ಬಾಗೇಶ್ವರ ಧಾಮದ ಪಂಡಿತ ಧೀರೇಂದ್ರಕೃಷ್ಣ ಶಾಸ್ತ್ರಿಯವರ ಅಭಿಪ್ರಾಯ

ಛತರಪುರ (ಮಧ್ಯಪ್ರದೇಶ) – ರಾಷ್ಟ್ರಗೀತೆ ಹಾಡುವ ಸಂಪ್ರದಾಯವು ಉತ್ತಮವಾದದ್ದು. ಪ್ರತಿಯೊಂದು ದೇವಸ್ಥಾನ, ಮಸೀದಿ ಮತ್ತು ಚರ್ಚ್ಗಳಲ್ಲಿ ರಾಷ್ಟ್ರಗೀತೆ ಹಾಕಬೇಕು. ಧರ್ಮ ಭಕ್ತಿಯ ಜೊತೆಗೆ ದೇಶಭಕ್ತಿಯೂ ಇರಬೇಕು. ವಾರದಲ್ಲಿ ಕನಿಷ್ಠ ಒಂದು ಬಾರಿಯಾದರೂ ರಾಷ್ಟ್ರಗೀತೆ ಹಾಡಬೇಕು, ಇದರಿಂದ ನಾವು ರಾಷ್ಟ್ರದ ಕರ್ತವ್ಯಗಳಿಗಾಗಿ ಒಟ್ಟಾಗಿ ಇರಬಹುದು, ಎಂದು ಇಲ್ಲಿನ ಬಾಗೇಶ್ವರ ಧಾಮದ ಪಂಡಿತ್ ಧೀರೇಂದ್ರಕೃಷ್ಣ ಶಾಸ್ತ್ರಿ ಹೇಳಿದ್ದಾರೆ. ಅವರು ಇಲ್ಲಿ ಒಂದು ಧಾರ್ಮಿಕ ಕಾರ್ಯಕ್ರಮದಲ್ಲಿ ಮಾತನಾಡುತ್ತಿದ್ದರು.
🇮🇳 “Religious devotion + love for India = true worship. National Anthem in every place of worship!” – Pandit Dhirendra Krishna Shastri #BageshwarDhamSarkar#Navratri@bageshwardham
🎥 Courtesy: @abplive pic.twitter.com/wbnx0O5dXG— Sanatan Prabhat (@SanatanPrabhat) September 20, 2025
ಬೀದಿ ಹಸುಗಳಿಗಾಗಿ ಸರಕಾರ ಪ್ರತಿ ತಾಲೂಕು ಮತ್ತು ಜಿಲ್ಲೆಯಲ್ಲಿ ಗೋಶಾಲೆಗಳನ್ನು ಸ್ಥಾಪಿಸಬೇಕು!
ಬೀದಿ ಹಸುಗಳ ಬಗ್ಗೆ ಪಂಡಿತ ಧೀರೇಂದ್ರಕೃಷ್ಣ ಶಾಸ್ತ್ರಿ ಅವರು ಮಾತನಾಡುತ್ತಾ, ಕೇಂದ್ರ ಮತ್ತು ವಿಶೇಷವಾಗಿ ಮಧ್ಯಪ್ರದೇಶ ಸರಕಾರವು ಹಸುಗಳಿಗಾಗಿ ತಕ್ಷಣವೇ ‘ಅಭಯಾರಣ್ಯ ಯೋಜನೆ’ಯನ್ನು ಜಾರಿಗೆ ತಂದು ಪ್ರತಿ ತಾಲೂಕು ಅಥವಾ ಜಿಲ್ಲೆಯಲ್ಲಿ 5 ಗೋಶಾಲೆಗಳನ್ನು ಸ್ಥಾಪಿಸಬೇಕು ಎಂದು ಹೇಳಿದರು. ಪ್ರತಿ ಗೋಶಾಲೆಯಲ್ಲಿ 5 ರಿಂದ 10 ಸಾವಿರ ಗೋವುಗಳನ್ನು ಇರಿಸುವ ವ್ಯವಸ್ಥೆ ಇರಬೇಕು. ಹೀಗೆ ಮಾಡಿದರೆ ಪ್ರತಿ ಜಿಲ್ಲೆಯ ಸಾವಿರಾರು ಗೋಮಾತೆಗಳು ರಸ್ತೆಗಳಿಂದ ದೂರವಾಗಿ ಆ ಅಭಯಾರಣ್ಯದಲ್ಲಿ ಸುಸ್ಥಿತಿಯಲ್ಲಿ ಇರುತ್ತವೆ.
Muzaffarpur Hospital Fire : ಮುಜಫ್ಫರಪುರ (ಬಿಹಾರ)ದ ಖಾಸಗಿ ಆಸ್ಪತ್ರೆಯಲ್ಲಿ ಸಂಭವಿಸಿದ ಅಗ್ನಿ ದುರಂತದಲ್ಲಿ 4 ಸಾವು, 20ಕ್ಕೂ ಹೆಚ್ಚು ಜನರಿಗೆ ಗಾಯ
90 ವರ್ಷದ ವಯೋವೃದ್ಧ ಅತ್ತೆಯನ್ನು ತನ್ನ ತಲೆಯ ಮೇಲೆ ಹೊತ್ತುಕೊಂಡು ಸವಾರಿ ಮಾಡುತ್ತಾ 84 ಕೋಸು ಪ್ರದಕ್ಷಿಣೆ ಪೂರ್ಣಗೊಳಿಸುತ್ತಿರುವ ಸೊಸೆ!
ಮುಜಫರ್ನಗರದಲ್ಲಿ(ಉತ್ತರ ಪ್ರದೇಶ) ಆಘಾತಕಾರಿ ಘಟನೆ; ಬಾಕಿ ಹಣ ಸಿಗದಿದ್ದಕ್ಕೆ ಜೋಡಿಸಿದ ಮೂಳೆಯನ್ನು ಮುರಿದ ವೈದ್ಯ!
Vande Mataram : ಬಂಗಾಳದ ಮದರಸಾಗಳಲ್ಲಿ ‘ವಂದೇ ಮಾತರಂ’ ಕಡ್ಡಾಯಗೊಳಿಸುವುದಕ್ಕೆ ‘ಆಲ್ ಇಂಡಿಯಾ ಮುಸ್ಲಿಂ ಪರ್ಸನಲ್ ಲಾ ಬೋರ್ಡ್’ ಆಕ್ಷೇಪ
ಕೊಲಕಾತಾ: ಟಿಎಂಸಿ ವಿದ್ಯಾರ್ಥಿ ಸಂಘಟನೆಯ ಕಚೇರಿಯಲ್ಲಿ ಭಾರಿ ನಗದು ಪತ್ತೆ
ಕೊಲಕಾತಾ: ತೃಣಮೂಲ ಕಾಂಗ್ರೆಸ್ನ ಮೇಯರ್ ಫಿರ್ಹಾದ್ ಹಕೀಮ್ ಅವರ ರಾಜೀನಾಮೆ