ನಾಸಿಕ ಸಿಂಹಸ್ಥ ಕುಂಭಮೇಳಕ್ಕಾಗಿ ಮುಖ್ಯಮಂತ್ರಿಗಳ ಅಧ್ಯಕ್ಷತೆಯಲ್ಲಿ ಉನ್ನತ ಸಮಿತಿಯ ಸ್ಥಾಪನೆ

ಮುಂಬಯಿ – 2027 ರಲ್ಲಿ ನಾಸಿಕನಲ್ಲಿ ನಡೆಯಲಿರುವ ಸಿಂಹಸ್ಥ ಕುಂಭಮೇಳದ ನಿಯೋಜನೆ ಮತ್ತು ಪರಿಣಾಮಕಾರಿಯಾಗಿ ಅನುಷ್ಠಾನಗೊಳಿಸಲು ಮುಖ್ಯಮಂತ್ರಿ ದೇವೇಂದ್ರ ಫಡ್ನವೀಸ್ ಅವರ ಅಧ್ಯಕ್ಷತೆಯಲ್ಲಿ ‘ಉನ್ನತ ಸಮಿತಿ’ಯನ್ನು ರಚಿಸಲಾಗಿದೆ. ಇದರಲ್ಲಿ ವಿವಿಧ ಇಲಾಖೆಗಳ ಮಂತ್ರಿಗಳು, ಸಚಿವರು ಮತ್ತು ಸಂಬಂಧಿತ ಆಡಳಿತಾಧಿಕಾರಿಗಳು ಸೇರಿದ್ದಾರೆ. ಸಿಂಹಸ್ಥ ಕುಂಭಮೇಳದ ನಿಯೋಜನಾ ಕರಡು ಪತ್ರಕ್ಕೆ ಅನುಮೋದನೆ ನೀಡುವುದು, ಅನುಷ್ಠಾನದ ಕುರಿತು ಕಾಲಕಾಲಕ್ಕೆ ಪರಿಶೀಲನೆ ಮಾಡುವುದು, ಕಾಮಗಾರಿಗಳ ಗುಣಮಟ್ಟ ಮತ್ತು ಮಾನದಂಡಗಳ ಪಡೆಯುವುದು ಈ ಉನ್ನತ ಸಮಿತಿಯ ಕಾರ್ಯವಿರಲಿದೆ.