ಮಹಾರಾಷ್ಟ್ರ ಕೇಸರಿ’ ಪೈಲ್ವಾನ್ ಸಿಕಂದರ್ ಶೇಖ್‌ ಗೆ ಶಸ್ತ್ರಾಸ್ತ್ರ ಕಳ್ಳಸಾಗಣೆ ಪ್ರಕರಣದಲ್ಲಿ ಪಂಜಾಬಿನಲ್ಲಿ ಬಂಧನ!

ಸೋಲಾಪುರ, ನವೆಂಬರ್ 1 – ಸೋಲಾಪುರ ಜಿಲ್ಲೆಯ ಮೊಹೋಳ ತಾಲೂಕಿನ ನಿವಾಸಿಯಾಗಿರುವ ‘ಮಹಾರಾಷ್ಟ್ರ ಕೇಸರಿ’ ಪೈಲ್ವಾನ್ ಸಿಕಂದರ್ ಶೇಖ್ ಸೇರಿದಂತೆ ನಾಲ್ವರನ್ನು ಪಂಜಾಬ್ ಪೊಲೀಸರು ಮೊಹಾಲಿಯಲ್ಲಿ ಶಸ್ತ್ರಾಸ್ತ್ರ ಕಳ್ಳಸಾಗಣೆ ಪ್ರಕರಣದಲ್ಲಿ ಬಂಧಿಸಿದ್ದಾರೆ. ದಾನವೀರ ಮತ್ತು ಆತನ ಸಹಚರ ಬಂಟಿ ಅಕ್ಟೋಬರ್ 24 ರಂದು ಒಂದು ಕಾರಿನಲ್ಲಿ ಎರಡು ಶಸ್ತ್ರಾಸ್ತ್ರಗಳನ್ನು ತೆಗೆದುಕೊಂಡು ಮೊಹಾಲಿಗೆ ಬಂದಿದ್ದರು. ಈ ಶಸ್ತ್ರಾಸ್ತ್ರಗಳನ್ನು ಸಿಕಂದರ ಶೇಖ್‌ ಗೆ ನೀಡಲು ನಿರ್ಧರಿಸಲಾಗಿತ್ತು. ಶಸ್ತ್ರಾಸ್ತ್ರಗಳನ್ನು ‘ಹ್ಯಾಪಿ’ ಎಂಬ ವ್ಯಕ್ತಿಗೆ ತಲುಪಿಸುವ ಜವಾಬ್ದಾರಿ ಸಿಕಂದರ ಶೇಖ್ ಅವರ ಮೇಲಿತ್ತು; ಆದರೆ ಅದಕ್ಕೂ ಮೊದಲು ಪೊಲೀಸರು ಮೊಹಾಲಿಯ ವಿಮಾನ ನಿಲ್ದಾಣ ವೃತ್ತದಲ್ಲಿ ಮೂವರನ್ನು ಬಂಧಿಸಿದರು. ಸಿಕಂದರ ಶೇಖ್‌ ನನ್ನು ಬಂಧಿಸಿದ ನಂತರ ಪೊಲೀಸರು ಹ್ಯಾಪಿಯನ್ನೂ ಬಂಧಿಸಿ ಆತನಿಂದ 3 ಬಂದೂಕುಗಳನ್ನು ವಶಪಡಿಸಿಕೊಂಡರು.

ಪೊಲೀಸ್ ಅಧಿಕಾರಿ ಹರಮನ್ ಹಂಸ ಅವರು ಪತ್ರಿಕಾಗೋಷ್ಠಿಯಲ್ಲಿ ಮಾಹಿತಿ ನೀಡುತ್ತಾ, ಆರೋಪಿಗಳಿಂದ 1 ಲಕ್ಷ 99 ಸಾವಿರ ರೂಪಾಯಿ ನಗದು, 5 ಪಿಸ್ತೂಲ್‌ಗಳು, ಕಾಡತೂಸ್‌ಗಳು ಮತ್ತು 3 ದುಬಾರಿ ಕಾರುಗಳನ್ನು ವಶಪಡಿಸಿಕೊಳ್ಳಲಾಗಿದೆ ಎಂದು ತಿಳಿಸಿದರು. ಈ ಪ್ರಕರಣದಲ್ಲಿ ಖರಡ ಪೊಲೀಸ್ ಠಾಣೆಯಲ್ಲಿ ಶಸ್ತ್ರಾಸ್ತ್ರ ಕಾಯ್ದೆಯಡಿ ಪ್ರಕರಣ ದಾಖಲಿಸಲಾಗಿದೆ. ಬಂಧಿತ ಆರೋಪಿಗಳು ಹರಿಯಾಣ ಮತ್ತು ರಾಜಸ್ಥಾನದಲ್ಲಿ ಸಕ್ರಿಯವಾಗಿರುವ ವಿಕ್ರಮ ಮತ್ತು ಪಪಲಾ ಗುಜ್ಜರ ಗ್ಯಾಂಗ್‌ ನೊಂದಿಗೆ ನೇರವಾಗಿ ಸಂಬಂಧ ಹೊಂದಿದ್ದಾರೆ. ಅವರು ಉತ್ತರ ಪ್ರದೇಶದಿಂದ ಶಸ್ತ್ರಾಸ್ತ್ರಗಳನ್ನು ತಂದು ಪಂಜಾಬ್ ಮತ್ತು ಸುತ್ತಮುತ್ತಲಿನ ಪ್ರದೇಶಗಳಿಗೆ ಪೂರೈಸುತ್ತಿದ್ದರು. ಆರೋಪಿಗಳಲ್ಲಿ ಮೂವರಿಗೆ ಕ್ರಿಮಿನಲ್ ಹಿನ್ನೆಲೆ ಇದೆ, ಆದರೆ ಸಿಕಂದರ ಶೇಖ್‌ ನ ಕ್ರಿಮಿನಲ್ ಹಿನ್ನೆಲೆಯನ್ನು ಪರಿಶೀಲಿಸಲು ಮಹಾರಾಷ್ಟ್ರ ಪೊಲೀಸರೊಂದಿಗೆ ಸಂಪರ್ಕಿಸಲಾಗಿದೆ.

ಪೈಲ್ವಾನ್ ಸಿಕಂದರ ಶೇಖ್‌ ನ ವಿವಾದಾತ್ಮಕ ವೃತ್ತಿಜೀವನ!

ಪೈಲ್ವಾನ್ ಸಿಕಂದರ ಶೇಖ್ ಕೋಲ್ಲಾಪುರದ ಗಂಗಾವೇಸ್ ತಾಲಿಂನಲ್ಲಿ ಕುಸ್ತಿ ತರಬೇತಿ ಪಡೆದಿದ್ದನು. ಪುಣೆಯಲ್ಲಿ 2023 ರಲ್ಲಿ ನಡೆದ ‘ಮಹಾರಾಷ್ಟ್ರ ಕೇಸರಿ’ ಸ್ಪರ್ಧೆಯ ಮಣ್ಣಿನ ವಿಭಾಗದ ಅಂತಿಮ ಸುತ್ತಿನಲ್ಲಿ, ತೀರ್ಪುಗಾರರ ನಿರ್ಧಾರವನ್ನು ಆಕ್ಷೇಪಿಸಿದ್ದರಿಂದ ಸಿಕಂದರ್ ವಿವಾದಾತ್ಮಕನಾಗಿದ್ದನು. ನಂತರದ ಕುಸ್ತಿಯಲ್ಲಿ ಅವನು ‘ಮಹಾರಾಷ್ಟ್ರ ಕೇಸರಿ’ ಪ್ರಶಸ್ತಿಯನ್ನು ಗೆದ್ದಿದ್ದನು. ನಂತರ ಅವನು ಕ್ರೀಡಾ ವಿಭಾಗದಿಂದ ಭಾರತೀಯ ಸೇನೆಗೆ ಸೇರಿಕೊಂಡಿದ್ದನು; ಆದರೆ ಅವನು ಆ ಕೆಲಸವನ್ನು ಬಿಟ್ಟನು. ಕಳೆದ 5-6 ತಿಂಗಳಿಂದ ಅವನು ಪಂಜಾಬಿನಲ್ಲಿ ಬಾಡಿಗೆ ಮನೆಯಲ್ಲಿ ವಾಸಿಸುತ್ತಾ, ಶಸ್ತ್ರಾಸ್ತ್ರ ಪೂರೈಕೆ ಜಾಲದಲ್ಲಿ ಮಧ್ಯವರ್ತಿಯಾಗಿ ಕೆಲಸ ಮಾಡುತ್ತಿದ್ದನು.

ಸಂಪಾದಕೀಯ ನಿಲುವು

ಕ್ರೀಡಾಪಟುಗಳಾಗಿದ್ದರೂ ಮತಾಂಧ ಕ್ರಿಮಿನಲ್ ಮನೋವೃತ್ತಿಯವರಾಗಿರುತ್ತಾರೆ ಎಂದು ಯಾರಾದರೂ ಹೇಳಿದರೆ, ಅದರಲ್ಲಿ ತಪ್ಪೇನಿದೆ?