‘ಸನಾತನಿಗಳ ಸಹವಾಸ ಬೇಡ, ಸಂಘದಿಂದ ದೂರ ಇರಿ!’ – ಮುಖ್ಯಮಂತ್ರಿ ಸಿದ್ದರಾಮಯ್ಯ ಇವರಿಂದ ವಿದ್ಯಾರ್ಥಿಗಳಿಗೆ ಸನಾತನ ದ್ವೇಷದ ಸಲಹೆ

ಮಕ್ಕಳ ಮನಸ್ಸಿನಲ್ಲಿ ಸನಾತನ ದ್ವೇಷ ಹರಡುವ ಪ್ರಯತ್ನ

ಮೈಸೂರು – ಜನರು ಸನಾತನಿಗಳ ಸಹವಾಸ ತಪ್ಪಿಸಬೇಕು ಮತ್ತು ರಾಷ್ಟ್ರೀಯ ಸ್ವಯಂಸೇವಕ ಸಂಘದ ಜಾಗೃತ ಇರಬೇಕು; ಕಾರಣ ಅವರು ಯಾವಾಗಲೂ ಡಾಕ್ಟರ್ ಭೀಮರಾವ್ ಅಂಬೇಡ್ಕರ್ ಮತ್ತು ಅವರು ನಿರ್ಮಿಸಿರುವ ಸಂವಿಧಾನವನ್ನು ವಿರೋಧಿಸಿದ್ದಾರೆ, ಎಂದು ಸನಾತನ ದ್ವೇಷಿ ರಾಜ್ಯದ ಕಾಂಗ್ರೆಸ್ ಸರಕಾರದ ಮುಖ್ಯಮಂತ್ರಿ ಸಿದ್ದರಾಮಯ್ಯ ಇವರು ಹೇಳಿಕೆ ನೀಡಿದ್ದಾರೆ. ‘ನಿಮ್ಮ ಸಹವಾಸ ಒಳ್ಳೆಯವರ ಜೊತೆಗೆ ಇರಿಸಿ. ಸಮಾಜದ ಒಳ್ಳೆಯದಕ್ಕಾಗಿ ಕೆಲಸ ಮಾಡುವವರ ಜೊತೆಗೆ ಸಂಬಂಧ ಇರಿಸಿ, ಸಾಮಾಜಿಕ ಬದಲಾವಣೆಗೆ ವಿರೋಧ ಮಾಡುವವರ ಜೊತೆಗೆ ಅಲ್ಲ’, ಎಂದು ಸಿದ್ದರಾಮಯ್ಯ ಇವರು ಸಲಹೆ ಕೂಡ ನೀಡಿದರು. ಅವರು ಮೈಸೂರು ವಿದ್ಯಾಪೀಠದ ಡಾ. ಬಾಬಾ ಸಾಹೇಬ್ ಅಂಬೇಡ್ಕರ್ ಅಧ್ಯಯನ ಕೇಂದ್ರದ ರಜತ ಮಹೋತ್ಸವದ ಪ್ರಯುಕ್ತ’ ವಿಶ್ವಜ್ಞಾನಿ ಅಂಬೇಡ್ಕರ್ ಸಭಾಂಗಣ ‘ ದ ಉದ್ಘಾಟನೆಯ ಕಾರ್ಯಕ್ರಮದಲ್ಲಿ ಮಾತನಾಡುತ್ತಿದ್ದರು. ಕಳೆದ ಕೆಲವು ದಿನಗಳಿಂದ ರಾಜ್ಯದಲ್ಲಿ ರಾಷ್ಟ್ರೀಯ ಸ್ವಯಂ ಸೇವಕ ಸಂಘದ ಕಾರ್ಯಕ್ರಮದ ಮೇಲೆ ನಿಷೇದ ಹೇರುವ ಆಗ್ರಹ ನಡೆಯುತ್ತಿದೆ. ಅದರ ನಂತರ ರಾಜ್ಯ ಸರಕಾರವು ಸಂಘದ ಕಾರ್ಯಕ್ರಮವನ್ನು ನಿಯಂತ್ರಣದಲ್ಲಿ ಇಡುವುದಕ್ಕಾಗಿ ನಿಯಮ ಜಾರಿಗೊಳಿಸುವ ನಿರ್ಣಯ ತೆಗೆದುಕೊಂಡುದೆ.

ಸಿದ್ದರಾಮಯ್ಯ ಮಾತು ಮುಂದುವರಿಸಿ,

೧. ಸರ್ವೋಚ್ಚ ನ್ಯಾಯಾಲಯದ ನ್ಯಾಯಾಧೀಶರ ಮೇಲೆ ಸನಾತನಿ ಮನಸ್ಥಿತಿಯ ವ್ಯಕ್ತಿಯು ಬೂಟು ಎಸೆಯುವುದು, ಇದು ಸಮಾಜದ ಹಿತ ಕಾಪಾಡುವ ಜನರು ಮತ್ತು ಸನಾತನವಾದಿ ಇನ್ನೂ ಕೂಡ ಇದ್ದಾರೆ, ಇದರ ಸ್ಪಷ್ಟ ಸಾಕ್ಷಿ ಇದೆ. ಈ ಘಟನೆಯಿಂದ ಕೇವಲ ದಲಿತರು ಅಷ್ಟೇ ಅಲ್ಲದೆ, ಪ್ರತಿಯೊಬ್ಬರೂ ಒಮ್ಮತದಿಂದ ನಿಷೇಧಿಸಬೇಕು, ಆಗ ಸಮಾಜ ಬದಲಾವಣೆಯ ಮಾರ್ಗದಲ್ಲಿ ಇದೆ, ಹೀಗೆ ನಾವು ತಿಳಿಯಬಹುದು.

೨. ‘ಕಾಂಗ್ರೆಸ್ ಯಿಂದ ಅಂಬೇಡ್ಕರರು ಚುನಾವಣೆಯಲ್ಲಿ ಸೋತರು’, ಹೀಗೆ ಅಪಪ್ರಚಾರ ಸಂಘದವರು ಮಾಡುತ್ತಾರೆ; ಆದರೆ ‘ನನಗೆ ಸಾವರ್ಕರ್ ಮತ್ತು ಕಾಂರೆಡ್ ಡಾಂಗೆ ಇವರು ಸೋಲಿಸಿದ್ದಾರೆ’, ಎಂದು ಅಂಬೇಡ್ಕರರು ಸ್ವತಃ ಬರೆದು ಇಟ್ಟಿದ್ದಾರೆ. (ಇದು ಎಲ್ಲಿ ಬರೆದು ಇಟ್ಟಿದ್ದಾರೆ, ಅದನ್ನು ಸಿದ್ದರಾಮಯ್ಯ ಇವರು ಹೇಳಬೇಕು. ಇಲ್ಲವಾದರೆ ಅವರೇ ಸುಳ್ಳು ಮಾಹಿತಿ ಸಮಾಜದ ಎದುರು ಇಡುತ್ತಿದ್ದಾರೆ, ಹೀಗೆ ಹೇಳಲಾಗುವುದು ! – ಸಂಪಾದಕರು) ಆದ್ದರಿಂದ ಸುಳ್ಳು ಮಾಹಿತಿ ಸಮಾಜದ ಎದುರು ಹೇಳುವಾಗ ಸನಾತನವಾದಿಗಳ ಸಂಚು ಬಹಿರಂಗಪಡಿಸಬೇಕು.

ಸಂಘದ ಮಾನಸಿಕ ಸ್ಥಿತಿ ತಾಲಿಬಾನದಂತೆ ! – ಸಿದ್ದರಾಮಯ್ಯ ಇವರ ಪುತ್ರ ಯತೀಂದ್ರ

ಈ ಹಿಂದೆ ಮುಖ್ಯಮಂತ್ರಿ ಸಿದ್ದರಾಮಯ್ಯ ಇವರ ಪುತ್ರ ಯತೀಂದ್ರ ಸಿದ್ದರಾಮಯ್ಯ ಇವರು ರಾಜ್ಯದಲ್ಲಿ ರಾಷ್ಟ್ರೀಯ ಸ್ವಯಂಸೇವಕ ಸಂಘದ ಮೇಲೆ ನಿಷೇಧ ಹೇರಲು ಆಗ್ರಹಿಸಿದ್ದರು. ಅವರು, ಸಂಘದ ಮಾನಸಿಕ ಸ್ಥಿತಿ ತಾಲಿಬಾನದಂತೆ ಇದೆ.(ಹಾಗೆ ಇದ್ದಿದ್ದರೆ, ಆಗ ಯತಿಂದ್ರ ಹೀಗೆ ಮಾತನಾಡುವ ಧೈರ್ಯ ಮಾಡುತ್ತಿದ್ದರೆ? ಮತ್ತು ಹೀಗೆ ಧೈರ್ಯ ಮಾಡಿದ್ದರೆ, ಅವರು ಬದುಕಿ ಉಳಿಯುತ್ತಿದ್ದರೆ ? – ಸಂಪಾದಕರು) ಯಾವ ರೀತಿ ತಾಲಿಬಾನ್ ಇಸ್ಲಾಮಿನ ತತ್ವಗಳು ಹೇರುವುದಕ್ಕಾಗಿ ‘ಪರ್ಮನ್'(ಆದೇಶ) ಹೊರಡಿಸುತ್ತದೆ, ಅದೇ ರೀತಿ ಸಂಘ ಹಿಂದೂ ಧರ್ಮ ಹೇರಲು ಇಚ್ಚಿಸುತ್ತದೆ ಎಂದು ಹೇಳಿದ್ದರು. (ಹಿಂದೂ ಧರ್ಮ ತಾಲಿಬಾನದ ಜೊತೆಗೆ ಹೋಲಿಸುವವರ ತಲೆಗಳನ್ನು ಪರಿಶೀಲಿಸುವ ಅವಶ್ಯಕತೆ ಇದೆ! – ಸಂಪಾದಕರು)

ಸಂಪಾದಕೀಯ ನಿಲುವು

  • ಸನಾತನ ವಾದಿಗಳ ಸಹವಾಸ ಬೇಡ ಎನ್ನುವ ಸನಾತನ ಧರ್ಮದ ದೇವಸ್ಥಾನಗಳನ್ನು ಸರಕಾರಿಕರಣ ಗೊಳಿಸಿ ಅದರ ಹಣದ ಉಪಯೋಗ ಹೇಗೆ ಮಾಡುತ್ತಾರೆ? ಅದು ಅವರಿಗೆ ಹೇಗೆ ನಡೆಯುತ್ತದೆ?
  • ಕಾಂಗ್ರೆಸ್ ಮುಸ್ಲಿಂ ಲೀಗ ಜೊತೆಗೆ, ಮುಲ್ಲಾ ಮೌಲ್ವಿಗಳ ಜೊತೆಗೆ, ಕಾಶ್ಮೀರದಲ್ಲಿನ ಭಯೋತ್ಪಾದಕರ ಜೊತೆಗೆ ಸಂಬಂಧ ಹೊಂದಿದರೇ ನಡೆಯುತ್ತದೆ; ಆದರೆ ರಾಷ್ಟ್ರ ಮತ್ತು ಧರ್ಮದ ರಕ್ಷಣೆ ಮಾಡುವವರ ಜೊತೆಗೆ ಸಂಬಂಧ ಹೊಂದಬಾರದು, ಹೇಗೆ ಹೇಳುವವರ ಯಾವ ಮನಸ್ಸಿನ ಸ್ಥಿತಿ ಇದೆ, ಇದು ಗಮನಕ್ಕೆ ಬರುತ್ತದೆ !