ಗೋಡಾ ಹೈ – ಮೈದಾನ್ ಹೈ: ಬನ್ನಿ ಚುನಾವಣೆಯಲ್ಲಿ ರಾಜಕಾರಣ ಮಾಡೋಣ. ನಾಡಹಬ್ಬದ ವಿಚಾರದಲ್ಲಿ ಕೆಟ್ಟ ರಾಜಕಾರಣ ಬೇಡ ! – Karnataka CM Statement

  • ಲೇಖಕಿ ಬಾನು ಮುಷ್ತಾಕ್ ಅವರಿಂದ ಮೈಸೂರು ದಸರಾ ಉತ್ಸವದ ಉದ್ಘಾಟನೆಯನ್ನು ಮಾಡಿಸಿದ ನಂತರ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ಹೇಳಿಕೆ

  • ಇತಿಹಾಸ ತಿರುಚಿ, ಸ್ವಾರ್ಥ ರಾಜಕೀಯ ಮಾಡುವುದು ಅಕ್ಷಮ್ಯ ಅಪರಾಧ

ಮೈಸೂರು – ದಸರಾ ಉತ್ಸವ ಮತ್ತು ನಮ್ಮ ಸಾಂಸ್ಕೃತಿಕ ಹಿರಿಮೆಯ ಪರಿಚಯ ಇಲ್ಲದವರು ಬಾನು ಮುಷ್ತಾಕ್ ಅವರಿಗೆ ವಿರೋಧಿಸಿದ್ದರು. ಇತಿಹಾಸ ತಿರುಚಿ, ಸ್ವಾರ್ಥ ರಾಜಕೀಯ ಮಾಡುವುದು ಅಕ್ಷಮ್ಯ ಅಪರಾಧ. ರಾಜಕಾರಣ ಮಾಡುವುದಿದ್ದರೆ ಚುನಾವಣೆಯಲ್ಲಿ ಮಾಡೋಣ. ನಾಡ ಹಬ್ಬದ ವಿಚಾರದಲ್ಲಿ ಕೆಳ ಮಟ್ಟದ ರಾಜಕಾರಣ ಮಾಡುವುದು ಕ್ಷುಲ್ಲಕ. ಎಂದು ಇಲ್ಲಿನ ದಸರಾ ಮಹೋತ್ಸವದ ಉದ್ಘಾಟನೆಯನ್ನು ಹಿಂದೂದ್ವೇಷಿ ಲೇಖಕಿ ಬಾನು ಮುಷ್ತಾಕ್ ಅವರಿಂದ ಮಾಡಿಸಿದ ನಂತರ ಮುಖ್ಯಮಂತ್ರಿ ಸಿದ್ದರಾಮಯ್ಯ ತಮ್ಮ ಭಾಷಣದಲ್ಲಿ ಹೇಳಿದರು.

ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಮಾತು ಮುಂದುವರೆಸಿ,

೧. ನಾಡಿನ ಬಹುಸಂಖ್ಯಾತ ಸಮುದಾಯ ಬಾನು ಮುಷ್ತಾಕ್ ಅವರಿಂದ ದಸರಾ ಉದ್ಘಾಟಿಸಿರುವುದನ್ನು ಸ್ವಾಗತಿಸಿದೆ. ಇದು ಹೆಮ್ಮೆಯ ಸಂಗತಿ. (ಬಹುಸಂಖ್ಯಾತರು ಮಾತ್ರವಲ್ಲ, ಮುಸ್ಲಿಮರೂ ಇದನ್ನು ಬಹಿರಂಗವಾಗಿ ವಿರೋಧಿಸಿ, ಇದು ಹರಾಮ್ (ಇಸ್ಲಾಂ ಪ್ರಕಾರ ತಪ್ಪು) ಎಂದು ಹೇಳಿದರೂ, ಆ ವಾಸ್ತವವನ್ನು ಸಿದ್ದರಾಮಯ್ಯ ಯಾರು ಸಂತೋಷಪಡಿಸಲು ಪ್ರಯತ್ನಿಸುತ್ತಿದ್ದಾರೆ? – ಸಂಪಾದಕರು)

೨. ಬಾನು ಮುಷ್ತಾಕ್ ಮುಸ್ಲಿಂ ಮಹಿಳೆ ಎನ್ನುವುದಕ್ಕಿಂತ ಮಾನವೀಯ ಮೌಲ್ಯ ಪಾಲಿಸುವ ಮನುಷ್ಯರು.

೩. ಸಂವಿಧಾನದಲ್ಲಿರುವ ಸಹಿಷ್ಣುತೆಯ ಮೌಲ್ಯಗಳನ್ನು ಅನುಸರಿಸುವವರೇ ನಿಜವಾದ ಭಾರತೀಯರಾಗಿದ್ದಾರೆ. (ಭಾರತದಲ್ಲಿ ಯಾರು ಸಹಿಷ್ಣುಗಳು ಎಂಬುದು ಎಲ್ಲರಿಗೂ ತಿಳಿದಿದೆ! – ಸಂಪಾದಕರು) ನಮ್ಮ ಸಂವಿಧಾನ ಜಾತ್ಯತೀತವಾಗಿದೆ. ಇದನ್ನೇ ಹೈಕೋರ್ಟ್- ಸುಪ್ರೀಂಕೋರ್ಟ್ ಎತ್ತಿಹಿಡಿದಿದೆ.

ಸಂಪಾದಕೀಯ ನಿಲುವು

  • ಇತಿಹಾಸವನ್ನು ಯಾರು ತಿರುಚಿದರು? ಸಾವಿರಾರು ಹಿಂದೂಗಳನ್ನು ಕೊಲ್ಲಲಾಗಿದೆ ಎಂಬುದಕ್ಕೆ ಅನೇಕ ಉದಾಹರಣೆಗಳಿದ್ದರೂ, ಟಿಪ್ಪುವನ್ನು ಯಾರು ವೈಭವೀಕರಿಸುತ್ತಿದ್ದಾರೆ? ಕಾಂಗ್ರೆಸ್ ಅನೇಕ ಬಾರಿ ಇತಿಹಾಸವನ್ನು ಬದಲಾಯಿಸಿ ಭಾರತದಲ್ಲಿ ಹಿಂದೂಗಳ ಮೇಲಿನ ದೌರ್ಜನ್ಯ ಮತ್ತು ಹಿಂದೂಗಳ ಶೌರ್ಯಪೂರ್ಣ ಇತಿಹಾಸವನ್ನು ಮುಚ್ಚಿಟ್ಟಿದೆ!
  • ಸಂವಿಧಾನ ಜಾತ್ಯತೀತವಾಗಿದ್ದರೆ, ನೀವು ಜಾತಿ ಗಣತಿ ಏಕೆ ಮಾಡುತ್ತಿದ್ದೀರಿ? ಸ್ವಾರ್ಥಕ್ಕಾಗಿ ಅಹಿಂದೂಗಳನ್ನು ಹಿಂದೂ ಹಬ್ಬಗಳಲ್ಲಿ ಸೇರಿಸಿಕೊಳ್ಳುವ ಇದು ಒಂದು ಪಿತೂರಿ ಎಂದು ಎಲ್ಲರಿಗೂ ತಿಳಿದಿದೆ!