ಪರಾರಿಯಾದ ಝಾಕಿರ್ ನಾಯಕ್ ಗಂಭೀರ ಅನಾರೋಗ್ಯದಿಂದಾಗಿ ಮಲೇಷ್ಯಾದ ಆಸ್ಪತ್ರೆಗೆ ದಾಖಲು

ಕೌಲಾಲಂಪುರ್ (ಮಲೇಷ್ಯಾ) – ಜಿಹಾದಿ ಭಯೋತ್ಪಾದಕರಿಗೆ ಮಾದರಿ ಎಂದೇ ಪರಿಗಣಿಸಲ್ಪಟ್ಟ ಪರಾರಿಯಾಗಿರುವ ಭಾರತೀಯ ಝಾಕಿರ್ ನಾಯಕ್ ನನ್ನು ಗಂಭೀರ ಅನಾರೋಗ್ಯದಿಂದಾಗಿ ಮಲೇಷ್ಯಾದ ಪೆಟಾಲಿಂಗ್ ಜಯದಲ್ಲಿರುವ ಸನ್ವೇ ವೈದ್ಯಕೀಯ ಕೇಂದ್ರಕ್ಕೆ ದಾಖಲಿಸಲಾಗಿದೆ ಎಂದು ವರದಿಯಾಗಿದೆ. ಝಾಕಿರ್ ಗಂಭೀರ ಮತ್ತು ಬಹುಶಃ ‘ಗುಣಪಡಿಸಲಾಗದ ವೈರಲ್ ಸೋಂಕು’ಗೆ ತುತ್ತಾಗಿದ್ದಾನೆ ಎಂದು ಹೇಳಲಾಗುತ್ತಿದೆ. ಅವನ ಆರೋಗ್ಯಸ್ಥಿತಿಯ ಬಗ್ಗೆ ಅಧಿಕೃತವಾಗಿ ಏನನ್ನೂ ಬಹಿರಂಗ ಪಡಿಸಲಾಗಿಲ್ಲ, ಆದರೂ, ಇದು ಧಾರ್ಮಿಕ, ರಾಜಕೀಯ ಮತ್ತು ರಾಜತಾಂತ್ರಿಕ ಸೂಕ್ಷ್ಮ ವಿಷಯವಾಗಿರುವುದರಿಂದ ಈ ವಿಷಯವನ್ನು ಅತ್ಯಂತ ಗೌಪ್ಯವಾಗಿಡಲಾಗಿದೆ ಎಂದು ಮೂಲಗಳು ತಿಳಿಸಿವೆ. ಆಸ್ಪತ್ರೆ ಆಡಳಿತ ಅಥವಾ ಝಾಕಿರ್ ನ ಕುಟುಂಬದಿಂದ ಇನ್ನೂ ಯಾವುದೇ ಅಧಿಕೃತ ಪ್ರತಿಕ್ರಿಯೆ ಬಂದಿಲ್ಲ.