲಿ) ಪಶ್ಚಿಮ ಬಂಗಾಳದಿಂದ ಬಂದಿರುವ ಅಪ್ರಾಪ್ತ ಹಿಂದೂ ಹುಡುಗಿಯರ ಲೈಂಗಿಕ ಶೋಷಣೆ ಇತರ ಧರ್ಮದವರಿಂದ ದೊಡ್ಡ ಪ್ರಮಾಣದಲ್ಲಿ ನಡೆಯುತ್ತಿದೆ; ಆದರೆ ಸ್ಥಳೀಯ ಪೊಲೀಸರು ಮತ್ತು ಆಡಳಿತ ರಾಜಕೀಯ ಒತ್ತಡದಿಂದ ಮೌನ ವಹಿಸಿದ್ದಾರೆ. ಈ ಪ್ರಕರಣಗಳ ಹಿಂದೆ ಮಾದಕ ವಸ್ತುಗಳ ಒಂದು ದೊಡ್ಡ ಜಾಲ ಕಾರ್ಯನಿರ್ವಹಿಸುತ್ತಿದ್ದು, ಇದಕ್ಕೆ ಸಂಸದ ಅಸದುದ್ದೀನ್ ಓವೈಸಿ ನೇತೃತ್ವದ ಎ.ಐ.ಎಂ.ಐ.ಎಂ.ನ ರಕ್ಷಣೆ ದೊರೆಯುತ್ತಿದೆ ಎಂಬ ಸಂಶಯವಿದೆ ಎಂದು ಹೇಳಿದರು.
ಬಂಡಿ ಸಂಜಯ ಅವರು ಒಂದು ಘಟನೆಯನ್ನು ಉಲ್ಲೇಖಿಸಿ, ಒಬ್ಬ ಹಿಂದೂ ಹುಡುಗಿಯನ್ನು ಹುಟ್ಟುಹಬ್ಬದ ನೆಪದಲ್ಲಿ ಶಾಲೆಯಿಂದ ಒಬ್ಬ ಮುಸ್ಲಿಂ ಹುಡುಗಿಯ ಮನೆಗೆ ಕರೆದೊಯ್ಯಲಾಯಿತು, ಅಲ್ಲಿ ಆಕೆಗೆ ಸ್ವಲ್ಪಮಟ್ಟಿಗೆ ನಶೆಯಾಗುವ ಚಾಕೊಲೇಟ್ ನೀಡಲಾಯಿತು. ನಂತರ ಆಕೆಯನ್ನು ಅಪಹರಿಸಿ ಥಳಿಸಲಾಯಿತು. ಆಕೆಯನ್ನು 6 ದಿನಗಳ ಕಾಲ ಲೈಂಗಿಕ ಶೋಷಣೆ ಮಾಡಲಾಯಿತು. ಆಕೆಯ ಪೋಷಕರು ಪೊಲೀಸರ ಬಳಿಗೆ ಹೋದಾಗ, ವಿಚಾರಣೆ ನಡೆಸದೆ ಪ್ರಕರಣವನ್ನು ಮುಚ್ಚಲಾಯಿತು. ನಂತರ ಆ ಹುಡುಗಿಗೆ ಥಳಿಸಿದ ವಿಡಿಯೋಗಳನ್ನು ತೋರಿಸಿ ಬೆದರಿಸಲಾಯಿತು ಮತ್ತು ಆಕೆಯನ್ನು ತನ್ನ ಇತರ ಹಿಂದೂ ಗೆಳತಿಯರನ್ನು ಕರೆತರಲು ಒತ್ತಾಯಿಸಲಾಯಿತು. ಇತರ 9 ಹುಡುಗಿಯರು ಈ ಜಾಲದಲ್ಲಿ ಸಿಲುಕಿದ್ದಾರೆ. ಸಾಕ್ಷಗಳು ಮತ್ತು ಸಿಸಿಟಿವಿ ಚಿತ್ರೀಕರಣವಿದ್ದರೂ ಪೊಲೀಸರು ಎ.ಐ.ಎಂ.ಐ.ಎಂ.ನ ಒತ್ತಡದಲ್ಲಿ ಯಾವುದೇ ಕ್ರಮ ಕೈಗೊಳ್ಳುತ್ತಿಲ್ಲ. ಈ ಎಲ್ಲಾ ಘಟನೆಗಳು ‘ಕೇರಳ ಫೈಲ್ಸ್’ ಮತ್ತು ‘ಕಾಶ್ಮೀರ್ ಫೈಲ್ಸ್’ಗಳಂತೆ ‘ಹೈದರಾಬಾದ ಫೈಲ್ಸ್’ ಆಗಿವೆ ಎಂದು ಹೇಳಿದರು.
ಪತ್ರಿಕಾಗೋಷ್ಠಿಯಲ್ಲಿ ಹಾಜರಿದ್ದ ಒಬ್ಬ ಸಂತ್ರಸ್ತೆಯ ಕುಟುಂಬ ಸದಸ್ಯರು, ತಮ್ಮ ಮಗಳನ್ನೂ ಇದೇ ರೀತಿಯ ಗ್ಯಾಂಗ್ ಗುರಿ ಮಾಡಿತ್ತು. ಪೊಲೀಸರು ಯಾವುದೇ ಸಹಾಯ ಮಾಡಲಿಲ್ಲ ಮತ್ತು ಅಪರಾಧಿಗಳನ್ನು ರಕ್ಷಿಸಿದರು ಎಂದು ಹೇಳಿದರು.
ಕಾಂಗ್ರೆಸ್ ಸರಕಾರ ಕ್ರಮ ಕೈಗೊಳ್ಳದಿದ್ದರೆ, ‘ಹಿಂದೂ ಸುರಕ್ಷಾ ದಳ’ ಸ್ಥಾಪನೆ
ಬಂಡಿ ಸಂಜಯ ಅವರು, ಸಂತ್ರಸ್ತ ಕುಟುಂಬಗಳ ಸಂಪರ್ಕದಲ್ಲಿದ್ದಾರೆ ಮತ್ತು ದೋಷಿಗಳ ವಿರುದ್ಧ ಕಠಿಣ ಕ್ರಮ ಕೈಗೊಳ್ಳದಿದ್ದರೆ, ಈ ವಿಷಯವನ್ನು ರಾಷ್ಟ್ರೀಯ ಮಟ್ಟಕ್ಕೆ ಕೊಂಡೊಯ್ಯಲಾಗುವುದು ಎಂದು ಹೇಳಿದರು. ಸರಕಾರವು ತಕ್ಷಣವೇ ಕ್ರಮ ಕೈಗೊಳ್ಳದಿದ್ದರೆ, ಭಾಜಪ ಹಳೆಯ ಭಾಗ್ಯನಗರ ಪ್ರದೇಶದಲ್ಲಿ ‘ಹಿಂದೂ ಸುರಕ್ಷಾ ದಳ’ವನ್ನು ಸ್ಥಾಪಿಸಲಿದೆ, ಎಂದೂ ಹೇಳಿದರು.
ಸಂಪಾದಕೀಯ ನಿಲುವುಕಾಂಗ್ರೆಸ್ ಆಡಳಿತದಲ್ಲಿ ಹಿಂದೂಗಳ ಸ್ಥಿತಿ ಇದಕ್ಕಿಂತ ಭಿನ್ನವಾಗಿರಲು ಸಾಧ್ಯವೇ? ಪಶ್ಚಿಮ ಬಂಗಾಳದ ಮಹಿಳಾ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಅವರು ಪಶ್ಚಿಮ ಬಂಗಾಳಿ ಹಿಂದೂ ಹುಡುಗಿಯರ ರಕ್ಷಣೆಗಾಗಿ ಧ್ವನಿ ಎತ್ತುತ್ತಾರೆಯೇ? |
ಈಗ ಮಥುರಾ, ಬೃಂದಾವನ ಮತ್ತು ಶ್ರೀಕೃಷ್ಣ ಜನ್ಮಭೂಮಿ ಕುರಿತೂ ಬಹಿರಂಗವಾಗಿ ಚರ್ಚೆಯಾಗಬೇಕು! – ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್
ಬಿಹಾರದಲ್ಲಿ ಮಿಷನರಿಗಳಿಂದ ಹಿಂದೂಗಳಿಗೆ ಆಮಿಷವೊಡ್ಡಿ ಕ್ರೈಸ್ತರನ್ನಾಗಿ ಮಾಡುವ ಪ್ರಯತ್ನ!
ರಾಜ್ಯದಲ್ಲಿ ಎರಡು ಬೇರೆ ಬೇರೆ ಘಟನೆಗಳಲ್ಲಿ ಮತಾಂಧ ಮುಸಲ್ಮಾನರಿಂದ ಇಬ್ಬರು ಹಿಂದೂ ಯುವತಿಯರ ಹತ್ಯೆ
ಮುಂಬಯಿನಲ್ಲಿ 6 ಹೋಟೆಲ್ ಸೇರಿದಂತೆ ಬೇಕರಿ ಮತ್ತು ಕ್ಲಬ್ಗಳ ಪರವಾನಗಿ ಅಮಾನತು: 19 ಜನರ ಬಂಧನ!
ಚಿಕ್ಕಮಗಳೂರು ದತ್ತಪೀಠ ಪ್ರದೇಶದ ಇಸ್ಲಾಮೀಕರಣದ ಪಿತೂರಿ ನಡೆಯುತ್ತಿದೆ ಎಂದು ಆರೋಪ!
ಹಾವೇರಿ : ಮಸೀದಿ ಎದುರು ಪಟಾಕಿ ಸಿಡಿಸಿದ ಕಾರಣಕ್ಕೆ ರೈತನ ಕೈ ಕತ್ತರಿಸಿದ ಮತಾಂಧರು!