ಹಣ ವರ್ಗಾವಣೆ’ ಪ್ರಕರಣ; ‘ಇಡಿ’ ಯಿಂದ ಮಾಜಿ ಕ್ರಿಕೆಟಿಗ ಶಿಖರ್ ಧವನ್ ‘ ವಿಚಾರಣೆ!

(ಹಣ ವರ್ಗಾವಣೆ ಎಂದರೆ ಅಕ್ರಮ ಹಣದ ವಹಿವಾಟು)

ನವದೆಹಲಿ – ಭಾರತದ ಮಾಜಿ ಕ್ರಿಕೆಟಿಗ ಶಿಖರ್ ಧವನ್ ಅವರನ್ನು ಸೆಪ್ಟೆಂಬರ್ 4, 2025 ರಂದು ಜಾರಿ ನಿರ್ದೇಶನಾಲಯ (ಇಡಿ) ಕಚೇರಿಗೆ ವಿಚಾರಣೆಗೆ ಕರೆಸಲಾಯಿತು. ‘1 ಎಕ್ಸ್ ಬೆಟ್’ ಎಂಬ ಆನ್‌ಲೈನ್ ಬೆಟ್ಟಿಂಗ್ ಆ್ಯಪ್‌ ಗೆ ಸಂಬಂಧಿಸಿದ ಹಣ ವರ್ಗಾವಣೆ ಪ್ರಕರಣದಲ್ಲಿ ಅವರ ಹೆಸರು ಕೇಳಿಬಂದಿದೆ. ಇಡಿ ಅವರನ್ನು ವಿಚಾರಣೆಗಾಗಿ ಕರೆಸಿಕೊಂಡು ಸಹಕರಿಸಲು ತಿಳಿಸಿದೆ.

ಭಾರತದಲ್ಲಿ ಬೆಟ್ಟಿಂಗ್ ಕಾನೂನು ಬಾಹಿರವಾಗಿದೆ, ಆದರೆ ‘1 ಎಕ್ಸ್ ಬೆಟ್’ ಸಾಮಾಜಿಕ ಮಾಧ್ಯಮ ಮತ್ತು ಜಾಹೀರಾತುಗಳ ಮೂಲಕ ಜನರನ್ನು ಬೆಟ್ಟಿಂಗ್ ಮಾಡಲು ಪ್ರೇರೇಪಿಸಿದೆ. ಈ ಆ್ಯಪ್‌ ನ ಜಾಹೀರಾತಿನಲ್ಲಿ ಭಾರತದ ಕ್ರಿಕೆಟಿಗರು ಭಾಗಿಯಾಗಿದ್ದಾರೆ ಎಂದು ಆರೋಪಿಸಲಾಗಿದೆ. ಈ ಪ್ರಕರಣದಲ್ಲಿ ಶಿಖರ್ ಧವನ್ ಕೂಡ ಸೇರಿದ್ದಾರೆ. ಧವನ್ ಅವರಿಗಿಂತ ಮೊದಲು, ಯುವರಾಜ್ ಸಿಂಗ್, ಸುರೇಶ್ ರೈನಾ ಮತ್ತು ಹರ್ಭಜನ್ ಸಿಂಗ್ ಅವರನ್ನೂ ಕೂಡ ಇದೇ ಪ್ರಕರಣದಲ್ಲಿ ವಿಚಾರಣೆ ಮಾಡಲಾಗಿದೆ.

ಸಂಪಾದಕೀಯ ನಿಲುವು

ಹಣದ ದುರಾಸೆಗಾಗಿ ನೈತಿಕತೆಯನ್ನು ತ್ಯಾಗ ಮಾಡುವ ಕ್ರಿಕೆಟಿಗರು ಯುವಕರ ಮುಂದೆ ಏನು ಆದರ್ಶ ಸ್ಥಾಪಿಸುವರು?