ನ್ಯಾಯಾಲಯದ ನಿರಪರಾಧಿ ಬಿಡುಗಡೆಯ ತೀರ್ಪಿನ ವಿರುದ್ಧ ಪ್ರತಿಯೊಬ್ಬರೂ ಮೇಲ್ಮನವಿ ಸಲ್ಲಿಸಲು ಸಾಧ್ಯವಿಲ್ಲ! : Malegaon Bomb Blast case

ಮಾಲೆಗಾಂವ್ ಬಾಂಬ್ ಸ್ಫೋಟ ಪ್ರಕರಣದ ತೀರ್ಪನ್ನು ಪ್ರಶ್ನಿಸಿದವರಿಗೆ ಮುಂಬಯಿ ಉಚ್ಚ ನ್ಯಾಯಾಲಯ ತರಾಟೆಗೆ ತೆಗೆದುಕೊಂಡಿದೆ!

ಮುಂಬಯಿ – 2008ರ ಮಾಲೆಗಾಂವ್ ಬಾಂಬ್ ಸ್ಫೋಟದಲ್ಲಿ ಮೃತಪಟ್ಟ 6 ಜನರ ಸಂಬಂಧಿಕರು, ವಿಶೇಷ ನ್ಯಾಯಾಲಯವು 7 ಜನರನ್ನು ನಿರಪರಾಧಿಗಳೆಂದು ಬಿಡುಗಡೆ ಮಾಡಿದ ತೀರ್ಪನ್ನು ಮುಂಬಯಿ ಉಚ್ಚ ನ್ಯಾಯಾಲಯದಲ್ಲಿ ಪ್ರಶ್ನಿಸಿದರು. ಈ ಏಳು ಜನರನ್ನು ನಿರಪರಾಧಿಗಳೆಂದು ಬಿಡುಗಡೆ ಮಾಡಿದ ವಿಶೇಷ ನ್ಯಾಯಾಲಯದ ತೀರ್ಪನ್ನು ರದ್ದುಪಡಿಸಲು ಅವರು ಒತ್ತಾಯಿಸಿದರು; ಆದರೆ, ಸಂತ್ರಸ್ತರ ಸಂಬಂಧಿಕರು ಈ ಪ್ರಕರಣದಲ್ಲಿ ಸಾಕ್ಷಿಗಳಾಗಿರಲಿಲ್ಲ. ಆದ್ದರಿಂದ, ‘ನಿರಪರಾಧಿಗಳ ಬಿಡುಗಡೆಯ ತೀರ್ಪಿನ ವಿರುದ್ಧ ಪ್ರತಿಯೊಬ್ಬರೂ ಮೇಲ್ಮನವಿ ಸಲ್ಲಿಸಲು ಸಾಧ್ಯವಿಲ್ಲ’ ಎಂದು ಹೇಳುತ್ತಾ, ಮುಂಬಯಿ ಉಚ್ಚ ನ್ಯಾಯಾಲಯವು ಸೆಪ್ಟೆಂಬರ್ 16 ರಂದು ಈ ಬೇಡಿಕೆ ಸಲ್ಲಿಸಿದವರನ್ನು ತರಾಟೆಗೆ ತೆಗೆದುಕೊಂಡಿತು. ‘ಅಪೀಲದಾರರ (ಈ ಬೇಡಿಕೆ ಸಲ್ಲಿಸಿದವರ) ಎಲ್ಲ ವಿವರಗಳನ್ನು ಸಲ್ಲಿಸಬೇಕು’ ಎಂದು ಹೇಳುತ್ತಾ, ನ್ಯಾಯಪೀಠವು ಮುಂದಿನ ವಿಚಾರಣೆಯನ್ನು ಸೆಪ್ಟೆಂಬರ್ 17ಕ್ಕೆ ಮುಂದೂಡಿದೆ.

ಉಚ್ಚ ನ್ಯಾಯಾಲಯದ ಮುಖ್ಯ ನ್ಯಾಯಮೂರ್ತಿ ಚಂದ್ರಶೇಖರ್ ಮತ್ತು ನ್ಯಾಯಮೂರ್ತಿ ಗೌತಮ್ ಎ. ಅಖಂಡ ಅವರ ನ್ಯಾಯಪೀಠದ ಮುಂದೆ ನಿಸಾರ್ ಅಹಮದ್ ಹಾಜಿ ಸಯ್ಯದ್ ಬಿಲಾಲ್, ಶೇಖ್ ಲಿಯಾಕತ್ ಮೊಹಿಯುದ್ದೀನ್, ಶೇಖ್ ಇಶಾಕ್ ಶೇಖ್ ಯೂಸುಫ್, ಉಸ್ಮಾನ್ ಖಾನ್ ಐನುಲ್ಲಾ ಖಾನ್, ಮುಷ್ತಾಕ್ ಶಾ ಹಾರೂನ್ ಶಾ ಮತ್ತು ಶೇಖ್ ಇಬ್ರಾಹಿಮ್ ಶೇಖ್ ಸುಪದೋ ಅವರು ಸವಾಲಿನ ಅರ್ಜಿಯನ್ನು ಸಲ್ಲಿಸಿದ್ದರು.