ಸುರಾಜ್ಯ ಅಭಿಯಾನದಿಂದ ಕೇಂದ್ರ ಸರಕಾರಕ್ಕೆ ಬೇಡಿಕೆ

ಮುಂಬಯಿ – ಹಬ್ಬಗಳ ಸಮಯದಲ್ಲಿ ಖಾಸಗಿ ಬಸ್ ಸೇವೆ ಒದಗಿಸುವ ದಲ್ಲಾಳಿಗಳು ಮತ್ತು ಅಗ್ರಿಗೇಟರ್ ಅಪ್ಲಿಕೇಶನ್ಗಳ (ಆನ್ಲೈನ್ ಟಿಕೆಟ್ ಮಾರಾಟಗಾರರು, ಉದಾ. ರೆಡ್ಬಸ್) ಮೂಲಕ ಪ್ರಯಾಣಿಕರಾಗುತ್ತಿರುವ ಲೂಟಿಯನ್ನು ತಡೆಯಲು ಸುರಾಜ್ಯ ಅಭಿಯಾನವು ಕೇಂದ್ರ ಸರಕಾರದ ತುರ್ತು ಹಸ್ತಕ್ಷೇಪಕ್ಕೆ ಆಗ್ರಹಿಸಿದೆ. ಈ ಕುರಿತು ಅಭಿಯಾನದ ಮಹಾರಾಷ್ಟ್ರ ಸಂಯೋಜಕರಾದ ಅಭಿಷೇಕ್ ಮುರುಕಟೆ ಅವರು ಪ್ರಧಾನಸಚಿವ ನರೇಂದ್ರ ಮೋದಿ ಸೇರಿದಂತೆ ೬ ಕೇಂದ್ರ ಸಚಿವಗಳಿಗೆ ಮನವಿ ಸಲ್ಲಿಸಿದ್ದಾರೆ. ಈ ಲೂಟಿಯನ್ನು ತಡೆಯಲು ಕೇಂದ್ರ ನಿಯಂತ್ರಕ ಪ್ರಾಧಿಕಾರವನ್ನು ಸ್ಥಾಪಿಸಬೇಕು ಎಂದು ಸುರಾಜ್ಯ ಅಭಿಯಾನವು ಮನವಿಯಲ್ಲಿ ಬೇಡಿಕೆ ಇಟ್ಟಿದೆ. ಈ ಬೇಡಿಕೆಗಳ ಮನವಿಯನ್ನು ಕೇಂದ್ರ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್, ಗ್ರಾಹಕ ವ್ಯವಹಾರ, ಆಹಾರ ಮತ್ತು ಸಾರ್ವಜನಿಕ ವಿತರಣಾ ಸಚಿವ ಪ್ರಹ್ಲಾದ್ ಜೋಶಿ, ರಸ್ತೆ ಸಾರಿಗೆ ಮತ್ತು ಹೆದ್ದಾರಿ ಸಚಿವ ನಿತೀನ್ ಗಡ್ಕರಿ, ಪ್ರವಾಸೋದ್ಯಮ ಸಚಿವ ಗಜೇಂದ್ರಸಿಂಗ್ ಶೇಖಾವತ್ ಮತ್ತು ಮಾಹಿತಿ ತಂತ್ರಜ್ಞಾನ ಸಚಿವ ಶ್ರೀ. ಅಶ್ವಿನಿ ವೈಷ್ಣವ್ ಅವರಿಗೂ ನೀಡಲಾಗಿದೆ.
ಸುರಾಜ್ಯ ಅಭಿಯಾನವು ಮನವಿಯಲ್ಲಿ,
೧. ದೀಪಾವಳಿ ಮತ್ತು ಇತರೆ ಹಬ್ಬಗಳು, ಚುನಾವಣೆಗಳು, ಶಾಲಾ ರಜೆಗಳಂತಹ ಸಮಯದಲ್ಲಿ ಖಾಸಗಿ ಬಸ್ ದರಗಳನ್ನು ೩ ರಿಂದ ೫ ಪಟ್ಟು ಹೆಚ್ಚಿಸಲಾಗುತ್ತದೆ. ಖಾಸಗಿ ಬಸ್ ಬಾಡಿಗೆ ಮೇಲೆ ಯಾವುದೇ ಸರಕಾರಿ ನಿಯಂತ್ರಣವಿಲ್ಲ. ರೆಡ್ಬಸ್ನಂತಹ ಅಪ್ಲಿಕೇಶನ್ಗಳು ಟಿಕೆಟ್ ಹೆಸರಿನಲ್ಲಿ ಪ್ರಯಾಣಿಕರಿಂದ ಹೆಚ್ಚಿನ ಹಣವನ್ನು ಸಂಗ್ರಹಿಸುತ್ತವೆ; ಆದರೆ ಅವುಗಳ ಮೇಲೆ ನಿಯಂತ್ರಣ ಹೇರಲು ಯಾವುದೇ ಕಾನೂನು ಇಲ್ಲದ ಕಾರಣ ಈ ಲೂಟಿ ಮುಂದುವರಿಯುತ್ತದೆ.
೨. ಕೇಂದ್ರ ಸರಕಾರವು ರಾಷ್ಟ್ರೀಯ ಕಾನೂನನ್ನು ರಚಿಸಿ ಬಸ್ ಬಾಡಿಗೆಯ ಮಿತಿ, ಆಪ್ ಅಗ್ರಿಗೇಟರ್ಗಳ ಪರವಾನಗಿ ಮತ್ತು ಅವುಗಳ ಕಾರ್ಯನಿರ್ವಹಣೆಯ ಮೇಲೆ ನಿಗಾ ಇಡಬೇಕು.
ಸಂಪಾದಕೀಯ ನಿಲುವುವಾಸ್ತವವಾಗಿ, ಇಂತಹ ಬೇಡಿಕೆಯನ್ನು ರಾಷ್ಟ್ರಪ್ರೇಮಿ ಸಂಘಟನೆಗಳ ಮೇಲೆ ಹಾಕುವ ಪ್ರಸಂಗ ಬರಬಾರದಿತ್ತು. ಸರಕಾರವು ತಾನಾಗಿಯೇ ಕ್ರಮ ಕೈಗೊಳ್ಳುವುದು ಅಪೇಕ್ಷಿತವಾಗಿದೆ ! |
ಕಳೆದ 24 ಗಂಟೆಗಳಲ್ಲಿ ಲವ್ ಜಿಹಾದ್ನ 4 ಮತ್ತು ಮತಾಂತರದ 2 ಘಟನೆಗಳು ಬೆಳಕಿಗೆ! : Love Jihad
ಹಸುವನ್ನು ರಾಷ್ಟ್ರಮಾತೆ ಎಂದು ಘೋಷಿಸಿ! – ಪೂ. ಕಿಶೋರ್ಶಾಸ್ತ್ರಿ ದವೆ : Declare Cow Mother of Nation
೬೦೦ ಮಿಲಿಯನ್ ಲೀಟರ್ ಕೊಳಚೆ ನೀರನ್ನು ನೇರವಾಗಿ ನದಿಗೆ ಬಿಡುತ್ತಿರುವುದರಿಂದ ಪುಣೆ ನಗರದ ನದಿಗಳು ಮಾಲಿನ್ಯದ ಸುಳಿಗೆ!
ಉತ್ತರ ಪ್ರದೇಶ : ಭಗವಾನ್ ಹನುಮಂತನ ಮೂರ್ತಿ ಧ್ವಂಸ ಪ್ರಕರಣದಲ್ಲಿ ಅಸದ್ ವಿರುದ್ಧ ಆರೋಪ
ಮಹಾರಾಷ್ಟ್ರದಲ್ಲಿ ಸಮಾನ ನಾಗರಿಕ ಸಂಹಿತೆಯ ಕರಡು ಸಿದ್ದಪಡಿಸಲಾಗುವುದು! – ಯೋಗೇಶ್ ಕದಮ್, ಗೃಹ ರಾಜ್ಯ ಸಚಿವರು, ಮಹಾರಾಷ್ಟ್ರ
‘ತ್ರಿವಳಿ ತಲಾಖ್’ ಮತ್ತು ‘ಬಹುಪತ್ನಿತ್ವ’ದ ವಿಷಯವಾಗಿ ಮಹಾರಾಷ್ಟ್ರದ ವಿಧಾನಸಭೆಯಲ್ಲಿ ಗದ್ದಲ