ಭಾರತದ ನಂತರ ಈಗ ಅಫ್ಘಾನಿಸ್ತಾನವೂ ಪಾಕಿಸ್ತಾನ ನತ್ತ ಹರಿಯುವ ನದಿಗೆ ಅಣೆಕಟ್ಟು ಕಟ್ಟಿ ನೀರು ತಡೆಹಿಡಿಯಲಿದೆ! : Kunar River Dam

ಶೇಖ್ ಹಿಬತುಲ್ಲಾ ಅಖುಂಡ್ಜಾದಾ (ಚೌಕಟ್ಟಿನಲ್ಲಿ)

ಕಾಬೂಲ (ಅಫ್ಘಾನಿಸ್ತಾನ) – ಭಾರತವು ‘ಸಿಂಧೂ ನದಿ ನೀರು ಹಂಚಿಕೆ ಒಪ್ಪಂದ’ವನ್ನು ರದ್ದುಗೊಳಿಸಿ ಪಾಕಿಸ್ತಾನದ ಮೇಲೆ ಒತ್ತಡ ಹೇರಿದೆ. ಇದರ ನಂತರ, ಈಗ ಅಫ್ಘಾನಿಸ್ತಾನ ಕೂಡ ಪಾಕಿಸ್ತಾನದ ಕಡೆಗೆ ಹರಿಯುವ ನದಿಯ ಮೇಲೆ ಅಣೆಕಟ್ಟು ಕಟ್ಟಿ ನೀರನ್ನು ತಿರುಗಿಸಲು ನಿರ್ಧರಿಸಿದೆ. ತಾಲಿಬಾನ್ ಸರಕಾರದ ಉಪ ಮಾಹಿತಿ ಸಚಿವ ಮುಜಾಹಿದ್ ಫಾರಾಹಿ ಈ ಘೋಷಣೆ ಮಾಡಿದ್ದಾರೆ.

1. ಜಲ ಮತ್ತು ಇಂಧನ ಸಚಿವಾಲಯದ ಸರ್ವೋಚ್ಚ ನಾಯಕ ಶೇಖ್ ಹಿಬತುಲ್ಲಾ ಅಖುಂದಜಾದಾ ಅವರು ಕುನಾರ್ ನದಿಯ ಮೇಲೆ ತಕ್ಷಣವೇ ಅಣೆಕಟ್ಟುಗಳು ಮತ್ತು ತಡೆಗೋಡೆಗಳನ್ನು ನಿರ್ಮಿಸಲು ಮತ್ತು ನೀರು ತಡೆಹಿಡಿಯುವ ಕೆಲಸವನ್ನು ಪ್ರಾರಂಭಿಸಲು ಆದೇಶ ನೀಡಿದ್ದಾರೆ. ಈ ನದಿಯು ಪಾಕಿಸ್ತಾನದ ಕಡೆಗೆ ಹರಿಯುತ್ತದೆ. ಈ ನಿರ್ಧಾರದಿಂದಾಗಿ ಪಾಕಿಸ್ತಾನದ ಅನೇಕ ಹಳ್ಳಿಗಳು ಮತ್ತು ನಗರಗಳ ನೀರು ಸರಬರಾಜು ಮತ್ತು ಕೃಷಿಯ ಮೇಲೆ ದೊಡ್ಡ ಪರಿಣಾಮ ಬೀರಲಿದೆ.

2. ಅಣೆಕಟ್ಟುಗಳು ಮತ್ತು ತಡೆಗೋಡೆಗಳನ್ನು ನಿರ್ಮಿಸಲು ಯಾವುದೇ ವಿದೇಶಿ ಸಂಸ್ಥೆಗಾಗಿ ಕಾಯುವ ಅಗತ್ಯವಿಲ್ಲ ಎಂದು ಸಹ ಆದೇಶ ನೀಡಲಾಗಿದೆ. ಆದ್ದರಿಂದ ಅಫ್ಘಾನಿಸ್ತಾನದ ಸ್ಥಳೀಯ ಸಂಸ್ಥೆಗಳು ತಕ್ಷಣವೇ ಕೆಲಸವನ್ನು ಪ್ರಾರಂಭಿಸಲಿವೆ.

3. ತಮ್ಮ ನೀರಿನ ಸಂಪನ್ಮೂಲಗಳ ಬಗ್ಗೆ ನಿರ್ಧಾರ ತೆಗೆದುಕೊಳ್ಳುವ ಹಕ್ಕು ಅಫ್ಘಾನಿಸ್ತಾನಕ್ಕೆ ಇದೆ ಎಂದು ಜಲ ಮತ್ತು ಇಂಧನ ಸಚಿವ ಮುಲ್ಲಾ ಅಬ್ದುಲ್ ಲತೀಫ್ ಮನ್ಸೂರ್ ಹೇಳಿದ್ದಾರೆ.