
ಮುಂಬಯಿ, ಅಕ್ಟೋಬರ್ ೨೧ (ವರದಿ) – ೯೫೦ ವರ್ಷಗಳಷ್ಟು ಪ್ರಾಚೀನ ಮತ್ತು ಭಾರತೀಯ ಪುರಾತತ್ವ ಇಲಾಖೆಯಿಂದ ಸಂರಕ್ಷಿಸಲ್ಪಟ್ಟಿರುವ ಸ್ಮಾರಕವಾಗಿರುವ ಥಾಣೆ ಜಿಲ್ಲೆಯ ಅಂಬರನಾಥದಲ್ಲಿರುವ ಶಿವಮಂದಿರಕ್ಕೆ ಬಿರುಕುಗಳು ಕಾಣಿಸಿಕೊಂಡಿವೆ. ಅನೇಕ ಸ್ಥಳಗಳಲ್ಲಿ ದೇವಾಲಯದ ಅವಶೇಷಗಳು ಒಡೆದಿವೆ, ದೇವಾಲಯದ ಮೇಲಿನ ಅನೇಕ ಶಿಲ್ಪಗಳು ಭಗ್ನಗೊಂಡಿವೆ. ಇಷ್ಟೊಂದು ದುಸ್ಥಿತಿಯಾದರೂ ಭಾರತೀಯ ಪುರಾತತ್ವ ಇಲಾಖೆಯು ಈ ದೇವಾಲಯದ ಸಂರಕ್ಷಣೆಗಾಗಿ ಯಾವುದೇ ಯೋಜನೆಯನ್ನು ಮಾಡಿಲ್ಲ. ಈ ದೇವಾಲಯವು ದೇಶದ ಪ್ರಾಚೀನ ದೇವಾಲಯಗಳಲ್ಲಿ ಒಂದಾಗಿದೆ.

‘ಸನಾತನ ಪ್ರಭಾತ’ದ ಪ್ರತಿನಿಧಿ ಶ್ರೀ. ಪ್ರೀತಮ ನಾಚಣಕರ್ ಅವರು ಮಾಹಿತಿ ಹಕ್ಕಿನ ಅಡಿಯಲ್ಲಿ ಸಲ್ಲಿಸಿದ ಅರ್ಜಿಯಿಂದಾಗಿ ಅಂಬರನಾಥ ದೇವಾಲಯದ ಸಂರಕ್ಷಣೆ ಅಥವಾ ದುರಸ್ತಿಗಾಗಿ ಪುರಾತತ್ವ ಇಲಾಖೆಯಿಂದ ಯಾವುದೇ ರೀತಿಯ ಸಮೀಕ್ಷೆಯನ್ನು ಮಾಡಲಾಗಿಲ್ಲ ಎಂಬ ಮಾಹಿತಿಯನ್ನು ಕೇಂದ್ರ ಪುರಾತತ್ವ ಇಲಾಖೆಯ ಮುಂಬಯಿಯ ವಿಭಾಗೀಯ ಕಚೇರಿಯಿಂದ ನೀಡಲಾಗಿದೆ.

ದೇವಾಲಯದ ದುಸ್ಥಿತಿ ಹೀಗಿದೆ !

ಈ ದೇವಾಲಯದ ಮೇಲೆ ಭಗವಾನ್ ಶ್ರೀವಿಷ್ಣು, ಗಣಪತಿ, ನರಸಿಂಹ ಮತ್ತು ಇತರ ದೇವತೆಗಳು ನೃತ್ಯ ಮಾಡುತ್ತಿರುವ ಶಿಲ್ಪಗಳಿವೆ. ಇವುಗಳಲ್ಲಿ ಬಹುತೇಕ ಶಿಲ್ಪಗಳು ಒಡೆದಿವೆ. ಕೆಲವು ಶಿಲ್ಪಗಳ ಶಿರಗಳು ಮುರಿದಿವೆ, ಇನ್ನೂ ಕೆಲವದರ ಅಂಗಾಂಗಗಳು ಮುರಿದಿವೆ. ಅನೇಕ ಸ್ಥಳಗಳಲ್ಲಿ ದೇವಾಲಯದ ಕೆಲವು ಭಾಗಗಳು ಒಡೆದಿವೆ. ಕಳೆದ ಹಲವು ವರ್ಷಗಳಿಂದ ಈ ದೇವಾಲಯದ ಸಂರಕ್ಷಣೆಯ ಬಗ್ಗೆ ನಿರ್ಲಕ್ಷ್ಯ ವಹಿಸಿದ್ದರಿಂದ ಪ್ರಸ್ತುತ ಈ ದೇವಾಲಯದ ಸ್ಥಿತಿ ಅತ್ಯಂತ ಬಿಗಡಾಯಿಸಿದೆ.
ಕೇರಳಮ್ದಲ್ಲಿ ‘ಇಸ್ಲಾಂ ಫ್ರೆಂಡ್ಲಿ’ ಜಿಮ್ ಕುರಿತು ವಿವಾದ
ಪುಣೆ ನಗರದಲ್ಲಿ ಮತ್ತೆ ‘ಕಾರ್ಪೊರೇಟ್ ಜಿಹಾದ್’ ಪ್ರಕರಣ
‘ದಾರುಲ್ ಉಲೂಮ್ ದೇವಬಂದ್’ ಭಯೋತ್ಪಾದಕರ ಕೇಂದ್ರವಾಗಿರುವುದರಿಂದ ಅದನ್ನು ನೆಲಸಮ ಮಾಡಿ ! – ಹಿಂದೂ ರಕ್ಷಾ ದಳದ ಬೇಡಿಕೆ
ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಅವರನ್ನು ಭಗವಾನ್ ಶಿವನ ರೂಪದಲ್ಲಿ ತೋರಿಸಿದ ‘ವಿಶ್ವವಾಣಿ’ ಪತ್ರಿಕೆ !
‘ಭಂಡಾರ ಎಂದರೆ ಶುದ್ಧ ಅರಿಶಿನ’ ಎಂದು ಘೋಷಿಸುವಂತೆ ಅನ್ನ ಮತ್ತು ಔಷಧ ಆಡಳಿತಕ್ಕೆ (FDA) ಆಗ್ರಹ!
ಪಾನ್ ಮಸಾಲಾ, ಗುಟ್ಕಾ ಮತ್ತು ಕಲಬೆರಕೆ ಆಹಾರ ಪದಾರ್ಥಗಳ ಒಂದೂವರೆ ಕೋಟಿಗೂ ಹೆಚ್ಚು ಮೌಲ್ಯದ ದಾಸ್ತಾನು ವಶ