ದೇವಸ್ಥಾನದ ಬಳಿ ಯಾರಾದರೂ ಅಹಿಂದೂಗಳು ಪ್ರಸಾದ ಮಾರುತ್ತಿದ್ದರೆ, ಅವರಿಗೆ ಹೊಡೆದು ಪೊಲೀಸರ ವಶಕ್ಕೆ ಒಪ್ಪಿಸಿ! – ಸಾಧ್ವಿ ಪ್ರಜ್ಞಾಸಿಂಗ್ ಅವರ ಕರೆ Sadhvi Pragya Singh

ಭೋಪಾಲ (ಮಧ್ಯಪ್ರದೇಶ) – ದೇವಸ್ಥಾನದ ಆವರಣದಲ್ಲಿ ಪ್ರಸಾದ ಮಾರುವವರ ಮೇಲೆ ನಿಗಾ ಇಡಬೇಕು. ಯಾರಾದರೂ ಅಹಿಂದೂಗಳು ಪ್ರಸಾದ ಮಾರುತ್ತಿರುವುದು ಕಂಡುಬಂದರೆ, ಅವರಿಗೆ ಹೊಡೆದು ಪೊಲೀಸರ ವಶಕ್ಕೆ ಒಪ್ಪಿಸಿ, ಎಂದು ಭಾಜಪ ಮಾಜಿ ಸಂಸದೆ ಸಾಧ್ವಿ ಪ್ರಜ್ಞಾ ಸಿಂಗ್ ಠಾಕೂರ್ ಕರೆ ನೀಡಿದರು. ಅವರು ಇಲ್ಲಿ ವಿಶ್ವ ಹಿಂದೂ ಪರಿಷತ್ತಿನ ಒಂದು ಕಾರ್ಯಕ್ರಮದಲ್ಲಿ ಮಾತನಾಡುತ್ತಿದ್ದರು.

ಹಿಂದೂ ಭಕ್ತರು ಒಂದು ಗುಂಪು ರಚಿಸಿ ದೇವಸ್ಥಾನಗಳ ಆವರಣದಲ್ಲಿ ಪ್ರಸಾದ ಯಾರು ಮಾರುತ್ತಿದ್ದಾರೆ ಎಂಬುದನ್ನು ಪರಿಶೀಲಿಸಲು ಸಾಧ್ವಿ ಪ್ರಜ್ಞಾಸಿಂಗ್ ಠಾಕೂರ್ ಒತ್ತಾಯಿಸಿದರು. ಹಾಗೂ, ‘ಭಕ್ತರು ಇಂತಹ ಮಾರಾಟಗಾರರಿಂದ ಪ್ರಸಾದ ಖರೀದಿಸಬಾರದು. ಅವರಿಗೆ ಅದನ್ನು ಮಾರಲು ಮತ್ತು ದೇವಸ್ಥಾನದೊಳಗೆ ಪ್ರವೇಶಿಸಲು ಅನುಮತಿ ನೀಡಬಾರದು’ ಎಂದು ಅವರು ಕರೆ ನೀಡಿದರು.

ಕುಟುಂಬದ ಸುರಕ್ಷತೆಗಾಗಿ ಮನೆಯಲ್ಲಿ ಶಸ್ತ್ರಾಸ್ತ್ರಗಳನ್ನು ಇಡಿ!

ನಿಮ್ಮ ಮನೆಯಲ್ಲಿ ಶಸ್ತ್ರಾಸ್ತ್ರಗಳನ್ನು ಇಡಿ. ಶತ್ರು ನಿಮ್ಮ ಮನೆಯ ಹೊಸ್ತಿಲನ್ನು ದಾಟಲು ಪ್ರಯತ್ನಿಸಿದರೆ, ಅವರಿಗೆ ಪಾಠ ಕಲಿಸಿ, ಎಂದು ಅವರು ಈ ಸಂದರ್ಭದಲ್ಲಿ ಕರೆ ನೀಡಿದರು. ಪ್ರತಿಯೊಂದು ಮನೆಯಲ್ಲಿ ಶ್ರೀ ದುರ್ಗಾದೇವಿಯ ಮೂರ್ತಿ ಮತ್ತು ಶಸ್ತ್ರಾಸ್ತ್ರಗಳನ್ನು ಇಡಲು ಕರೆ ನೀಡುವುದು, ಇದು ದುರ್ಗಾವಾಹಿನಿಯ (ಹಿಂದೂಗಳ ಒಂದು ಸಂಘಟನೆ) ಕೆಲಸವಾಗಿದೆ ಎಂದು ಹೇಳಿದರು.