ಭಾರತೀಯ ಮೀನುಗಾರರನ್ನು ದೋಣಿಯ ಸಮೇತ ಅಪಹರಿಸಿದ ಪಾಕಿಸ್ತಾನ!

ಓಖಾ (ಗುಜರಾತ್) – ಪಾಕಿಸ್ತಾನದ ಕಡಲ ಭದ್ರತಾ ದಳವು ಗುಜರಾತಿನ ಓಖಾ ಕರಾವಳಿಯ ಬಳಿ ‘ನರ ನಾರಾಯಣ’ ಎಂಬ ಭಾರತೀಯ ಮೀನುಗಾರಿಕಾ ದೋಣಿಯ ಮೇಲೆ ಗುಂಡು ಹಾರಿಸಿ, ದೋಣಿಯ ಸಮೇತ ಅದರಲ್ಲಿದ್ದ 8 ಮೀನುಗಾರರನ್ನು ಸಹ ಅಪಹರಿಸಿದೆ. ದೋಣಿಯನ್ನು ಪಾಕಿಸ್ತಾನದ ಸಮುದ್ರ ಗಡಿಯೊಳಗೆ ಕೊಂಡೊಯ್ಯುವಾಗ, ಒಬ್ಬ ಮೀನುಗಾರನಿಗೆ ಗಾಯಗಳಾಗಿವೆ ಎಂದು ವರದಿಯಾಗಿದೆ.

ಸಂಪಾದಕೀಯ ನಿಲುವು

ಹೀಗೆ ಧೈರ್ಯ ಮಾಡುವ ಪಾಕಿಸ್ತಾನವನ್ನು ಒಮ್ಮೆಲೇ ನಾಶ ಮಾಡಿ, ಈ ಪಿಡುಗನ್ನು ಸರಕಾರ ಶಾಶ್ವತವಾಗಿ ಏಕೆ ಮುಗಿಸುವುದಿಲ್ಲ?