ಹಿಂದೂ ಸಂಘಟನೆಗಳಿಂದ ವಿರೋಧ; ನಿಯಮದ ಪ್ರಕಾರವೇ ಪ್ರವೇಶ ನಡೆದಿದೆ ಎಂದು ಮೂಲಗಳಿಂದ ಸ್ಪಷ್ಟನೆ

ಜಮ್ಮು – ಜಮ್ಮುವಿನ ಕತ್ರಾದಲ್ಲಿರುವ ‘ಶ್ರೀ ಮಾತಾ ವೈಷ್ಣೋ ದೇವಿ ಇನ್ಸ್ಟಿಟ್ಯೂಟ್ ಆಫ್ ಮೆಡಿಕಲ್ ಎಕ್ಸಲೆನ್ಸ್’ ವೈದ್ಯಕೀಯ ಕಾಲೇಜಿನ ಎಂಬಿಬಿಎಸ್ ಕೋರ್ಸ್ನ ಮೊದಲ ಪ್ರವೇಶ ಪಟ್ಟಿಯಲ್ಲಿ ಒಟ್ಟು 50 ಸೀಟುಗಳ ಪೈಕಿ 42 ಸೀಟುಗಳು ಮುಸ್ಲಿಂ ವಿದ್ಯಾರ್ಥಿಗಳಿಗೆ ಮತ್ತು ಕೇವಲ 8 ಸೀಟುಗಳು ಹಿಂದೂ ವಿದ್ಯಾರ್ಥಿಗಳಿಗೆ ಲಭಿಸಿವೆ.
ಈ ಪಟ್ಟಿ ಪ್ರಕಟವಾದ ನಂತರ ಸಾಮಾಜಿಕ ಮಾಧ್ಯಮಗಳಲ್ಲಿ ತೀವ್ರ ಆಕ್ರೋಶ ವ್ಯಕ್ತವಾಗಿದೆ. ಹಿಂದೂ ಟ್ರಸ್ಟ್ನಿಂದ ನಡೆಸಲ್ಪಡುವ ಈ ಕಾಲೇಜಿನಲ್ಲಿ ಹಿಂದೂ ವಿದ್ಯಾರ್ಥಿಗಳಿಗೆ ಇಷ್ಟು ಕಡಿಮೆ ಸೀಟುಗಳು ಏಕೆ ಸಿಕ್ಕಿವೆ ಎಂಬ ಪ್ರಶ್ನೆಗಳು ಉದ್ಭವಿಸಿವೆ.
🚨 Discrimination in the Name of “Rules”?
At Shri Mata Vaishno Devi Medical College, 42 MBBS seats went to Muslim students, while only 8 were allotted to Hindus!
Hindu groups are opposing this blatant bias.
When temple-run institutions can’t prioritize Hindus, something is… pic.twitter.com/TkZ76bYGpM
— Sanatan Prabhat (@SanatanPrabhat) November 10, 2025
1. ಈ ವೈದ್ಯಕೀಯ ಕಾಲೇಜನ್ನು ‘ಮಾತಾ ವೈಷ್ಣೋ ದೇವಿ ಶ್ರೈನ್ ಬೋರ್ಡ್’ ನಡೆಸುತ್ತಿದೆ. ಇದು ಸಂಪೂರ್ಣವಾಗಿ ಧಾರ್ಮಿಕ ಸಂಸ್ಥೆಯಾಗಿದ್ದು, ಮಾತಾ ವೈಷ್ಣೋ ದೇವಿ ದೇವಸ್ಥಾನದ ದೇಣಿಗೆಗಳಿಂದ ಕಾಲೇಜಿನ ವೆಚ್ಚವನ್ನು ಭರಿಸಲಾಗುತ್ತದೆ.
2.ರಾಷ್ಟ್ರೀಯ ಬಜರಂಗ ದಳದ ಜಮ್ಮು ಅಧ್ಯಕ್ಷರಾದ ರಾಕೇಶ್ ಬಜರಂಗಿ ಅವರು ಇದನ್ನು ತೀವ್ರವಾಗಿ ವಿರೋಧಿಸಿದ್ದಾರೆ. ಇದು ತಾರತಮ್ಯದ ನಿರ್ಧಾರ ಎಂದು ಅವರು ಬಣ್ಣಿಸಿದ್ದಾರೆ.ಈ ವಿಷಯದಲ್ಲಿ ಉಪರಾಜ್ಯಪಾಲ ಮನೋಜ್ ಸಿನ್ಹಾ ಅವರು ಹಸ್ತಕ್ಷೇಪ ಮಾಡಬೇಕೆಂದು ಅವರು ಆಗ್ರಹಿಸಿದರು.
ಪ್ರವೇಶ ಪ್ರಕ್ರಿಯೆ ಮತ್ತು ನಿಯಮ
‘ನೀಟ್’ (NEET) ಪರೀಕ್ಷೆಯ ಮೂಲಕ ದೇಶಾದ್ಯಂತ ವೈದ್ಯಕೀಯ ಕಾಲೇಜುಗಳಿಗಾಗಿ ಪ್ರವೇಶ ನಡೆಯುವುದರಿಂದ, ಪ್ರವೇಶವು ಕೇವಲ ಅಂಕಗಳು ಮತ್ತು ಗುಣಮಟ್ಟವನ್ನು ಆಧರಿಸಿದೆ. ಅದರಲ್ಲಿ ಧರ್ಮ ಅಥವಾ ಯಾವುದೇ ಧಾರ್ಮಿಕ ಗುರುತಿನ ಅಂಶ ಬರುವುದಿಲ್ಲ. ಖಾಸಗಿ ವೈದ್ಯಕೀಯ ಕಾಲೇಜುಗಳಲ್ಲಿ ಅರ್ಧದಷ್ಟು ಸೀಟುಗಳನ್ನು ‘ಅಖಿಲ ಭಾರತ ಕೋಟಾ’ (All India Quota) ಮತ್ತು ಉಳಿದರ್ಧ ‘ರಾಜ್ಯ ಕೋಟಾ’ (State Quota) ಅಡಿಯಲ್ಲಿ ಭರ್ತಿ ಮಾಡಲಾಗುತ್ತದೆ. ಜಮ್ಮು ಮತ್ತು ಕಾಶ್ಮೀರದಲ್ಲೂ ಇದೇ ಪ್ರಕ್ರಿಯೆ ನಡೆಯುತ್ತದೆ. ಮೀಸಲಾತಿ ನೀತಿಯು ಕೇವಲ ಪರಿಶಿಷ್ಟ ಜಾತಿ, ಪಂಗಡ, ಇತರೆ ಹಿಂದುಳಿದ ವರ್ಗ ಮತ್ತು ಆರ್ಥಿಕವಾಗಿ ದುರ್ಬಲ ವರ್ಗಗಳಿಗೆ ಮಾತ್ರ ಅನ್ವಯಿಸುತ್ತದೆ. ಧಾರ್ಮಿಕ ಆಧಾರದ ಮೇಲೆ ಯಾವುದೇ ಮೀಸಲಾತಿ ಇಲ್ಲ.
ಸಂಪಾದಕೀಯ ನಿಲುವು
|
ಕೇರಳಮ್ದಲ್ಲಿ ‘ಇಸ್ಲಾಂ ಫ್ರೆಂಡ್ಲಿ’ ಜಿಮ್ ಕುರಿತು ವಿವಾದ
ಪುಣೆ ನಗರದಲ್ಲಿ ಮತ್ತೆ ‘ಕಾರ್ಪೊರೇಟ್ ಜಿಹಾದ್’ ಪ್ರಕರಣ
‘ದಾರುಲ್ ಉಲೂಮ್ ದೇವಬಂದ್’ ಭಯೋತ್ಪಾದಕರ ಕೇಂದ್ರವಾಗಿರುವುದರಿಂದ ಅದನ್ನು ನೆಲಸಮ ಮಾಡಿ ! – ಹಿಂದೂ ರಕ್ಷಾ ದಳದ ಬೇಡಿಕೆ
ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಅವರನ್ನು ಭಗವಾನ್ ಶಿವನ ರೂಪದಲ್ಲಿ ತೋರಿಸಿದ ‘ವಿಶ್ವವಾಣಿ’ ಪತ್ರಿಕೆ !
‘ಭಂಡಾರ ಎಂದರೆ ಶುದ್ಧ ಅರಿಶಿನ’ ಎಂದು ಘೋಷಿಸುವಂತೆ ಅನ್ನ ಮತ್ತು ಔಷಧ ಆಡಳಿತಕ್ಕೆ (FDA) ಆಗ್ರಹ!
ಪಾನ್ ಮಸಾಲಾ, ಗುಟ್ಕಾ ಮತ್ತು ಕಲಬೆರಕೆ ಆಹಾರ ಪದಾರ್ಥಗಳ ಒಂದೂವರೆ ಕೋಟಿಗೂ ಹೆಚ್ಚು ಮೌಲ್ಯದ ದಾಸ್ತಾನು ವಶ