ಡೆಹ್ರಾಡೂನ್‌: ಭಯಂಕರ ಮೋಡ ಸ್ಫೋಟ; ಜಲಾವೃತಗೊಂಡ ತಪಕೇಶ್ವರ ದೇವಸ್ಥಾನ

ಡೆಹ್ರಾಡೂನ್ (ಉತ್ತರಾಖಂಡ) – ಸೆಪ್ಟೆಂಬರ್ 15ರ ಮಧ್ಯರಾತ್ರಿ ಸಹಸ್ರಧಾರಾ ಬಳಿ ಮೇಘ ಸ್ಫೋಟ ಸಂಭವಿಸಿದೆ. ಧಾರಾಕಾರ ಮಳೆಯಿಂದಾಗಿ ತಾಮಸಾ ನದಿಯಲ್ಲಿ ಬಂದ ಪ್ರವಾಹದಿಂದಾಗಿ ಇಬ್ಬರು ಕೊಚ್ಚಿ ಹೋಗಿದ್ದಾರೆ ಮತ್ತು ಹಲವು ಅಂಗಡಿಗಳಿಗೆ ಹಾನಿಯಾಗಿದೆ. ರಾಜ್ಯದ 3 ರಾಷ್ಟ್ರೀಯ ಹೆದ್ದಾರಿಗಳು ಬಂದ್ ಆಗಿದ್ದು, 493 ರಸ್ತೆಗಳಲ್ಲಿ ಸಂಚಾರ ಅಸ್ತ್ಯವ್ಯಸ್ತಗೊಂಡಿವೆ. ಮಳೆಯಿಂದಾಗಿ ಹಿಮಾಚಲ ಪ್ರದೇಶದ ಮಂಡಿ ನಗರದಲ್ಲಿರುವ ಧರಂಪುರ ಬಸ್ ನಿಲ್ದಾಣವು ನೀರಿನ ಪ್ರವಾಹದ ಜೊತೆಗೆ ಮಣ್ಣಿನ ಅವಶೇಷಗಳಿಂದ ತುಂಬಿತ್ತು. ಅನೇಕ ಬಸ್‌ಗಳು ಪ್ರವಾಹದಲ್ಲಿ ಕೊಚ್ಚಿ ಹೋಗಿವೆ. ಸಹಸ್ರಧಾರಾದಲ್ಲಿ ಸುಮಾರು 100 ಜನರು ಸಿಲುಕಿಕೊಂಡಿದ್ದಾರೆ. ಅದೇ ರೀತಿ, ತಪಕೇಶ್ವರ ದೇವಸ್ಥಾನವೂ ಸಹ ನೀರಿನಲ್ಲಿ ಮುಳುಗಿದೆ.