ದೇಶದ ಪ್ರತಿಯೊಂದು ದೇವಸ್ಥಾನ, ಮಸೀದಿ ಮತ್ತು ಚರ್ಚ್‌ಗಳಲ್ಲಿ ರಾಷ್ಟ್ರಗೀತೆ ಹಾಕಬೇಕು! – ಪಂಡಿತ ಧೀರೇಂದ್ರಕೃಷ್ಣ ಶಾಸ್ತ್ರಿ

ಬಾಗೇಶ್ವರ ಧಾಮದ ಪಂಡಿತ ಧೀರೇಂದ್ರಕೃಷ್ಣ ಶಾಸ್ತ್ರಿಯವರ ಅಭಿಪ್ರಾಯ

ಛತರಪುರ (ಮಧ್ಯಪ್ರದೇಶ) – ರಾಷ್ಟ್ರಗೀತೆ ಹಾಡುವ ಸಂಪ್ರದಾಯವು ಉತ್ತಮವಾದದ್ದು. ಪ್ರತಿಯೊಂದು ದೇವಸ್ಥಾನ, ಮಸೀದಿ ಮತ್ತು ಚರ್ಚ್‌ಗಳಲ್ಲಿ ರಾಷ್ಟ್ರಗೀತೆ ಹಾಕಬೇಕು. ಧರ್ಮ ಭಕ್ತಿಯ ಜೊತೆಗೆ ದೇಶಭಕ್ತಿಯೂ ಇರಬೇಕು. ವಾರದಲ್ಲಿ ಕನಿಷ್ಠ ಒಂದು ಬಾರಿಯಾದರೂ ರಾಷ್ಟ್ರಗೀತೆ ಹಾಡಬೇಕು, ಇದರಿಂದ ನಾವು ರಾಷ್ಟ್ರದ ಕರ್ತವ್ಯಗಳಿಗಾಗಿ ಒಟ್ಟಾಗಿ ಇರಬಹುದು, ಎಂದು ಇಲ್ಲಿನ ಬಾಗೇಶ್ವರ ಧಾಮದ ಪಂಡಿತ್ ಧೀರೇಂದ್ರಕೃಷ್ಣ ಶಾಸ್ತ್ರಿ ಹೇಳಿದ್ದಾರೆ. ಅವರು ಇಲ್ಲಿ ಒಂದು ಧಾರ್ಮಿಕ ಕಾರ್ಯಕ್ರಮದಲ್ಲಿ ಮಾತನಾಡುತ್ತಿದ್ದರು.

ಬೀದಿ ಹಸುಗಳಿಗಾಗಿ ಸರಕಾರ ಪ್ರತಿ ತಾಲೂಕು ಮತ್ತು ಜಿಲ್ಲೆಯಲ್ಲಿ ಗೋಶಾಲೆಗಳನ್ನು ಸ್ಥಾಪಿಸಬೇಕು!

ಬೀದಿ ಹಸುಗಳ ಬಗ್ಗೆ ಪಂಡಿತ ಧೀರೇಂದ್ರಕೃಷ್ಣ ಶಾಸ್ತ್ರಿ ಅವರು ಮಾತನಾಡುತ್ತಾ, ಕೇಂದ್ರ ಮತ್ತು ವಿಶೇಷವಾಗಿ ಮಧ್ಯಪ್ರದೇಶ ಸರಕಾರವು ಹಸುಗಳಿಗಾಗಿ ತಕ್ಷಣವೇ ‘ಅಭಯಾರಣ್ಯ ಯೋಜನೆ’ಯನ್ನು ಜಾರಿಗೆ ತಂದು ಪ್ರತಿ ತಾಲೂಕು ಅಥವಾ ಜಿಲ್ಲೆಯಲ್ಲಿ 5 ಗೋಶಾಲೆಗಳನ್ನು ಸ್ಥಾಪಿಸಬೇಕು ಎಂದು ಹೇಳಿದರು. ಪ್ರತಿ ಗೋಶಾಲೆಯಲ್ಲಿ 5 ರಿಂದ 10 ಸಾವಿರ ಗೋವುಗಳನ್ನು ಇರಿಸುವ ವ್ಯವಸ್ಥೆ ಇರಬೇಕು. ಹೀಗೆ ಮಾಡಿದರೆ ಪ್ರತಿ ಜಿಲ್ಲೆಯ ಸಾವಿರಾರು ಗೋಮಾತೆಗಳು ರಸ್ತೆಗಳಿಂದ ದೂರವಾಗಿ ಆ ಅಭಯಾರಣ್ಯದಲ್ಲಿ ಸುಸ್ಥಿತಿಯಲ್ಲಿ ಇರುತ್ತವೆ.